-ಬಣ್ಣ ಬಣ್ಣದ ಗುಲಾಬಿಗಳಲ್ಲಿ ಅರಳಿ ನಿಂತ ಭೋಗನಂಧೀಶ್ವರ ದೇಗುಲ
ಚಿಕ್ಕಬಳ್ಳಾಪುರ: ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯೊದ್ರಲ್ಲಿ ಜಿಲ್ಲೆಯ ರೈತರು ಫೇಮಸ್. ನಗರದ ಹೊರ ವಲಯದಲ್ಲಿ ಜಿಲ್ಲಾಡಳಿತ ಹಾಗೂ ನಂದಿ ಉದ್ಯಾನ ಕಲಾ ಸಂಘದಿಂದ ಫಲಪುಷ್ಪ, ತೋಟಗಾರಿಕೆ ಹಾಗೂ ಕೃಷಿ ಮೇಳ ಆಯೋಜಿಸಲಾಗಿದೆ.
ಇಂದಿನಿಂದ ಮೂರು ದಿನಗಳ ಕಾಲ ಈ ಫಲ-ಪುಷ್ಪ ಪ್ರದರ್ಶನ ನಡೆಯಲಿದೆ. ಮೇಳದಲ್ಲಿ ಸುಂದರ ಹೂಗಳ ರಾಶಿ ಒಂದಡೆಯಾದ್ರೆ, ಮತ್ತೊಂದೆಡೆ ಅಡುಗೆಗೆ ಬಳಸುವ ವಿವಿಧ ತರಕಾರಿಗಳ ಕಲರ್ ಕಲರ್ ಚಿತ್ತಾರ ಎಲ್ಲರನ್ನು ತನ್ನತ್ತ ಸೆಳೆಯುತ್ತಿವೆ.
ಬಣ್ಣ ಬಣ್ಣದ ಗುಲಾಬಿಗಳಿಂದ ಇತಿಹಾಸ ಪ್ರಸಿದ್ಧ ಶ್ರೀ ಬೋಗನಂದೀಶ್ವರ ದೇವಾಲಯ ನಿರ್ಮಾಣ ಮಾಡಲಾಗಿದೆ. ಮರಳಿನ ಕಲಾಕೃತಿಯಲ್ಲಿ ವಿಶ್ವ ವಿಖ್ಯಾತ ಸರ್ ಎಂ. ವಿಶ್ವೇಶ್ವರಯ್ಯ ಅವರ ಚಿತ್ರಣ ಮೂಡಿಬಂದಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಫಲ-ಪುಷ್ಪ, ತೋಟಗಾರಿಕೆ ಹಾಗೂ ಕೃಷಿ ಮೇಳವನ್ನ ಆಯೋಜಿಸಲಾಗಿದೆ.
ತರಕಾರಿಗಳಲ್ಲಿ ಮೂಡಿ ಬಂದಿರುವ ಮೊಸಳೆ, ನವಿಲು ಹೀಗೆ ಹತ್ತು ಹಲವು ಪ್ರಾಣಿಗಳ ಕಲಾಕೃತಿಗಳು ಕಣ್ಣಿಗೆ ಮುದ ನೀಡುತ್ತಿದೆ. ಇನ್ನೂ ಮೇಳದಲ್ಲಿ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ಪ್ರಯೋಜನ ಪಡೆದುಕೊಂಡಿದ್ದು ಮೇಳದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಮೇಳದಲ್ಲಿ ರೈತರಿಗೆ ಬೇಕಾದ ಉಪಯುಕ್ತ ಮಾಹಿತಿ ಸಿಕ್ಕಿದ್ದು, ರೈತರಿಗೆ ಸಂತಸದ ಜೊತೆ ಲಾಭದಾಯಕವೂ ಆಗಿದೆ.