ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿರುವ ಆನೆಯ ಮಾವುತ ಮೃತಪಟ್ಟಿದ್ದಾರೆ.
ಕಾಳಪ್ಪ (52) ಮೃತಪಟ್ಟ ಮಾವುತ. ಕಾಳಪ್ಪ ಎಚ್.ಡಿ. ಕೋಟೆ ತಾಲೂಕಿನ ಬಳ್ಳೆ ಹಾಡಿಯ ನಿವಾಸಿಯಾಗಿದ್ದು, ಅರಮನೆಯ ರೂಬಿ ಎಂಬ ಆನೆಯನ್ನು ನೋಡಿಕೊಳ್ಳುತ್ತಿದ್ದರು.
ಕಾಳಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯ ಇದ್ದರೂ ಸಹ ಆನೆಯನ್ನು ಮುನ್ನಡೆಸಲು ಕಾಳಪ್ಪ ಬಂದಿದ್ದರು. ಆನೆ ಮುನ್ನಡೆಸುವಾಗಲೇ ಮೇಲ್ಭಾಗದಿಂದ ಕೆಳಕ್ಕೆ ಬಿದ್ದು ಕಾಳಪ್ಪ ಮೃತಪಟ್ಟಿದ್ದಾರೆ.
ಆನೆಯನ್ನು ಮುನ್ನಡೆಸುವಾಗ ಕಾಳಪ್ಪ ತಲೆ ತಿರುಗಿ ಕೆಳಗೆ ಬಿದ್ದಿದ್ದಾರೆ. ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಕಾಳಪ್ಪ ಮೃತಪಟ್ಟಿದ್ದಾರೆ. ಕಾಳಪ್ಪ ಕಳೆದ 20 ವರ್ಷಗಳಿಂದ ಆನೆ ಮಾವುತನಾಗಿ ಸೇವೆ ಸಲ್ಲಿಸಿದ್ದಾರೆ.
ಸದ್ಯ ಅವರ ಮೃತದೇಹ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.