ಚಿಕ್ಕಬಳ್ಳಾಪುರ: ಪಕ್ಷದ ಅಭ್ಯರ್ಥಿಯ ವಿರುದ್ಧವೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ತೊಡೆ ತಟ್ಟಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಶಿಡ್ಲಘಟ್ಟ ಶಾಸಕ ರಾಜಣ್ಣ ಅವರಿಗೆ ಕರೆ ಮಾಡಿರುವ ಮಾಜಿ ಸಿಎಂ, ಜೆ.ಡಿ.ಎಸ್ ಅಭ್ಯರ್ಥಿ ಮೇಲೂರು ರವಿ ಸೋಲಿಸಲು ಪಕ್ಷೇತರವಾಗಿ ನಿಲ್ಲುವಂತೆ ತಾಕೀತು ಮಾಡಿರುವ ಆಡಿಯೋವೊಂದು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
- Advertisement 2
ಆಡಿಯೋದಲ್ಲಿ ರವಿ ಗೆದ್ದರೆ ಕುಮಾರಸ್ವಾಮಿಗೆ ಏನೂ ಪ್ರಯೋಜನವಿಲ್ಲ. ಹೀಗಾಗಿ 10 ಕೋಟಿ ಖರ್ಚು ಮಾಡಿ ರಾಜಣ್ಣ ಗೆಲ್ಲಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ರವಿ ಹಣ ಕೊಟ್ಟು ದೊಡ್ಡಗೌಡರ ಬಳಿ ಟಿಕೆಟ್ ಗಿಟ್ಟಿಸಿದ್ದಾನೆ. ಮೇಲೂರು ರವಿ ನನ್ನ ಬಳಿ ಬಂದಿಲ್ಲ.. ನನಗೇನು ಕಿಂಚಿತ್ತು ಗೌರವ ಇಲ್ಲ ಅಂತ ರಾಜಣ್ಣ ಸಂಬಂಧಿ ಬಳಿ ಕುಮಾರಸ್ವಾಮಿ ಮಾತನಾಡಿದ್ದಾರೆ.
- Advertisement 3
- Advertisement 4