Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜೆನ್‌ ಝೀ ಯುವಜನತೆ ಭಗವದ್ಗೀತೆ ಜೊತೆಗಿರಿಸಿಕೊಳ್ಳಿ: ಪವನ್‌ ಕಲ್ಯಾಣ್‌ ಕರೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಜೆನ್‌ ಝೀ ಯುವಜನತೆ ಭಗವದ್ಗೀತೆ ಜೊತೆಗಿರಿಸಿಕೊಳ್ಳಿ: ಪವನ್‌ ಕಲ್ಯಾಣ್‌ ಕರೆ

Latest

ಜೆನ್‌ ಝೀ ಯುವಜನತೆ ಭಗವದ್ಗೀತೆ ಜೊತೆಗಿರಿಸಿಕೊಳ್ಳಿ: ಪವನ್‌ ಕಲ್ಯಾಣ್‌ ಕರೆ

Public TV
Last updated: December 7, 2025 10:35 pm
Public TV
Share
3 Min Read
pawan kalyan udupi
SHARE

– ಕನ್ನಡದಲ್ಲೇ ಭಾಷಣ ಆರಂಭಿಸಿದ ಆಂಧ್ರ ಡಿಸಿಎಂ
– ಮದುವೆ, ಹೋಟೆಲ್‌, ಸಿನಿಮಾಗೆ ನಾವು ಖರ್ಚು ಮಾಡ್ತೀವಿ.. ಗೋವುಗಳನ್ನು ಯಾಕೆ ರಕ್ಷಿಸಬಾರದು: ಪವನ್‌

ಉಡುಪಿ: ಜೆನ್‌ ಝೀ ಯುವಜನರು ಭಗವದ್ಗೀತೆಯನ್ನು ಜೊತೆಗಿರಿಸಿಕೊಳ್ಳಿ. ಗೀತೆ ಸಂಕಷ್ಟದಲ್ಲಿ ನಿಮಗೆ ಸಾಂತ್ವನ ನೀಡುತ್ತದೆ ಎಂದು ಆಂಧ್ರಪ್ರದೇಶ ಡಿಸಿಎಂ ಪವನ್‌ ಕಲ್ಯಾಣ್‌ ಕರೆ ನೀಡಿದರು.

ಉಡುಪಿಯಲ್ಲಿ ಗೀತೋತ್ಸವ ಸಮಾರೋಪದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಕೃಷ್ಣ ಸನ್ನಿಧಿಗೆ ಶಿರ ಸಾಷ್ಟಾಂಗ ನಮಸ್ಕಾರ. ಕನ್ನಡ ನಾಡಿನ ಜನತೆಗೆ ನಮಸ್ಕಾರ. ಮೆಕಾಲೆಯ ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ. ಸನಾತನ ಧರ್ಮವನ್ನು ನಾಶ ಮಾಡುತ್ತದೆ ಎಂದು ಮೆಕಾಲೆ ಹೇಳಿದ್ದ. ಸನಾತನ ಧರ್ಮದ ಶಕ್ತಿಯ ಮುಂದೆ ಅದು ಸಾಧ್ಯವಾಗಿಲ್ಲ. ವೇದ ಮತ್ತು ಗೀತೆಯಿಂದ ನಮ್ಮ ಸಂಸ್ಕೃತಿ ಉಳಿಸಿಕೊಂಡೆವು. ಸ್ವಾಮಿಗಳು ಆಹ್ವಾನ ನೀಡಿರುವುದು ಅಚ್ಚರಿ ಮೂಡಿದೆ. ನನಗೆ ಕರ್ಮ ಯೋಗದಲ್ಲಿ ನಂಬಿಕೆ ಇದೆ. ಫಲಗಳ ನಿರೀಕ್ಷೆ ನನಗೆ ಇಲ್ಲ ಎಂದರು.

ನಮ್ಮ ನಾಗರಿಕತೆಯ ನಾಡಿ ಮಿಡಿತ ಭಗವದ್ಗೀತೆ. ಮೋದಿ-ಪುಟಿನ್‌ಗೆ ರಷ್ಯನ್ ಭಗವದ್ಗೀತೆಯನ್ನು ಕೊಡುಗೆ ನೀಡಿದರು. ಇದು ಒಂದು ಸಕಾಲಿಕ ಉಡುಗೊರೆ. ಯುದ್ಧಕಾಲದಲ್ಲಿ ಪಾಠ ಹೇಳುವ ಉಡುಗೊರೆ. ಯಾವತ್ತಿಗಿಂತಲೂ ಭಗವದ್ಗೀತೆ ಈಗ ಹೆಚ್ಚು ಸಕಾಲಿಕ. ಗೋರಕ್ಷಣೆ ಧರ್ಮದ ಒಂದು ಭಾಗ. ಭಾರತೀಯ ಸಂಪ್ರದಾಯದ ಒಂದು ಭಾಗ ಎಂದು ತಿಳಿಸಿದರು.

60 ಗೋವುಗಳ ಗೋಶಾಲೆ ನಾನು ನಡೆಸುತ್ತೇನೆ. ನಾನು ನನ್ನ ಇಲಾಖೆಯಿಂದ ಗೋಕುಲ ಎಂಬ ಯೋಜನೆ ತಂದಿದ್ದೇನೆ. ಸಮುದಾಯ ಗೋಶಾಲೆಯ ಕಲ್ಪನೆ ಹೊಂದಿದ್ದೇನೆ. ಹಿಂದೂಗಳು ತಮ್ಮ ಪರಿಸರದ ಗೋವುಗಳನ್ನು ರಕ್ಷಣೆ ಮಾಡಬೇಕು. ಕುಟುಂಬ ಒಂದು ಗೋವನ್ನು ರಕ್ಷಣೆ ಮಾಡಬೇಕು. ಇನ್ನೊಂದು ಧರ್ಮವನ್ನು ದೂರುವುದರ ಬದಲು ಪ್ರತಿ ಕುಟುಂಬ ಒಂದು ಗೋವನ್ನು ರಕ್ಷಣೆ ಮಾಡಬೇಕು. ಮದುವೆ, ಹೋಟೆಲ್, ಸಿನಿಮಾಗೆ ನಾವು ಖರ್ಚು ಮಾಡುತ್ತೇವೆ. ನಾವ್ಯಾಕೆ ಗೋವುಗಳ ರಕ್ಷಣೆ ಮಾಡಬಾರದು ಎಂದು ಪ್ರಶ್ನಿಸಿದರು.

ನಾನು ವಿಧ್ವಾಂಸರ ಕುಟುಂಬದಿಂದ ಬಂದವನಲ್ಲ, ಭಕ್ತರ ಕುಟುಂಬದಿಂದ ಬಂದವನು. ಹನುಮ ಭಕ್ತರ ಕುಟುಂಬ ನಮ್ಮದು. ಹರೇ ರಾಮ ಹರೇ ಕೃಷ್ಣ ಎಂದು ನಮಗೆ ತಂದೆ ಕಳಿಸಿದರು. ತಾರಕ ಮಂತ್ರ ನನ್ನ ಜೀವನದಲ್ಲಿ ಪವಾಡ ಮಾಡಿದೆ. ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ ಎಂದು ಹೇಳುತ್ತಾ ಬಂದ ಕುಟುಂಬ. ಮಾನಸಿಕವಾಗಿ ಕುಗ್ಗಿದಾಗಲೆಲ್ಲ ಈ ಮಂತ್ರ ನನ್ನನ್ನು ಮೇಲಕ್ಕೆ ಎತ್ತಿದೆ. ಉಡುಪಿ ವೈಕುಂಠವಾಗಿದೆ. ಆಧ್ಯಾತ್ಮದ ಸೆಳೆತ ಇಲ್ಲಿ ನಾನು ಕಂಡಿದ್ದೇನೆ. ಇದು ಅಧ್ಯಾತ್ಮದ ಪವರ್ ಹೌಸ್. ಮಧ್ವಾಚಾರ್ಯರಿಂದ ಉಡುಪಿಯ ಕೀರ್ತಿ ಹೆಚ್ಚಿದೆ. ಹನುಮ ಭೀಮರ ಅವತಾರ ಆಚಾರ್ಯ ಮಧ್ವರು. 800 ವರ್ಷಗಳ ಇತಿಹಾಸ ಹಾಗೂ ದ್ವೈತ ಮತ ಪ್ರಪಂಚಕ್ಕೆ ಪ್ರೇರಣೆ ನೀಡಿದೆ. ವಿದೇಶಗಳಲ್ಲಿ ಪುತ್ತಿಗೆ ಶ್ರೀಗಳ ಹಿಂದೂ ಧರ್ಮ ಪ್ರಚಾರ ಗಮನಾರ್ಹವಾಗಿದೆ. ಒಂದು ಕೋಟಿ ಜನರಿಂದ ಬರೆಸುತ್ತಿದ್ದಾರೆ. ಗೀತೆ ಬರೆಯುತ್ತಿರುವ ಒಂದು ಕೋಟಿ ಜನರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ನಾನು ಕೂಡ ಭಗವದ್ಗೀತೆ ಬರೆಯುತ್ತೇನೆ. ಕನಕದಾಸರ ಭಕ್ತಿ ನನಗೆ ಕುತೂಹಲ ಮೂಡಿಸಿದೆ. ಕನಕನ ಕಿಂಡಿ ಕೇವಲ ಕಿಂಡಿಯಲ್ಲ. ಹಣ, ಜಾತಿಗಿಂತ ಭಕ್ತಿ ಮೇಲು ಎಂದು ತೋರಿಸಿದೆ. ಮಾನವೀಯತೆಯ ಅತ್ಯುನ್ನತ ಪ್ರಣಾಳಿಕೆ ಭಗವದ್ಗೀತೆ. ಕೈಬರಹದ ಸಂವಿಧಾನದಲ್ಲಿ, ಭಗವದ್ಗೀತೆಯ ಬರಹ ಇದೆ. ಧರ್ಮ ಮತ್ತು ಸಂವಿಧಾನ ಬೇರೆಯಲ್ಲ. ಶಾಂತಿಯುತ ಸಮಾಜದ ನಿರ್ಮಾಣ ಎರಡರ ಉದ್ದೇಶ ಒಂದೆ. ಅದು ಮೂಢನಂಬಿಕೆಯಲ್ಲ, ಭಗವದ್ಗೀತೆ ಒಂದು ವಿಜ್ಞಾನ. ಭಗವದ್ಗೀತೆ ಈ ಪ್ರಪಂಚವನ್ನು ಸನ್ಮಾರ್ಗದಲ್ಲಿ ರೂಪಿಸಿದೆ. ಸಾವಿನ ಜೊತೆ ಹೋರಾಡಿಕೊಂಡು ಬೆಳೆದವ ಕೃಷ್ಣ. ಹುಟ್ಟಿನ ಮೊದಲೇ ಸಾವಿನ ಜೊತೆ ಸೆಣಸಾಡಿದವ ಕೃಷ್ಣ. ಕೃಷ್ಣನ ಜೀವನೋತ್ಸವ ಭಗವದ್ಗೀತೆಯ ಸಾರಾಂಶ. ಕೃಷ್ಣದೇವರು ನನ್ನ ಬದುಕಿನ ಪ್ರೇರಣೆ ಎಂದರು.

ನನಗೆ ಭಗವದ್ಗೀತೆಯ ಶ್ಲೋಕಗಳು ಗೊತ್ತಿಲ್ಲದಿರಬಹುದು. ಆದರೆ, ಅದರ ಸ್ಪಿರಿಟ್ ಗೊತ್ತು. ಭಗವದ್ಗೀತೆಯಿಂದ ನಾನು ಶಕ್ತಿ ಪಡೆದಿದ್ದೇನೆ. ನಿಷ್ಕಾಮ ಕರ್ಮ ಭಗವದ್ಗೀತೆಯಿಂದ ನಾನು ಕಲಿಸಿದ್ದೇನೆ. ಚುನಾವಣೆಯ ಸೋಲು ಗೆಲುವು ನನಗೆ ಬಾಧಿಸುವುದಿಲ್ಲ. ಸತ್ಯದ ಬಲದಲ್ಲಿ ನನ್ನ ಹೋರಾಟ ನಡೆಸುತ್ತೇನೆ. ಮೌನ ಯಾವುದಕ್ಕೂ ಪರಿಹಾರ ಅಲ್ಲ ಎಂದು ತಿಳಿಸಿದರು.

TAGGED:Pawan Kalyansri krishna muttudupiಉಡುಪಿಪವನ್ ಕಲ್ಯಾಣ್ಶ್ರೀಕೃಷ್ಣ ಮಠ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Mantralaya Hundi Counting 1 1
Districts

ಬಿರು ಬೇಸಿಗೆಯಲ್ಲೂ ಮಂತ್ರಾಲಯಕ್ಕೆ ಭಕ್ತರ ದಂಡು – 22 ದಿನದಲ್ಲಿ 3.25 ಕೋಟಿ ಕಾಣಿಕೆ ಸಂಗ್ರಹ

Public TV
By Public TV
34 minutes ago
Trump announces three week extension of Israel Lebanon ceasefire
Latest

ಇಸ್ರೇಲ್-ಲೆಬನಾನ್ ಕದನ ವಿರಾಮ 3 ವಾರಗಳವರೆಗೆ ವಿಸ್ತರಣೆ: ಟ್ರಂಪ್‌ ಸಂಧಾನ ಯಶಸ್ವಿ

Public TV
By Public TV
48 minutes ago
Bidar Farmers Death
Bidar

ಸಿಡಿಲು ಬಡಿದು ಬೀದರ್‌ನ ಇಬ್ಬರು ಯುವ ರೈತರು ಸಾವು

Public TV
By Public TV
55 minutes ago
Weather 1
Bagalkot

ರಾಜ್ಯದಲ್ಲಿ ಏ.29ರವರೆಗೆ, ಬೆಂಗ್ಳೂರಲ್ಲಿ ಮೇ 5ರವರೆಗೆ ಮಳೆ ಮುನ್ಸೂಚನೆ

Public TV
By Public TV
1 hour ago
Chikkamagaluru marriage
Chikkamagaluru

ಕಾಫಿನಾಡಲ್ಲೊಂದು ಅಪರೂಪದ ಮದ್ವೆ – ATMನಿಂದ ಲವ್ ಶುರು, ಈಗ ಜಾತಿ ಸಂಕೋಲೆ ಮೀರಿ ಕೈಹಿಡಿದ ಜೋಡಿ

Public TV
By Public TV
2 hours ago
Chinnaswamy Stadium RCB
Bengaluru City

ಚಿನ್ನಸ್ವಾಮಿಯಲ್ಲಿ ಇಂದು ಬಿಗ್ ಫೈಟ್ – ಆರ್‌ಸಿಬಿ ತವರು ನೆಲದ ಕೊನೆಯ ಲೀಗ್ ಪಂದ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?