ಜೈಪುರ: ಕರ್ನಾಟಕದಲ್ಲಿ ಹಿಂದುತ್ವ ರಾಜಕಾರಣ ನಡೆಯುತ್ತಿದ್ದರೆ, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಮುಸ್ಲಿಮರ ಓಲೈಕೆ ಪಾಲಿಟಿಕ್ಸ್ ನಡೆಯುತ್ತಿದೆ. ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಆದೇಶವೊಂದು ವಿವಾದಕ್ಕೆ ಕಾರಣವಾಗಿದೆ.
ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಜೋಧ್ಪುರ ಡಿಸ್ಕಾಮ್ ಆದೇಶ ಹೊರಡಿಸಿದೆ. ಉಪವಾಸ ಇರುವ ಮುಸ್ಲಿಮರಿಗೆ ಬಿಸಿಲ ಬೇಗೆಯಿಂದ ಯಾವುದೇ ತೊಂದರೇ ಆಗಬಾರದು. ಹೀಗಾಗಿ ಎಲ್ಲೆಡೆ ಇಡೀ ತಿಂಗಳು ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಬೇಕು ಎಂದು ಸುತ್ತೋಲೆ ಕಳಿಸಿದೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಹಾಕಲು ಲೌಡ್ ಸ್ಪೀಕರ್- ಬಿಜೆಪಿ ನಾಯಕನ ಆಫರ್
ರಾಜಸ್ಥಾನ ಸರ್ಕಾರದ ಈ ಆದೇಶಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅತ್ತ ದಕ್ಷಿಣ ದೆಹಲಿಯಲ್ಲಿ ನವರಾತ್ರಿ ಪ್ರಯುಕ್ತ ಏಪ್ರಿಲ್ 14ರವರೆಗೂ ಮಾಂಸದಂಗಡಿ ಬಂದ್ ಮಾಡಲಾಗಿದೆ. ಆದರೆ ಮಾಂಸವೇನು ಅಪವಿತ್ರ ಅಲ್ಲ, ಅದು ಆಹಾರ ಅಷ್ಟೇ. ಇಷ್ಟ ಇದ್ದವರು ತಿಂತಾರೆ. ಇಷ್ಟವಿಲ್ಲದವರು ತಿನ್ನಲ್ಲ. ಯಾಕೆ ಮಾಂಸದಂಗಡಿ ಬಂದ್ ಮಾಡಬೇಕು ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಇತ್ತ ಮಹಾರಾಷ್ಟ್ರದಲ್ಲೂ ಮೈಕ್ ದಂಗಲ್ ಜೋರಾಗಿದೆ. ದೇಗುಲಗಳಲ್ಲಿ ಹನುಮಾನ್ ಚಾಲೀಸಾ ಹಾಕಲು ಉಚಿತವಾಗಿ ಲೌಡ್ ಸ್ಪೀಕರ್ ಒದಗಿಸಲು ಸಿದ್ಧ ಎಂದು ಮಹಾರಾಷ್ಟ್ರದ ಬಿಜೆಪಿಯ ಧನಿಕ ನಾಯಕ ಮೋಹಿತ್ ಕಂಬೋಜ್ ಘೋಷಿಸಿದ್ದಾರೆ. ಇದನ್ನೂ ಓದಿ: ರಂಜಾನ್ ಸಮಯದಲ್ಲಿ ಮಧುಮೇಹ ನಿರ್ವಹಣೆ ಹೇಗೆ?