Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾರ್ಯಕ್ರಮದಲ್ಲಿ ಪ್ರಾಣಹಾನಿಯಾದ್ರೆ ಆಯೋಜಕರೇ ಹೊಣೆಗಾರರು – ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಏನಿದೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಾರ್ಯಕ್ರಮದಲ್ಲಿ ಪ್ರಾಣಹಾನಿಯಾದ್ರೆ ಆಯೋಜಕರೇ ಹೊಣೆಗಾರರು – ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಏನಿದೆ?

Bengaluru City

ಕಾರ್ಯಕ್ರಮದಲ್ಲಿ ಪ್ರಾಣಹಾನಿಯಾದ್ರೆ ಆಯೋಜಕರೇ ಹೊಣೆಗಾರರು – ಜನಸಂದಣಿ ನಿಯಂತ್ರಣ ಮಸೂದೆಯಲ್ಲಿ ಏನಿದೆ?

Public TV
Last updated: August 21, 2025 10:04 pm
Public TV
Share
3 Min Read
UT Khader
SHARE

ಬೆಂಗಳೂರು: ವಿಧಾನಸಭೆಯಲ್ಲಿ (Legislative Assembly) ಮಂಡನೆಯಾಗಿದ್ದ ಜನಸಂದಣಿ ನಿಯಂತ್ರಣ ವಿಧೇಯಕ-2025ಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿಧೇಯಕದ ಪರಿಶೀಲನೆಗೆ ಸದನ ಸಮಿತಿ ರಚಿಸುವುದಾಗಿ ರೂಲಿಂಗ್ ಕೊಟ್ಟಿದ್ದಾರೆ. ವಿಧೇಯಕದ ಕೆಲ ಅಂಶಗಳನ್ನು ವಿರೋಧಿಸಿದ ಬಿಜೆಪಿ, ಜೆಡಿಎಸ್ ಶಾಸಕರು ಸದನ ಸಮಿತಿ ರಚಿಸುವಂತೆ ಒತ್ತಾಯಿಸಿದ್ದರು. ಹಾಗಾಗಿ ಬಿಲ್ ಅಂಗೀಕಾರ ಮಾಡದೇ ಸದನ ಸಮಿತಿ ಪರಿಶೀಲನೆಗೆ ವಹಿಸಲಾಗಿದೆ.

ಬುಧವಾರವಷ್ಟೇ (ಆ.20) ವಿಧೇಯಕ ಮಂಡಿಸಿ ಗುರುವಾರ (ಆ.21) ಅಂಗೀಕಾರಕ್ಕೆ ಗೃಹ ಸಚಿವ ಪರಮೇಶ್ವರ್ (G.Parameshwar) ಪ್ರಸ್ತಾಪಿಸಿದ್ದರು. ಕೌಟುಂಬಿಕ ಕಾರ್ಯಕ್ರಮಗಳಾದ ಮದುವೆ ಸೇರಿ ಇತರೆ ಖಾಸಗಿ ಕಾರ್ಯಕ್ರಮಗಳಿಗೆ ಈ ನಿಯಮಗಳು ಅನ್ವಯ ಆಗಲ್ಲ. ಖಾಸಗಿ ಆವರಣಗಳೊಳಗೆ ನಡೆಸುವ ಕೌಟುಂಬಿಕ ಸಮಾರಂಭಗಳಿಗೆ ಈ ನಿಯಮಗಳು ಅನ್ವಯ ಆಗಲ್ಲ. ಬಾಡಿಗೆ, ಭೋಗ್ಯ, ಗುತ್ತಿಗೆಗೆ ಪಡೆದ ಸ್ಥಳಗಳಲ್ಲಿ ನಡೆಸುವ ಖಾಸಗಿ ಆವರಣಗಳೊಳಗೆ ನಡೆಸುವ ಕಾರ್ಯಕ್ರಮಗಳಿಗೆ ಈ ನಿಯಮಗಳು ಅನ್ವಯ ಆಗಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.ಇದನ್ನೂ ಓದಿ: ಗಣಿ ನಷ್ಟ ವಸೂಲಾತಿಗೆ ಸರ್ಕಾರದಿಂದ ಹೊಸ ಕಾಯ್ದೆ – ಆಯುಕ್ತರ ನೇಮಕಕ್ಕೆ ಮುಂದಾದ ಸರ್ಕಾರ

ಈ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ಮಾತನಾಡಿ, ರಾಜಕೀಯ ಸಮಾವೇಶಗಳಿಗೂ ಅನ್ವಯ ಆಗುತ್ತದೆ, ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾನೂನು ಮಾಡಿ ಅಂತಾ ಆಗ್ರಹಿಸಿದರು. ಶಾಸಕರಾದ ಸುರೇಶ್ ಕುಮಾರ್ ಮಾತನಾಡಿ, ಪೋಸ್ಟ್ ಮಾರ್ಟಮ್ ವಿಧೇಯಕ ಇದು. ಧಾರ್ಮಿಕ ಉತ್ಸವಗಳಿಗೂ ಲಕ್ಷಾಂತರ ಜನ ಸೇರುತ್ತಾರೆ. ಕಾಯ್ದೆ ತರದೇ ನಿಯಮ ರೂಪಿಸಿ ಎಂದು ಆಕ್ರೋಶ ಹೊರಹಾಕಿದರು. ಶಾಸಕ ಸುನೀಲ್ ಕುಮಾರ್ ಮಾತನಾಡಿ, ಪೊಲೀಸರು ಈ ನಿಯಮಗಳನ್ನ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ, ಪ್ರತಿಭಟನೆ, ಕಾರ್ಯಕ್ರಮಗಳನ್ನು ಹತ್ತಿಕ್ಕುವ ಪ್ರಯತ್ನ ಎಂದರು. ಅಂತಿಮವಾಗಿ ವಿರೋಧ ಪಕ್ಷಗಳ ಆಕ್ಷೇಪದ ಹಿನ್ನೆಲೆಯಲ್ಲಿ ಬಿಲ್ ಅಂಗೀಕಾರಕ್ಕೆ ಹಾಕದೇ ಸದನ ಸಮಿತಿಗೆ ವಹಿಸಲಾಗಿದೆ.

ಜನಸಂದಣಿ ನಿಯಂತ್ರಣ ವಿಧೇಯಕದಲ್ಲಿ ಏನಿದೆ?
-ಜನಸಂದಣಿ 7 ಸಾವಿರಕ್ಕಿಂತ ಕಮ್ಮಿ ಇದ್ದರೆ ಪೊಲೀಸ್ ಠಾಣೆ ಅಧಿಕಾರಿಯು ಆಯೋಜಕರ ಅರ್ಜಿಯ ಮೇರೆಗೆ ವಿಚಾರಣೆ ನಡೆಸಿ ಅನುಮತಿ ನೀಡಬಹುದು.
-ಜನಸಂದಣಿ 7 ಸಾವಿರಕ್ಕಿಂತ ಹೆಚ್ಚು 50 ಸಾವಿರಕ್ಕಿಂತ ಕಡಿಮೆ ಇದ್ದಾಗ ಡಿಸಿಪಿ ಅವರು ಪರಿಶೀಲಿಸಿ ಅನುಮತಿ ಕೊಡಲು ಅವಕಾಶ.
-ಜನಸಂದಣಿ 50 ಸಾವಿರಕ್ಕೂ ಹೆಚ್ಚಿದ್ದರೆ ಎಸ್‌ಪಿ ಅಥವಾ ಪೊಲೀಸ್ ಆಯುಕ್ತರು ಆಯೋಜಕರ ಅರ್ಜಿ ಮೇರೆಗೆ ಪರಿಶೀಲಿಸಿ ಅನುಮತಿ ಕೊಡಬಹುದು.
-ಸಮಾರಂಭದ ಆಯೋಜಕರು ಸಮಾರಂಭದ ಹತ್ತು ದಿನಗಳ ಮೊದಲು ಪೂರ್ಣ ವಿವರವನ್ನು ಲಿಖಿತ ಅರ್ಜಿ ಸಲ್ಲಿಸಬೇಕು.
-ಕಾರ್ಯಕ್ರಮದಲ್ಲಿ ಆಸ್ತಿ ಮತ್ತು ಪ್ರಾಣ ಹಾನಿ ಆದರೆ ಕಾರ್ಯಕ್ರಮದ ಆಯೋಜಕರೇ ಹೊಣೆಗಾರರು.
-ಕಾರ್ಯಕ್ರಮಗಳಿಗೆ ಅರ್ಜಿ ಹಾಕಿದ ನಾಲ್ಕು ದಿನಗಳ ಒಳಗೆ ಪರಿಶೀಲಿಸಿ, ಅನುಮತಿ ಕೊಡುವ ಅಥವಾ ಕೊಡದಿರುವ ಬಗ್ಗೆ ಸಕ್ಷಮ ಪ್ರಾಧಿಕಾರಗಳು ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಇದನ್ನು ಲಿಖಿತವಾಗಿ ಆಯೋಜಕರಿಗೆ ತಿಳಿಸಬೇಕು.
-ಅನುಮತಿ ಪಡೆಯುವ ವೇಳೆ ಆಯೋಜಕರು 1 ಕೋಟಿ ರೂ. ಮೌಲ್ಯದ ನಷ್ಟ ಭರ್ತಿ ಬಾಂಡ್ ಸಲ್ಲಿಸಬೇಕು.
-ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜಿಸಿದರೆ 3 ವರ್ಷದಿಂದ 7 ವರ್ಷದವರೆಗೆ ಕಾರಾಗೃಹ ವಾಸ ಹಾಗೂ 1 ಕೋಟಿ ರೂ.ವರೆಗೆ ದಂಡ.
-ಕಾರ್ಯಕ್ರಮದಲ್ಲಿ ಸುಳ್ಳು ವದಂತಿ ಹಬ್ಬಿಸಿ, ಹಿಂಸಾಚಾರ, ಕುಕೃತ್ಯ ಎಸಗಲು ಪ್ರೇರೆಪಿಸಿದರೆ, ಅದರಿಂದ ನಾಗರಿಕರಿಗೆ ತೊಂದರೆ, ಶಾಂತಿಭಂಗ ಉಂಟಾದರೆ 3 ವರ್ಷದವರೆಗೆ ಜೈಲು ಶಿಕ್ಷೆ, 50 ಸಾವಿರ ರೂ.ವರೆಗೆ ದಂಡ
-ಜನಸಂದಣಿ ವಿಪತ್ತಿಗೆ ಕಾರಣವಾದರೆ, ವ್ಯಕ್ತಿಯ ದುಷ್ಕೃತ್ಯದಿಂದ ನಾಗರಿಕರಿಗೆ ದೈಹಿಕ ಆಸ್ತಿ ಹಾನಿಯಾದರೆ 3 ವರ್ಷದಿಂದ 7 ವರ್ಷದವರೆಗೆ ಜೈಲುಶಿಕ್ಷೆ, ಪ್ರಾಣ ಹಾನಿಯಾದರೆ ಕನಿಷ್ಟ 10 ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ.
-ಪೊಲೀಸರ ನಿರ್ದೇಶನಗಳನ್ನು ಪಾಲಿಸದಿದ್ದರೆ, ಉಲ್ಲಂಘಿಸಿದರೆ 1 ತಿಂಗಳವರೆಗೆ ಸಮುದಾಯ ಸೇವೆ ಮಾಡಬೇಕು ಮತ್ತು 50 ಸಾವಿರ ರೂ. ಜುಲ್ಮಾನೆ ಭರಿಸಬೇಕು.ಇದನ್ನೂ ಓದಿ: ಬೀದಿ ನಾಯಿಗಳ ಸ್ಥಳಾಂತರ ಸಂಬಂಧ ಎಂಸಿಡಿ ಅಧಿಸೂಚನೆ – ಅರ್ಜಿಯ ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ

TAGGED:bengaluruCrowd ControlG ParameshwarLegislative Assemblyಜನಸಂದಣಿ ನಿಯಂತ್ರಣಜಿ.ಪರಮೇಶ್ವರ್ಬೆಂಗಳೂರುವಿಧಾನಸಭೆಸದನ ಸಮಿತಿ
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

naseer ahmed 1
Bengaluru City

ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್ ಅಹ್ಮದ್‌ ರಾಜೀನಾಮೆ

Public TV
By Public TV
5 minutes ago
Naxal
Latest

ಭಾರತದಲ್ಲಿ ನಕ್ಸಲ್‌ ಚಳವಳಿಯ ಅಂತ್ಯ – ʻರೆಡ್‌ ಕಾರಿಡಾರ್‌ʼ ಇತಿಹಾಸದ ಇನ್‌ಸೈಡ್ ಸ್ಟೋರಿ!

Public TV
By Public TV
8 hours ago
SRH 1
Cricket

ಹಿಂಗೆ ಬೆಂಕಿ ಬೌಲಿಂಗ್‌ಗೆ ರಾಯಲ್ಸ್‌ ಬರ್ನ್‌ – ಹೈದ್ರಾಬಾದ್‌ನಲ್ಲಿ ಸನ್‌ ಶೈನಿಂಗ್‌

Public TV
By Public TV
8 hours ago
Praful Hinge 1 1
Cricket

1 ಪಂದ್ಯ, 3 ವಿಕೆಟ್‌, 3 ದಾಖಲೆ – ʻರಾಜʼರನ್ನು ಉರುಳಿಸಿ ಇತಿಹಾಸ ಬರೆದ ಪ್ರಫುಲ್‌ ಹಿಂಗೆ ಯಾರು?

Public TV
By Public TV
8 hours ago
MLAs Meet Mallikarjun Kharge in Delhi
Bengaluru City

ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಶಾಸಕರು – ಮೇ 15ರೊಳಗೆ ಕ್ಯಾಬಿನೆಟ್ ಪುನಾರಚನೆಗೆ ಒತ್ತಾಯ

Public TV
By Public TV
9 hours ago
Strait of Hormuz 1
Latest

1 ದಿನಕ್ಕೆ 4 ಸಾವಿರ ಕೋಟಿ ರೂ. – ನೌಕಾ ದಿಗ್ಬಂಧನದಿಂದ ಇರಾನ್‌ ಆರ್ಥಿಕತೆಗೆ ಭಾರೀ ನಷ್ಟ!

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?