ಬೆಂಗಳೂರು: ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಆಗ್ತಿದೆ. ಅದಕ್ಕೆ ಪ್ಲ್ಯಾನಿಂಗ್ ಕೊಟ್ಟವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೋಲ್ ಪಕ್ಕಾ ಪ್ಲ್ಯಾನ್ ಹೇಗಿರಬೇಕು ಅಂತ, ಕಾಮನ್ಸೆನ್ಸ್ ಇರಬೇಕು. ಯಾರು ಪ್ಲ್ಯಾನಿಂಗ್ ಮಾಡಿದ್ರು ಅವರಿಗೆ ಅವಾರ್ಡ್ ಕೊಡಬೇಕು. ಬರೀ ಟಾರ್ ಹಾಕಿ ದುಡ್ಡು ಇಸ್ಕೊಳ್ಳೋದಷ್ಟೇ ಕೆಲಸವೇ? ರಾಷ್ಟ್ರೀಯ ಹೆದ್ದಾರಿಯಲ್ಲೇ ಹೀಗಾದ್ರೆ ಕಥೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಒಬ್ಬಳನ್ನೇ ಮದುವೆಯಾದ ಗಂಡಂದಿರಿಬ್ಬರ ಫೈಟ್ – ಪತ್ನಿಗಾಗಿ ಆಕೆಯ ಮೊದಲನೇ ಗಂಡನ ಹತ್ಯೆಗೆ ಸ್ಕೆಚ್ ಹಾಕ್ದ
Welcome to Ramanagar district. Rains have submerged the main Mysuru – Bengaluru Highway. pic.twitter.com/wSgwLUov10
— Suraj Suresh (@Suraj_Suresh16) August 29, 2022
ರಾಮನಗರ, ಚನ್ನಪಟ್ಟಣ, ಕನಕಪುರದ ಭಾಗದಲ್ಲಿ ಮಳೆಹಾನಿಯಾಗಿದೆ. ಈಗಾಗಲೇ ನಾನು ಭೇಟಿ ಮಾಡುವ ಸ್ಥಳಗಳನ್ನ ನಮ್ಮ ಮುಖಂಡರು ಗುರುತಿಸಿದ್ದಾರೆ. ಅಲ್ಲಿ ಹೋಗಿ ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಮಳೆಯಿಂದಾಗಿ ಜನರ ಆಸ್ತಿಪಾಸ್ತಿ ಹಾನಿಯಾಗಿರುವುದು ನೋವಿನ ಸಂಗತಿ. ಸರ್ಕಾರ ಅವರ ನೆರವಿಗೆ ಬರಬೇಕು. ಮಳೆಗೆ ನಿಯಂತ್ರಣ ಇಲ್ಲ, ಮಳೆ ಬರಬಾರದು ಅಂತ ನಾನು ಹೇಳಲ್ಲ. ವಿದ್ಯುತ್ ಸಚಿವನಾಗಿ ಕೆಲಸ ಮಾಡಿರುವ ನನಗೆ ಮಳೆ ಎಷ್ಟು ಅವಶ್ಯಕತೆ ಇದೆ ಅಂತಾ ಗೊತ್ತಿದೆ. ಜನರಿಗೆ ಅನುಕೂಲ ಆಗಲಿ ಅಂತಲೇ ಮೇಕೆದಾಟು ಪಾದಯಾತ್ರೆ ಮಾಡಿದ್ದೇವೆ. 12 ಸಾವಿರ ಕೋಟಿ ಅನುದಾನ ಪಂಪ್ ಸೆಟ್ ವಿದ್ಯುತ್ಗೆ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನೊಬ್ಬರನ್ನು ಮುಗಿಸಿಯೇ ಮೇಲಕ್ಕೆ ಬಂದ ಮಹಾಪುರುಷ ನೀವಲ್ಲವೇ? – ಸಿದ್ದು ವಿರುದ್ಧ ಶ್ರೀರಾಮುಲು ಕಿಡಿ
ಮುರುಘಾಶ್ರೀಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುರುಘಾ ಶ್ರೀಗಳ ವಿರುದ್ಧ ಏನು ಷಡ್ಯಂತ್ರ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಹಿಂದೆಯೂ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮುರುಘಾಶ್ರೀಗಳ ವಿರುದ್ಧ ಷಡ್ಯಂತ್ರ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ನಮ್ಮ ಕಣ್ಣಿಗೆ ಕಂಡಿರೋದು ಅವರ ಸೇವೆ ಮಾತ್ರ. ಶ್ರೀಗಳ ಸೇವೆಯನ್ನು ತಳ್ಳಿ ಹಾಕಲು ಆಗುವುದಿಲ್ಲ. ಬೇರೆ ವಿಷಯಗಳ ಬಗ್ಗೆ ನಾನು ಗೊತ್ತಿಲ್ಲದೇ ಮಾತನಾಡುವುದಿಲ್ಲ ಎಂದಿದ್ದಾರೆ.