ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್ ಅವರನ್ನು ಧಾಕಡ್ ಸೋಲು ನಿದ್ದೆಗೆಡಿಸಿದೆ. ಅವರ ವೃತ್ತಿ ಜೀವನದಲ್ಲೇ ಇಂಥದ್ದೊಂದು ಸೋಲು ನೋಡಿರಲಿಲ್ಲ ಎಂದು ಬಣ್ಣಿಸಲಾಗುತ್ತಿದೆ. ಹಾಕಿದ ಬಂಡವಾಳವಲ್ಲ, ಕಂಗನಾ ರಣಾವತ್ ಅವರಿಗೆ ಖರೀದಿಸಿದ್ದ ಕಾಸ್ಟ್ಯೂಮ್ ಹಣವೂ ವಾಪಸ್ಸು ಬಂದಿಲ್ಲವೆಂದು ಬಾಲಿವುಡ್ ಬಾಕ್ಸ್ ಆಫೀಸ್ ಅಣಕವಾಡುತ್ತಿದೆ.
ಧಾಕಡ್ ಸೋಲನ್ನು ಒಪ್ಪಿಕೊಂಡಂತಿರುವ ಕಂಗನಾ, ಅದರಿಂದ ಆಚೆ ಬರುವುದಕ್ಕೆ ತಮ್ಮದೇ ನಿರ್ದೇಶನದ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಘೋಷಣೆ ಆಗಿರುವ ‘ಎಮರ್ಜೆನ್ಸಿ’ ಸಿನಿಮಾಗೆ ಅವರು ಚಾಲನೆ ನೀಡಿದ್ದಾರೆ. ಜೊತೆಗೆ ಈ ಸಿನಿಮಾದ ಬಗ್ಗೆ ಸಾಕಷ್ಟು ಎಚ್ಚರಿಕೆ ತಗೆದುಕೊಂಡು ಆಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ
ಧಾಕಡ್ ಸೋಲಿಗೆ ನಾನಾ ಕಾರಣಗಳನ್ನು ಕೊಡಬಹುದು. ಆದರೆ, ಎಮರ್ಜೆನ್ಸಿ ಏನಾದರೂ ಕೈ ಹಿಡಿಯದೇ ಹೋದರೆ, ಎಲ್ಲ ಜವಾಬ್ದಾರಿಯನ್ನೂ ಒಬ್ಬರೇ ಹೊರಬೇಕು. ಹಾಗಾಗಿ ಶೂಟಿಂಗ್ ಮುನ್ನವೇ ಎಲ್ಲ ರೀತಿಯ ತಯಾರಿ ಮಾಡಿಕೊಂಡೇ ಅಖಾಡಕ್ಕೆ ಇಳಿಯಲಿದ್ದಾರಂತೆ. ಸ್ಕ್ರಿಪ್ಟ್, ತಾರಾಗಣ ಆಯ್ಕೆ, ಗೆಲುವಿಗೆ ಬೇಕಾದ ಸಿದ್ಧ ಸೂತ್ರಗಳನ್ನು ಮುಂದಿಟ್ಟುಕೊಂಡೇ ಈ ಬಾರಿ ಸಿನಿಮಾ ಮಾಡುತ್ತಾರಂತೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ
ಅಂದಹಾಗೆ ಎಮರ್ಜೆನ್ಸಿ ಹೊಸ ಬಗೆಯ ಸಿನಿಮಾವಂತೆ. ಈ ಸಿನಿಮಾದ ಟೈಟಲ್ ಕೇಳಿದಾಕ್ಷಣ ಇದು ಇಂದಿರಾ ಗಾಂಧಿ ಅವರ ಕುರಿತಾದ ಚಿತ್ರವಾ ಎನ್ನುವ ಅನುಮಾನ ಮೂಡುವುದು ಸಹಜ. ಇದು ಅವರ ಕುರಿತಾದ ಚಿತ್ರವಲ್ಲ ಎಂದು ಈಗಾಗಲೇ ಕಂಗನಾ ಹೇಳಿದ್ದಾರೆ. ಆದರೆ, ಎಮರ್ಜೆನ್ಸಿ ವೇಳೆಯ ಮೂಡ್ ಅನ್ನು ಈ ಚಿತ್ರ ಕಟ್ಟಿಕೊಡಲಿದೆಯಂತೆ.