ಮುಂಬೈ: ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ (Australia) ವಿರುದ್ಧ 2ನೇ ಟಿ20 ಪಂದ್ಯ ಇಂದು ನಡೆಯಲಿದ್ದು, ಭಾರತ (India) ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಲು ಎದುರು ನೋಡುತ್ತಿದೆ.
ಐಸಿಸಿ ಟಿ20 ವಿಶ್ವಕಪ್ಗೆ (T20 WorldCup) ಕೇವಲ ಒಂದು ತಿಂಗಳು ಬಾಕಿ ಇರುವ ಹೊತ್ತಿನಲ್ಲಿ ಟೀಂ ಇಂಡಿಯಾಕ್ಕೆ (Team India) ಕಳಪೆ ಬೌಲಿಂಗ್ ಸಮಸ್ಯೆ ತಲೆನೋವಾಗಿದೆ. ಬೌಲಿಂಗ್ ಸಮಸ್ಯೆ ಎದುರಿಸುತ್ತಿರುವ ಟೀಂ ಇಂಡಿಯಾ ತಂಡಕ್ಕೆ ಮುಂಚೂಣಿ ವೇಗಿ ಜಸ್ಪ್ರೀತ್ ಬೂಮ್ರಾ (Jasprit Bumrah) ಈ ಪಂದ್ಯದಲ್ಲಿ ವಾಪಸಾಗುತ್ತಿದ್ದಾರೆ. ಈ ಮೂಲಕ ಸಮಸ್ಯೆಗೆ ಪರಿಹಾರ ಹುಡುಕಿಕೊಡುವ ನಿರೀಕ್ಷೆ ಮೂಡಿಸಿದ್ದಾರೆ. ಇದನ್ನೂ ಓದಿ: ಇನ್ಸ್ಟಾಗ್ರಾಮ್ ಸರ್ವರ್ ಡೌನ್ – ಫೋಟೋ, ವೀಡಿಯೋ ಅಪ್ಲೋಡ್ ಮಾಡಲಾಗದೇ ಜನರ ಪರದಾಟ
ಇಂಗ್ಲೆಂಡ್ ಪ್ರವಾಸದ ಬಳಿಕ ಗಾಯದ ಸಮಸ್ಯೆಯಿಂದಾಗಿ ಬೂಮ್ರಾ (Jasprit Bumrah) ತಂಡದಿಂದ ಹೊರಗುಳಿದಿದ್ದರು. ಏಷ್ಯಾಕಪ್ಗೂ ಲಭ್ಯವಿರಲಿಲ್ಲ. ಇನ್ನೂ ಏಷ್ಯಾಕಪ್ (Aisa Cup) ಪಂದ್ಯದ ವೇಳೆ ಗಾಯದ ಸಮಸ್ಯೆಗೆ ಒಳಗಾದ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ಸಹ ಪಂದ್ಯದಿಂದ ಹೊರಗುಳಿಯುವಂತಾಯಿತು. ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬೂಮ್ರಾರನ್ನು ಕಣಕ್ಕಿಳಿಸದೇ ಇದ್ದಿದ್ದು ಅವರ ಫಿಟ್ನೆಸ್ ಬಗ್ಗೆ ಅನುಮಾನ ಮೂಡಿಸಿತ್ತು. ಆದರೆ ನಾಯಕ ರೋಹಿತ್, ಬುಮ್ರಾ 2ನೇ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ T20: ಟಿಕೆಟ್ಗಾಗಿ ಮುಗಿಬಿದ್ದ ಜನ – ಲಾಠಿ ಚಾರ್ಜ್, ನಾಲ್ವರಿಗೆ ಗಾಯ
ಹಾರ್ದಿಕ್ ಪಾಂಡ್ಯ (Hardik Pandya) ಸೇರಿದಂತೆ ಐವರು ಬೌಲರ್ಗಳ ಕಾರ್ಯತಂತ್ರ ಟೀಂ ಇಂಡಿಯಾ ಕೈಹಿಡಿಯುತ್ತಿಲ್ಲ. ಅದರಲ್ಲೂ ಬೌಲಿಂಗ್ಪಡೆ ಮುನ್ನಡೆಸಿದ್ದ ಭುವನೇಶ್ವರ್ ಕುಮಾರ್ ಅವರನ್ನೇ ಎದುರಾಳಿಗಳು ಚೆಂಡಾಡುತ್ತಿದ್ದಾರೆ. ಏಷ್ಯಾಕಪ್ ಸೇರಿದಂತೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲೂ ಅವರು ಎಸೆದ 19ನೇ ಓವರ್ನಲ್ಲಿ ಭಾರೀ ರನ್ಗಳನ್ನೇ ಚಚ್ಚಿಸಿಕೊಂಡಿದ್ದಾರೆ. ಇದೀಗ ಬೂಮ್ರಾ, ಆಗಮನದಿಂದ ಬೌಲಿಂಗ್ ಸಂಯೋಜನೆಯಲ್ಲಿ ಬದಲಾವಣೆ ಸರಿ ಮಾಡಬಹುದಾಗಿದೆ.
ಇಂದು ವಿದರ್ಭಾ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಆಸಿಸ್ ವಿರುದ್ಧ 2ನೇ ಟಿ20 ನಡೆಯಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಎಡವಿದರೆ ಸರಣಿ ಗೆಲುವಿನ ಕನಸು ಭಗ್ನವಾಗಲಿದೆ.
Live Tv