ನೈರುತ್ಯ ಬಂಗಾಳಕೊಲ್ಲಿಯಲ್ಲಿ ಪ್ರಬಲ ವಾಯುಭಾರ ಕುಸಿತದ ಬಳಿಕ ರಾಜ್ಯದಲ್ಲಿ ವರುಣನ ಆರ್ಭಟಕ ಇಲ್ಲದಂತಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಕೊಡುಗು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ, ಶೀತಗಾಳಿ ಹಾಗೂ ಚಳಿಯ ವಾತಾವರಣ ಇರಲಿದೆ.
ರಾಜಧಾನಿಯಲ್ಲಿಂದು ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಡುಪಿಯಲ್ಲಿ ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರು ಹಾಗೂ ಕಾರವಾರದಲ್ಲಿ ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಮನಗರ ಜಿಲ್ಲೆಯಲ್ಲಿ ಅತ್ಯಂತ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಗರಿಷ್ಠ 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-16
ಮಂಗಳೂರು: 33-24
ಶಿವಮೊಗ್ಗ: 33-17
ಬೆಳಗಾವಿ: 33-18
ಮೈಸೂರು: 29-16
ಮಂಡ್ಯ: 30-16
ಮಡಿಕೇರಿ: 28-13
ರಾಮನಗರ: 19-8
ಹಾಸನ: 29-15
ಚಾಮರಾಜನಗರ: 29-16
ಚಿಕ್ಕಬಳ್ಳಾಪುರ: 27-14
ಕೋಲಾರ: 28-16
ತುಮಕೂರು: 30-16
ಉಡುಪಿ: 34-23
ಕಾರವಾರ: 33-24
ಚಿಕ್ಕಮಗಳೂರು: 29-15
ದಾವಣಗೆರೆ: 33-18
ಹುಬ್ಬಳ್ಳಿ: 33-18
ಚಿತ್ರದುರ್ಗ: 31-18
ಹಾವೇರಿ: 34-18
ಬಳ್ಳಾರಿ: 33-19
ಗದಗ: 33-19
ಕೊಪ್ಪಳ: 33-19
ರಾಯಚೂರು: 33-19
ಯಾದಗಿರಿ: 34-19
ವಿಜಯಪುರ: 33-19
ಬೀದರ್: 31-18
ಕಲಬುರಗಿ: 33-19
ಬಾಗಲಕೋಟೆ: 34-19