ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾದಪ್ಪನಿಗೆ ಕೊಡುತ್ತೇನೆ ಎಂದಿದ್ದ ಬೆಳ್ಳಿಯನ್ನು ಕೊಡದೇ ತಮ್ಮ ಹರಕೆಯನ್ನು ಮರೆತಿದ್ದಾರೆ.
ಸಿದ್ದರಾಮಯ್ಯ ಈ ಹಿಂದೆ ಮಾದಪ್ಪನಿಗೆ ಬೆಳ್ಳಿ ರಥ ಮಾಡಿಸಲು ತಮ್ಮಲ್ಲಿರುವ ಬೆಳ್ಳಿಯನ್ನು ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಎರಡು ವರ್ಷಗಳು ಕಳೆದರೂ ಸಿದ್ದರಾಮಯ್ಯ ಅವರು ತಮ್ಮ ಹರಕೆಯನ್ನು ತೀರಿಸಲಿಲ್ಲ. ಇದೀಗ ಬೆಳ್ಳಿ ರಥ ಮಾಡಿಸಲು ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ.
ಪ್ರಾಧಿಕಾರ ಈಗಾಗಲೇ ಮರದ ರಥ ಸಿದ್ಧಪಡಿಸಿಕೊಂಡಿದ್ದಾರೆ. ಮರದ ರಥಕ್ಕೆ ಬೆಳ್ಳಿ ಜೋಡಣೆಯೊಂದೇ ಬಾಕಿ ಇದೆ. ಇಷ್ಟಿದ್ದರೂ ಸಹ ಸಿದ್ದರಾಮಯ್ಯ ಅವರು ತಮ್ಮ ಹರಕೆಯನ್ನು ಮರೆತಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರು ಹರಕೆ ಮರೆತ ಕಾರಣ ಸಂಕಷ್ಟಗಳನ್ನು ಎದುರಿಸುತ್ತಿದ್ದಾರಾ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ.
ಎರಡು ವರ್ಷದ ಹಿಂದೇ ತಾವೇ ರಥ ಮಾಡಿಸಲು ಬೆಳ್ಳಿ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದೀಗ ಬೆಳ್ಳಿಯನ್ನು ಕೊಡದೇ ಇರುವುದಕ್ಕೆ ಸಿದ್ದರಾಮಯ್ಯ ಅವರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರಾ ಎಂಬ ಅನುಮಾನ ಹುಟ್ಟಿದೆ.