ಮಂಡ್ಯ: ನನಗೆ ವಯಸ್ಸು ಆಗಿಲ್ಲ, ಕೈ ಹಿಡಿದುಕೊಳ್ಳಬೇಡಪ್ಪಾ ಎಂದು ಕಾಂಗ್ರೆಸ್ ಮುಖಂಡನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ ಹಾಸ್ಯ ಪ್ರಸಂಗ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರು ಸಮೀಪದ ಶಿವಪುರದಲ್ಲಿ ಇಂದು 137ನೇ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆಯ ಭಾಗಿವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಡವಾಗಿ ಸಿದ್ದರಾಮಯ್ಯ ಅವರು ಆಗಮಿಸಿದ್ದರು.
ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಅವರು ಬರುತ್ತಿರುವುದನ್ನು ಕಂಡು ಕೈ ಹಿಡಿದು ಕರೆದುಕೊಂಡು ಹೋಗಲು ಬರುತ್ತಾರೆ. ಅದಕ್ಕೆ ಸಿದ್ದರಾಮಯ್ಯ ಅವರು ಕೈ ಬಿಡಿಸಿಕೊಂಡು, ಕೈ ಹಿಡಿದುಕೊಳ್ಳಬೇಡಪ್ಪಾ. ನಡೆಯೋಕೆ ಆಗಲ್ಲ ಅಂದುಕೊಳ್ಳುತ್ತಾರೆ. ಜನ ನನಗೆ ವಯಸ್ಸು ಆಗಿದೆ ಅಂದುಕೊಳ್ಳುತ್ತಾರೆ ಎಂದು ತಮಾಷೆ ಮಾಡಿದರು.
ನಂತರ ಅವರು ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲ ಗಣ್ಯರನ್ನು ಮಾತನಾಡಿಸಿ ಡಿಕೆ ಶಿವಕುಮಾರ್ ಅವರ ಬಳಿ ಹೋಗಿ ಕುಳಿತುಕೊಳ್ಳುತ್ತಾರೆ. ಈ ವೇಳೆ ಡಿಕೆಶಿ ಅವರು ಸಹ ಸಿದ್ದರಾಮಯ್ಯ ಅವರ ಕಾಲೆಳೆದರು.