Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೇಂದ್ರದಿಂದ ಬಂದ ನೆರೆ ಪರಿಹಾರ ಎಷ್ಟು? – ರಾಜ್ಯ ಸರಕಾರಕ್ಕೆ ಇಲ್ಲ ಸ್ಪಷ್ಟತೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕೇಂದ್ರದಿಂದ ಬಂದ ನೆರೆ ಪರಿಹಾರ ಎಷ್ಟು? – ರಾಜ್ಯ ಸರಕಾರಕ್ಕೆ ಇಲ್ಲ ಸ್ಪಷ್ಟತೆ

Bengaluru City

ಕೇಂದ್ರದಿಂದ ಬಂದ ನೆರೆ ಪರಿಹಾರ ಎಷ್ಟು? – ರಾಜ್ಯ ಸರಕಾರಕ್ಕೆ ಇಲ್ಲ ಸ್ಪಷ್ಟತೆ

Public TV
Last updated: January 8, 2020 10:13 am
Public TV
Share
2 Min Read
blg flood
SHARE

ಬೆಂಗಳೂರು: ಮೊನ್ನೆ ಕೇಂದ್ರ ಸರಕಾರವು ರಾಜ್ಯದ ನೆರೆ ಪರಿಸ್ಥಿತಿಗೆ ಘೋಷಿಸಿದ ಪರಿಹಾರ ಮೊತ್ತ 1869 ಕೋಟಿ ರೂಪಾಯಿಯೇ ಅಥವಾ 669 ಕೋಟಿ ರೂಪಾಯಿಯೇ? ಇಂಥದ್ದೊಂದು ಗೊಂದಲ ಈಗ ರಾಜ್ಯ ಸರಕಾರಕ್ಕೆ ಕಾಡುತ್ತಿದೆ. ಕೇಂದ್ರ ಸರಕಾರ ಎನ್‌ಡಿಆರ್‌ಎಫ್‌ ಅಡಿ ಘೋಷಿಸಿದ ಎರಡನೇ ಕಂತಿನ ಪರಿಹಾರ ಮೊತ್ತ ಕುರಿತು ಯಾವುದೇ ಸ್ಪಷ್ಟತೆ ಕೊಡದಿರವುದರಿಂದ ಈ ಗೊಂದಲ ಸೃಷ್ಟಿಯಾಗಿದೆ.

ಕಳೆದ ವರ್ಷದ ಆಗಸ್ಟ್ ನಲ್ಲಿ ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉದ್ಭವಿಸಿ ಸುಮಾರು 22 ಜಿಲ್ಲೆಗಳಲ್ಲಿ ಸಾಕಷ್ಟು ಪ್ರಾಣ, ಆಸ್ತಿ, ಬೆಳೆ ನಷ್ಟ ಉಂಟಾಗಿತ್ತು. ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಸುಮಾರು 38 ಸಾವಿರ ಕೋಟಿ ರೂ ನಷ್ಟ ಪರಿಹಾರ ಕೊಡಬೇಕೆಂದು ವರದಿ ಸಲ್ಲಿಸಿತ್ತು. ರಾಜ್ಯದ ಮನವಿ ಬಂದ ಬಹಳ ದಿನಗಳವರೆಗೂ ಕಾಯಿಸಿದ ಕೇಂದ್ರ ಸರಕಾರ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಮೊದಲ ಕಂತಿನ ರೂಪದಲ್ಲಿ 1,200 ರೂ ಪರಿಹಾರ ಮೊತ್ತ ನೀಡಿತ್ತು. ಇದೀಗ ಮತ್ತೆ ಸರಿಸುಮಾರು ಅಷ್ಟೇ ಕಾಲಾವಕಾಶ ತಡೆದು ಎರಡನೇ ಕಂತಿನ ಪರಿಹಾರ ಮೊತ್ತವನ್ನು ಘೋಷಣೆ ಮಾಡಿದೆ.

flood

ಕೇಂದ್ರದ ಈ ಬಾರಿಯ ಪರಿಹಾರ ಮೊತ್ತ ಎಷ್ಟು ಅನ್ನುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟತೆ ಸಿಗುತ್ತಿಲ್ಲ. ಈಗಿನ ಪರಿಹಾರ ಮೊತ್ತ ಪ್ರತ್ಯೇಕವಾಗಿ ಘೋಷಿಸಲ್ಪಟ್ಟ 1,869 ಕೋಟಿಯೋ ಅಥವಾ ಮೊದಲ ಕಂತಿಗೆ ಸೇರ್ಪಡೆ ಮಾಡಲ್ಪಟ್ಟು ಘೋಷಣೆಯಾದ 1,869 ಕೋಟಿಯೋ ಎನ್ನುವುದರ ಕುರಿತು ಯಾವುದೇ ಸಮಜಾಯಿಷಿ ದೊರಕುತ್ತಿಲ್ಲ. ಮೊದಲ ಕಂತು ಮತ್ತು ಎರಡನೇ ಕಂತುಗಳಲ್ಲಿ ನೀಡಿದ ಪರಿಹಾರ ಮೊತ್ತ ಪ್ರತ್ಯೇಕ ಎನ್ನುವುದಾದರೆ, ಎರಡೂ ಒಟ್ಟು ಸೇರಿಸಿ ಒಟ್ಟು 3,069 ಕೋಟಿ ರೂ ಪರಿಹಾರ ರಾಜ್ಯಕ್ಕೆ ಬಂದಂತಾಗುತ್ತದೆ. ಆದರೆ ಮೊದಲ ಕಂತಿಗೆ ಸೇರಿಸಲ್ಪಟ್ಟು ಎರಡನೇ ಕಂತು ಬಿಡುಗಡೆ ಮಾಡಿದ್ದರೆ, ಆಗ ಎರಡನೇ ಕಂತಿನ ಪರಿಹಾರ ಮೊತ್ತ ಕೇವಲ 669 ಕೋಟಿ ರೂ. ಆಗಲಿದೆ. ಇದರಲ್ಲಿ ಸ್ಪಷ್ಟತೆ ಸಿಗುತ್ತಿಲ್ಲದಿರುವುದರಿಂದ ರಾಜ್ಯದ ಅಧಿಕಾರಿವರ್ಗ ಗೊಂದಲದಲ್ಲಿದೆ. ಎರಡನೇ ಕಂತಿನ ಪರಿಹಾರ ಮೊತ್ತ ಎಷ್ಟು ಎನ್ನುವುದರ ಬಗ್ಗೆ ಸ್ಪಷ್ಟತೆಯನ್ನು ಕೇಂದ್ರ ಸರ್ಕಾರದ ಬಳಿಯೇ ಕೇಳಿ ಬಗೆಹರಿಸಿಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ ಎನ್ನಲಾಗಿದೆ.

ಮುಖ್ಯಮಂತ್ರಿ @BSYBJP ಗೋಗರೆತಕ್ಕೆ ಕರಗಿದ @narendramodi
ರೂ.669.85 ಕೋಟಿ ಹೆಚ್ಚುವರಿ ನೆರೆಪರಿಹಾರ ದಯಪಾಲಿಸಿದ್ದು,
ಒಟ್ಟು ಪರಿಹಾರ
ರೂ.1869.85 ಆಗುತ್ತೆ.

ಸುಳ್ಳು ದೇವರ ಭಕ್ತರಾದ ಬಿಜೆಪಿ ನಾಯಕರು ಪರಿಹಾರದ ಮೊತ್ತ 1200+1869.85=ರೂ.3069 ಕೋಟಿ ಎಂದು ಹೇಳಿ ಸಂಭ್ರಮಿಸುತ್ತಿರುವುದು ತಮಾಷೆಯಾಗಿದೆ.
1/3

— Siddaramaiah (@siddaramaiah) January 7, 2020

ಈ ಗೊಂದಲ ಮತ್ತು ಅನುಮಾನಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಯೂ ಪುಷ್ಟಿ ಕೊಟ್ಟಿದೆ. ಕೇಂದ್ರ ಸರಕಾರ ಎರಡನೇ ಕಂತಿನಲ್ಲಿ ಬಿಡುಗಡೆ ಮಾಡಲಿರುವ ಪರಿಹಾರ ಮೊತ್ತ ಕಡಿಮೆ. ಈ ಮೊತ್ತ ನೆರೆ ಸ್ಥಿತಿ ಎದುರಿಸಲು ಸಾಕಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಎರಡನೇ ಕಂತಿನ ಮೊತ್ತ 1,869 ಎಂದು ಎಲ್ಲರೂ ಕೇಂದ್ರದತ್ತ ಮೆಚ್ಚುಗೆ ನೋಟ ಹರಿಸಿರುವಾಗಲೇ ಮುಖ್ಯಮಂತ್ರಿಗಳ ಈ ಹೇಳಿಕೆಯ ಹಿನ್ನೆಲೆಯಲ್ಲಿ ಕೇಂದ್ರದ ಎರಡನೇ ಪರಿಹಾರ ಕಂತು ಎಷ್ಟು ಅನ್ನುವ ಅನುಮಾನ ಹುಟ್ಟು ಹಾಕಿದೆ.

ಕೇಂದ್ರ ಸರ್ಕಾರ ನೀಡಿರುವ ರೂ.669.85 ಕೋಟಿ ಹೆಚ್ಚುವರಿ ನೆರೆ ಪರಿಹಾರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ.@BSYBJP ಅವರೇ, ನೆನಪಿರಲಿ ನೀವೇ ಒಪ್ಪಿಕೊಂಡಂತೆ ಅಂದಾಜು ನಷ್ಟ ರೂ. 50 ಸಾವಿರ ಕೋಟಿ, ನೀವು ಕೇಳಿದ್ದು ರೂ.38 ಸಾವಿರ ಕೋಟಿ.
ನಿಮ್ಮ ಗೋಗರೆತಕ್ಕೆ ಸಿಕ್ಕಿದ್ದು ಕೇವಲ ರೂ.1869 ಕೋಟಿ.
ಇಷ್ಟು ಸಾಕಾ?
2/3

— Siddaramaiah (@siddaramaiah) January 7, 2020

ಈ ಗೊಂದಲ ಬಗೆಹರಿಯಲು ಎರಡು ದಾರಿಗಳಿವೆ. ಮೊದಲ ಮಾರ್ಗ, ಎರಡನೇ ಕಂತು ಎಷ್ಟು ಎಂದು ಕೇಂದ್ರ ಸರಕಾರದ ಬಳಿಯೇ ರಾಜ್ಯ ಸರಕಾರ ಸ್ಪಷ್ಟೀಕರಣ ಕೇಳಬೇಕು. ಎರಡನೇ ಮಾರ್ಗ ಸದ್ಯ ಕೇಂದ್ರ ಸರಕಾರ ಘೋಷಣೆ ಮಾಡಿರುವ ಎರಡನೇ ಪರಿಹಾರ ಮೊತ್ತವನ್ನು ರಾಜ್ಯದ ಎನ್‌ಡಿಆರ್‌ಎಫ್‌ ಖಾತೆಗೆ ಹಾಕುವವರೆಗೂ ಕಾಯುವುದು. ಕೇಂದ್ರ ಪರಿಹಾರ ಮೊತ್ತ ರಾಜ್ಯದ ಖಾತೆಗೆ ಬಂದ ಬಳಿಕವೇ ಎರಡನೇ ಕಂತು ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿದೆ.

ನೆರೆ ಪರಿಹಾರವಲ್ಲದೇ ರಾಜ್ಯಕ್ಕೆ ನ್ಯಾಯೋಚಿತವಾಗಿ ಬರಬೇಕಾದ ಅನುದಾನ ಸಾಕಷ್ಟಿದೆ. ತೆರಿಗೆ ಪಾಲು, ನರೇಗಾ ಅನುದಾನ, ಬರ ಪರಿಹಾರ.. ಇವುಗಳನ್ನೆಲ್ಲ ಯಾವಾಗ ಕೊಡುತ್ತೀರಿ ಮೋದಿ ಅವರೇ?
2/2

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) January 6, 2020

TAGGED:floodkannada newskarnatakaNDRFಕರ್ನಾಟಕಕೇಂದ್ರ ಸರ್ಕಾರನರೇಂದ್ರ ಮೋದಿನೆರೆಪರಿಹಾರಯಡಿಯೂರಪ್ಪ
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

soraba bjp worker
Crime

ಶಿವಮೊಗ್ಗದ ಸೊರಬದಲ್ಲಿ ಬಿಜೆಪಿ ಮುಖಂಡನ ಪತ್ನಿ ನೇಣಿಗೆ ಶರಣು – ಪತಿ ಬಂಧನ

Public TV
By Public TV
3 hours ago
Donovan Ferreira
Cricket

ಪಂಜಾಬ್‌ ಗೆಲುವಿನ ಓಟಕ್ಕೆ ಬ್ರೇಕ್‌ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ

Public TV
By Public TV
3 hours ago
Apekshaben Sonis victory
Latest

100% ಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಗೆ ಗೆಲುವು

Public TV
By Public TV
4 hours ago
Dharwad Suicide
Dharwad

ಧಾರವಾಡ | ಮರ್ಯಾದೆಗೆ ಅಂಜಿ ವಿದ್ಯಾರ್ಥಿ ನೇಣಿಗೆ ಶರಣು

Public TV
By Public TV
4 hours ago
gundlupet inspector safari
Chamarajanagar

ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ

Public TV
By Public TV
6 hours ago
supreme Court 1
Court

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿಯಮಗಳಿರಬೇಕು, ಅರಾಜಕತೆ ಇರಬಾರದು – ಶಬರಿಮಲೆ ಕೇಸ್‌ನಲ್ಲಿ ಸುಪ್ರೀಂ ಅಭಿಪ್ರಾಯ

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?