ಬೆಂಗಳೂರು: ಜಾಲಹಳ್ಳಿಯ ಅಯ್ಯಪ್ಪ ದೇವಾಲಯದ 55ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಗರ್ಭಗುಡಿಯ ಚಿನ್ನ ಲೇಪನ ಲೋಕಾರ್ಪಣೆ ಕಾರ್ಯಕ್ರಮ ದೇವಾಲಯದ ಆಡಳಿತ ಮಂಡಳಿಯಿಂದ ನೆರವೆರಿತು.
ದಕ್ಷಿಣ ಭಾರತದಲ್ಲೇ ಶಬರಿಮಲೆಯ ಬಳಿಕ ಅತ್ಯಂತ ಪ್ರಸಿದ್ಧಿ ಪಡೆದಿರುವ ಅಯ್ಯಪ್ಪನ ದೇವಾಲಯವಾಗಿರುವ ಬೆಂಗಳೂರಿನ ಜಾಲಹಳ್ಳಿನಲ್ಲಿರುವ ಅಯ್ಯಪ್ಪ ದೇವಾಲಯದ 55ನೇ ವಾರ್ಷಿಕೊತ್ಸವವು ಸಕಲ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ನಡೆಯಿತು. ಶಬರಿ ಮಲೆಯ ಅಯ್ಯಪ್ಪ ದೇವಸ್ಥಾನದ ಮಾದರಿಯಲ್ಲೇ ಜಾಲಹಳ್ಳಿಯ ಅಯ್ಯಪ್ಪ ದೇಗುಲದ ಗರ್ಭಗುಡಿಯಲ್ಲೂ ಚಿನ್ನದ ಲೇಪನ ಮಾಡಲಾಗಿತ್ತು.
ಈ ಚಿನ್ನದ ಲೇಪನ ಲೋಕಾರ್ಪಣೆ ಕಾರ್ಯಕ್ರಮವನ್ನು ಕೇರಳದ ಶಬರಿ ಮೆಲೆ ದೇವಾಲಯದ ತಂತ್ರಿ ಬ್ರಹ್ಮಶ್ರೀ ತಾಳಮನ್ ಮಡಮ್ ರಾಜೀ ಅವರು ಧಾರ್ಮಿಕ ಪದ್ಧತಿಯಂತೆ ನೆರೆವೆಸಿ ಕಳಸದ ಪ್ರತಿಷ್ಠಾಪನೆ ಮಾಡಿದರು. ನೂರಾರು ಅಯ್ಯಪ್ಪ ಸ್ವಾಮಿಯ ಭಕ್ತರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 50ರೂ. ಏರಿಕೆ
ಸುಮಾರು 15 ವರ್ಷಗಳ ಚಿನ್ನದ ಲೇಪನದ ಕನಸು ಇಂದು ಈಡೇರಿದೆ. 11 ಕೆ.ಜಿ ಚಿನ್ನವನ್ನು ಬಳಸಿಕೊಂಡು ದೇವಾಲಯದ ಗರ್ಭಗುಡಿಗೆ ಚಿನ್ನದ ಲೇಪನದ ತಗಡನ್ನು ಯಶಸ್ವಿಯಾಗಿ ಆಳವಡಿಕೆ ಮಾಡಲಾಗಿದ್ದು, ಇಂದು ಬೆಳಗ್ಗೆ ಭಕ್ತರ ದರ್ಶನಕ್ಕೆ ಲೋಕಾರ್ಪಣೆ ಮಾಡಲಾಯಿತು ಎಂದು ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ – 5 ವಾರಗಳಲ್ಲಿ ಎರಡನೇ ಬಾರಿ ಹೇರಿಕೆ