ಕಲಬುರುಗಿ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಾತಿ ಜಾತಿಗಳ ಮಧ್ಯೆ ವೈಮನಸ್ಸು ಮೂಡುವುದು ಸಾಮಾನ್ಯ, ಆದರೆ ಜಿಲ್ಲೆಯ ತರಕಸಪೇಟ ಗ್ರಾಮದ ದರ್ಗಾ ಜಾತ್ರೆಗಾಗಿ ಹಿಂದು-ಮುಸ್ಲಿಮರು ಐಕ್ಯತೆ ಮೆರೆದಿದ್ದು, ತಾವೇ ರಸ್ತೆ ನಿರ್ಮಿಸಿಕೊಂಡು, ಜನಪ್ರತಿನಿಧಿಗಳಿಗೆ ಪಾಠ ಕಲಿಸಿದ್ದಾರೆ.
- Advertisement 2
ಜಿಲ್ಲೆ ಚಿತ್ತಾಪುರ ತಾಲೂಕಿನ ತರಕಸಪೇಟದ ಈ ಗ್ರಾಮದ ಹೊರವಲಯದ ಶಾಪೀರ್ ವಲಿ-ಗೈಪೀರ್ ವಲಿ ದರ್ಗಾದ ಬೃಹತ್ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಹಿಂದು-ಮುಸ್ಲಿಮರು ಒಟ್ಟಿಗೆ ಸೇರುತ್ತಾರೆ. ಆದರೆ ಗ್ರಾಮದಿಂದ ಒಂದೂವರೆ ಕಿ.ಮೀ. ದೂರದ ದರ್ಗಾಕ್ಕೆ ರಸ್ತೆ ನಿರ್ಮಾಣವಾಗಿಲ್ಲ. ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ರೋಸಿಹೋದ ತರಕಸಪೇಟದ ಗ್ರಾಮಸ್ಥರು ತಮ್ಮಲ್ಲೇ ಹಣ ಸಂಗ್ರಹಿಸಿ ಕಚ್ಚಾ ರಸ್ತೆ ನಿರ್ಮಿಸಿಕೊಂಡಿದ್ದಾರೆ.
- Advertisement 3
ಗ್ರಾಮದ ಜನ ನಿರ್ಮಿಸಿರುವ ರಸ್ತೆ ಚಿಕ್ಕದಾದರೂ ಇವರ ಭಾವೈಕತೆಯ ಮನಸ್ಸು ಮಾತ್ರ ದೊಡ್ಡದು. ಈ ಕಚ್ಚಾ ರಸ್ತೆಗೆ ಮುಂಬರುವ ದಿನಗಳಲ್ಲಿ ಡಾಂಬರೀಕರಣ ಮಾಡಲು ಸಹ ಗ್ರಾಮಸ್ಥರೇ ಸಿದ್ಧತೆ ಕೈಗೊಂಡಿದ್ದಾರೆ.