ನವದೆಹಲಿ: ರಾಜಸ್ಥಾನದ ಜೈಪುರ ಮೂಲದ ಆಭರಣ ತಯಾರಿಕೆ ಮತ್ತು ರಫ್ತು ಸಮೂಹವೊಂದರ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ದಾಳಿ ನಡೆಸಿ 500 ಕೋಟಿ ರೂ. ಕಪ್ಪು ಹಣ ವಶಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ತೆರಿಗೆ ವಂಚಿಸಿದ ಕಂಪನಿ ಯಾವುದು ಎಂದು ಇನ್ನೂ ಬಹಿರಂಗವಾಗಿಲ್ಲ. ದೇಶಾದ್ಯಂತ ಏಕಕಾಲದಲ್ಲಿ 50 ಕಡೆ ನಡೆದ ದಾಳಿಯಲ್ಲಿ ತೆರಿಗೆ ವಂಚಿಸಿದ ಹಣ ಪತ್ತೆಯಾಗಿದೆ.
ದಾಳಿ ವೇಳೆ 4 ಕೋಟಿ ರೂ. ನಗದು ಹಾಗೂ 9 ಕೋಟಿ ರೂ. ಮೌಲ್ಯದ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಅನೇಕ ದಾಖಲೆ ಪತ್ರಗಳು ದೊರೆತಿದೆ. ಕಂಪನಿಯವರು 72 ಕೋಟಿ ರೂ.ನಷ್ಟು ಹಣಕ್ಕೆ ತೆರಿಗೆ ಪಾವತಿಸದೆ ವಂಚಿಸಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ ತೀರ್ಮಾನಕ್ಕೆ ಬದ್ಧ: ಎಸ್.ಆರ್ ವಿಶ್ವನಾಥ್
ಆಫ್ರಿಕನ್ ದೇಶದಿಂದ ಈ ಕಂಪನಿ ಕಚ್ಚಾ ರೂಪದ ಅಮೂಲ್ಯ ಆಭರಣ ಹರಳುಗಳನ್ನು ತಂದು ಜೈಪುರದಲ್ಲಿ ಸಂಸ್ಕರಣೆ ಮಾಡುತ್ತಿತ್ತು. ಅದರಿಂದ ಬಂದ ಆದಾಯವನ್ನು ಬಚ್ಚಿಡುತ್ತಿತ್ತು ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಅಮ್ಮ, ಮಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ಯಾಂಗ್