ಹಾಸನ: ಮೇಕೇದಾಟು ಯೋಜನೆ ಜಾರಿ ಸೂಕ್ಷ್ಮ ವಿಚಾರವಾಗಿದ್ದು, ರಾಜ್ಯಕ್ಕೆ ಧಕ್ಕೆ ಯಾಗದ ರೀತಿ ಕೆಲಸ ಮಾಡಲಾಗುವುದು, ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ನೀರಾವರಿ ಸಚಿವ ಗೋವಿಂದ್ ಕಾರಜೋಳ ತಿಳಿಸಿದರು.
ಸಕಲೇಶಪುರ ತಾಲ್ಲೂಕಿನ ಎತ್ತಿನಹೊಳೆ ಯೋಜನೆ ಕಾಮಗಾರಿಸ್ಥಳ ವೀಕ್ಷಣೆಗೂ ಮುನ್ನಾ, ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದೆ, ನೀರಾವರಿ ಯೋಜನೆಯಲ್ಲ. ಆದ್ದರಿಂದ ತಮಿಳುನಾಡಿಗೆ ಕೊಡಬೇಕಾದ ನೀರನ್ನು ಕೊಡುತ್ತೇವೆ. ಯೋಜನೆ ವಿಚಾರವಾಗಿ ತಮಿಳುನಾಡು ವಿನಾಕಾರಣ ಕೇಸ್ ಹಾಕಿದೆ. ನಾವೂ ಕೂಡ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇವೆ. ಖಂಡಿತವಾಗಿ ಯೋಜನೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪಾಲಿಕೆ ಚುನಾವಣಾ ಫಲಿತಾಂಶ- ಮತದಾರರಿಗೆ, ಪಕ್ಷದ ಹಿರಿಯ ನಾಯಕರಿಗೆ ಸಿಎಂ ಧನ್ಯವಾದ
ನೆಲಜಲ ರಕ್ಷಣೆ ಪ್ರಶ್ನೆ ಬಂದಾಗ ಬಿಜೆಪಿಯವರು ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು. ತಮಿಳುನಾಡಿನಲ್ಲಿ ಈ ವಿಷಯದಲ್ಲಿ ರಾಜಕೀಯ ಗಿಮಿಕ್ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಪಕ್ಷದ ವಿಷಯ ಬರಲ್ಲ, ರಾಜ್ಯದ ವಿಷಯವಷ್ಟೆ ಬರುತ್ತೆ ಎಂದು ಹೇಳಿದರು.
ಬೆಳಗಾವಿ ಗೆಲುವು ಸಂತಸ ತಂದಿದೆ
ನಮ್ಮ ಅಭಿವೃದ್ಧಿ ಕೆಲಸಕ್ಕೆ ಮನ್ನಣೆಯಾಗಿ ನಿರೀಕ್ಷೆಯಂತೆ ಬೆಳಗಾವಿ ಮತದಾರರು ಪಕ್ಷಕ್ಕೆ ಬೆಂಬಲಿಸಿ ಗೆಲುವಿಗೆ ಕಾರಣರಾಗಿದ್ದಾರೆ. ಅಲ್ಲದೆ ಜನರ ಪ್ರೀತಿ ವಿಶ್ವಾಸ ನಂಬಿಕೆಗೆ ದ್ರೋಹ ಬಗೆಯದೆ ಆಡಳಿತ ನೀಡಿರುವ ಹಿನ್ನೆಲೆಯಲ್ಲಿ ಪಾಲಿಕೆ ನಮ್ಮ ಪಾಲಾಗಿದೆ ಎಂದರು.
ಈ ಭಾಗದ ಪಕ್ಷದ ಶಾಸಕರು, ನಾಯಕರು ಶ್ರಮ ಹಾಕಿ ನಮ್ಮನ್ನು ಗೆಲ್ಲಿಸಿದ್ದಾರೆ. ಮುಂದಿನ ದಿನ ಜನ ಬಯಸಿದ ಆಡಳಿತ ನೀಡಿ ಪ್ರಭುತ್ವ ಸಾಧಿಸುತ್ತೇವೆ. ಯಾವತ್ತೂ ಕೂಡ ಬೆಳಗಾವಿಯಲ್ಲಿ ಬಹುಮತ ಇರಲಿಲ್ಲ. ಇಂದಿನ ಗೆಲುವು ಸಂತಸ ತಂದಿದೆ. ಉತ್ತಮ ಆಡಳಿತದ ಮೂಲಕ ಜನರ ಋಣ ತೀರುಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಸೌಂದರ್ಯಕ್ಕಿಂತ ಆರೋಗ್ಯವೇ ಮುಖ್ಯ: ರಮ್ಯಾ
ಹುಬ್ಬಳ್ಳಿ, ಧಾರವಾಡದಲ್ಲಿ ಮತ್ತೆ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಜನ ನೆಮ್ಮದಿಯಿಂದ ಇರುವಂತೆ ಆಡಳಿತ ನೀಡುವ ಭರವಸೆ ನೀಡಿದ ಅವರು ಈ ಎಲ್ಲಾ ಬೆಳವಣಿಗೆಗೆ ನರೇಂದ್ರ ಮೋದಿ ನಮ್ಮ ಪಕ್ಷದ ರೋಲ್ ಮಾಡೆಲ್. ಅವರ ಧ್ಯೇಯ ವಾಕ್ಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಂತೆ ಅಡಳಿತ ನಡೆಸುತ್ತೇವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಬಿಜೆಪಿ ಓಕೆ, ಕಾಂಗ್ರೆಸ್ ಯಾಕೆ?:ಆರ್. ಅಶೋಕ್
ಕಲ್ಬುರ್ಗಿಯಲ್ಲಿ ಕ್ಯಾಲುಕೆಲೇಷನ್ ಸ್ವಲ್ಪ ತಪ್ಪಾಗಿದೆ. ಇಲ್ಲದಿದ್ದರೆ ಬಿಜೆಪಿ ಇನ್ನಷ್ಟು ಹೆಚ್ಚು ಸ್ಥಾನ ಪಡೆಯುತ್ತಿತ್ತು . 2023ರ ಚುನಾವಣೆಯಲ್ಲೂ ಬಿಜೆಪಿ ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.