ಯಾದಗಿರಿ: ಮಕ್ಕಳಾಗದ್ದಕ್ಕೆ ಪತ್ನಿಗೆ ಪೇದೆ ಪತಿ ವಿಷ ಕೊಟ್ಟು ಸಾಯಿಸಿದ ಅಮಾನವೀಯ ಘಟನೆ ಯಾದಗಿರಿಯ ಗ್ರಾಮೀಣ ಠಾಣೆಯ ಪೊಲೀಸ್ ವಸತಿ ಗೃಹದಲ್ಲಿ ನಡೆದಿದೆ.
ಈ ಘಟನೆ ಭಾನುವಾರ ನಡೆದಿದ್ದು, ಸೋಮವಾರ ಪತ್ನಿ ಹಣಮಂತಿ ಚಿಕಿತ್ಸೆ ಫಲಕಾರಿಯಾಗದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
- Advertisement 2
- Advertisement 3
ನಡೆದಿದ್ದೇನು?: ಯಾದಗಿರಿಯ ಕಿಲ್ಲನಕೇರಾ ಗ್ರಾಮದ ನಿವಾಸಿ ಹಾಗೂ ಯಾದಗಿರಿ ನಗರ ಠಾಣೆ ಪೊಲೀಸ್ ಪೇದೆಯಾದ ಮಹೇಂದ್ರ ಹಾಗೂ ರಾಯಚೂರನ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ನಿವಾಸಿ ಹಣಮಂತಿಗೆ 8 ವರ್ಷದ ಹಿಂದೆ ಮದುವೆಯಾಗಿತ್ತು. ಆದ್ರೆ ಈವರೆಗೂ ಮಕ್ಕಳಾಗಿರಲಿಲ್ಲ. ಹೀಗಾಗಿ ಪೇದೆ ಮಹೇಂದ್ರ ಪತ್ನಿ ಹಣಮಂತಿ ಜೊತೆ ಜಗಳವಾಡುತ್ತಿದ್ದನು. ಅಲ್ಲದೇ ಬೇರೆ ಮದುವೆಯಾಗುವುದಾಗಿ ಪ್ರಸ್ತಾಪ ಮಾಡಿದ್ದನು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ಜಗಳವಾಗುತ್ತಿತ್ತು. ಇದರಿಂದ ಸಿಟ್ಟುಗೊಂಡ ಪತಿ ಮಹೇಂದ್ರ ಪತ್ನಿಗೆ ವಿಷ ಕೊಟ್ಟಿದ್ದಾನೆ. ವಿಷ ಸೇವಿಸಿದ ಪರಿಣಾಮ ಹಣಮಂತಿ ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲೇ ಮೃತಪಟ್ಟದ್ದಾರೆ.
- Advertisement 4
ಪತ್ನಿ ಸಾವಿನ ಬಳಿಕ ಮಹೇಂದ್ರ ಪರಾರಿಯಾಗಿದ್ದಾನೆ. ಇದೀಗ ಹಣಮಂತಿ ಪೋಷಕರು ನಗರ ಠಾಣೆಯಲ್ಲಿ ಕೊಲೆಯ ಬಗ್ಗೆ ದೂರು ನೀಡಿದ್ದು, ಘಟನೆ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.