ಮೈಸೂರು: ದಸರಾ ಮಹೋತ್ಸವ 2019 ಹಿನ್ನೆಲೆ ಗಜಪಡೆಗೆ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಾಗಿದೆ. ಹೀಗಾಗಿ ಸುಮಾರು 650 ಕೆಜಿ ತೂಕ ಹೊತ್ತು ಗಜಪಡೆ ನಾಯಕ ಅರ್ಜುನ ತಾಲೀಮು ಆರಂಭಿಸಿದ್ದಾನೆ.
ನಮ್ದ, ಗಾಧಿ, ಛಾಪು, ಮರಳುಮೂಟೆ, ಮರದ ಅಂಬಾರಿ ಸೇರಿ ಸುಮಾರು 650 ಕೆ.ಜಿ ತೂಕವನ್ನು ಅರ್ಜುನ ಹೊತ್ತು ತಾಲೀಮು ನಡೆಸುತ್ತಿದ್ದಾನೆ. ಅರಣ್ಯಾಧಿಕಾರಿಗಳು ದಸರಾ ಗಜಪಡೆಗೆ ಕೊನೆಯ ಹಂತದ ತಾಲೀಮು ನೀಡುತ್ತಿದ್ದು, ಅರಮನೆ ಆವರಣದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಿದ ನಂತರ ಮರದ ಅಂಬಾರಿ ಕಟ್ಟುವ ಕಾರ್ಯ ಮಾಡಲಾಯಿತು. ಅರಮನೆ ಆವರಣದಲ್ಲಿ ಕ್ರೇನ್ ಮೂಲಕ ಆನೆ ಬೆನ್ನಿಗೆ ಮಾವುತರು ಮರದ ಅಂಬಾರಿ ಕಟ್ಟಿದರು.
ಈ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾ ಗಜಪಡೆಗೆ ಅಂತಿಮ ಹಂತದ ತಾಲೀಮು ಆರಂಭಗೊಂಡಿದೆ. ಮರದ ಅಂಬಾರಿ ಹೊತ್ತು ಕ್ಯಾಪ್ಟನ್ ಅರ್ಜುನ ಸಾಗಿದ್ದಾನೆ. ಮರದ ಅಂಬಾರಿ ಸುಮಾರು 350 ಕೆಜಿ ತೂಕವಿದ್ದು, ಅದರ ಜೊತೆ 300 ಕೆಜಿ ತೂಕದಷ್ಟು ಮರಳು ಮೂಟೆ ಸೇರಿದಂತೆ ಒಟ್ಟು 650 ಕೆಜಿ ತೂಕವನ್ನು ಅರ್ಜುನ ಹೊತ್ತು ಸಾಗಿದ್ದಾನೆ. ದಸರಾ ದಿನದಂದು ಗಜಪಡೆ ಹೊತ್ತು ಸಾಗುವ ಚಿನ್ನದ ಅಂಬಾರಿ 750 ಕೆಜಿ ಇದೆ.
https://www.youtube.com/watch?v=ghh6dSjQhQU