ನವದೆಹಲಿ: ನಿನ್ನೆಯಷ್ಟೇ ರೈತರ (Farmers) ಖಾತೆಗೆ 12ನೇ ಕಂತಿನ ಹಣ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ (Central Government Of India) ಇಂದು 6 ಪ್ರಮುಖ ಹಿಂಗಾರು ಬೆಳೆಗಳ (Crops) ಬೆಂಬಲ ಬೆಲೆ ಹೆಚ್ಚಿಸಿದೆ. ಈ ಮೂಲಕ ದೀಪಾವಳಿಗೂ ಮುನ್ನವೇ ರೈತರಿಗೆ ಬಂಪರ್ ಕೊಡುಗೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಂತರ ಕೇಂದ್ರದ ನಿರ್ಧಾರಗಳ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ. ಇದನ್ನೂ ಓದಿ: ಜೀವನಶೈಲಿ ಹೇಗಿದ್ದರೆ ಸ್ತನ ಕ್ಯಾನ್ಸರ್ ಬರುತ್ತೆ ಗೊತ್ತಾ?
#Cabinet approves Minimum Support Prices for all Rabi Crops for Marketing Season 2023-24; absolute highest increase in MSP approved for lentil (Masur) at Rs.500/- per quintal#CabinetDecisions pic.twitter.com/FHihRcEV6b
— Office of Mr. Anurag Thakur (@Anurag_Office) October 18, 2022
ಕೇಂದ್ರ ಸರ್ಕಾರ ಗೋಧಿ (Wheat Crop) ಸೇರಿದಂತೆ ಪ್ರಮುಖ 6 ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆ (Minimum Support Price) ಘೋಷಣೆ ಮಾಡಿದೆ. ಈ ಋತುವಿನಲ್ಲಿ ಕೇಂದ್ರ ಸರ್ಕಾರ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಒಟ್ಟು 23 ಬೆಳೆಗಳಿಗೆ ಬೆಂಬಲ ಘೋಷಣೆ ಮಾಡಿದ್ದು ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಅವರಮ್ಮ ಮದುವೆಯಲ್ಲೂ ಕುಂಕುಮ ಇಟ್ಟಿದ್ರೋ ಇಲ್ವೋ ಗೊತ್ತಿಲ್ಲ- ಸಿ.ಟಿ ರವಿ
2023-24 ಮಾರುಕಟ್ಟೆ ಋತುವಿಗಾಗಿ ಪ್ರಮುಖ 6 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಗೋಧಿಗೆ 110 ರೂ. ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಒಟ್ಟಾರೆ ಗೋಧಿಗೆ 2,125 ರೂ. ಬೆಂಬಲ ಬೆಲೆ ಸಿಗಲಿದೆ. ಗೋಧಿ ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಾಲ್ಗೆ 1,065 ರೂ. ಎಂದು ಅಂದಾಜಿಸಿ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಠಾಕೂರ್ ಹೇಳಿದ್ದಾರೆ.
ಯಾವ ಬೆಳೆಗೆ ಎಷ್ಟು ಬೆಲೆ?
ಪ್ರತಿ ಕ್ವಿಂಟಲ್ಗೆ ಗೋಧಿಗೆ 110 ರೂ., ಬಾರ್ಲಿಗೆ 100 ರೂ., ಬೇಳೆ 105 ರೂ., ಮಸೂರ್ (ಬೆಳೆ) 500 ರೂ., ಸಾಸಿವೆ 400 ರೂ., ಸೂರ್ಯಕಾಂತಿಗೆ 209 ರೂ. ಬೆಂಬಲ ಬೆಲೆ (Minimum Support Price) ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.