ಚಿತ್ರದುರ್ಗ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹೈಡ್ರೋಲಿಕ್ ಕ್ರೇನ್ ತಗಲಿ ದೇಹ ತುಂಡಾಗಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.
ಹಿರಿಯೂರು ತಾಲೂಕಿನ ಧರ್ಮಪುರ ಬಳಿ ಈ ಅವಘಡ ಸಂಭವಿಸಿದೆ. 32 ವರ್ಷದ ಮೊಹಿದ್ದೀನ್ ಅವಘಡದಿಂದ ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾರೆ.
- Advertisement 2
ಘಟನೆಯಿಂದಾಗಿ ಮೊಹಿದ್ದೀನ್ ಅವರ ದೇಹದ ಅರ್ಧ ಭಾಗವೇ ತುಂಡಾಗಿದೆ. ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಳುವನ್ನು ಕೂಡಲೇ ಸ್ಥಳೀಯರು ಹಿರಿಯೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮೊಯಿದ್ದೀನ್ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
- Advertisement 3
- Advertisement 4
ಗಾಯಾಳು ಮೊಹಿದ್ದೀನ್ 108 ವಾಹನದ ಚಾಲಕರಾಗಿದ್ದಾರೆ. ಕ್ರೆನ್ ಖಾಸಗಿ ಸೋಲರ್ ಕಂಪನಿಗೆ ಸೇರಿದ್ದಾಗಿದ್ದು, ಘಟನೆಯ ಬಳಿಕ ಚಾಲಕ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.