ಬೆಂಗಳೂರು: ನಗರದ ಬಾಣಸವಾಡಿಯ ಖಾಲಿ ನಿವೇಶನವೊಂದರ ಸಮತಟ್ಟು ಮಾಡುತ್ತಿದ್ದ ವೇಳೆ ನಾಗರಹಾವು ಕಾಣಿಸಿಕೊಂಡಿದೆ.
ಖಾಲಿ ನಿವೇಶನವನ್ನು ಜೆಸಿಬಿ ಮೂಲಕ ಸಮತಟ್ಟು ಮಾಡುವಾಗ ಬುಸ್ ಎಂದು ನಾಗರಹಾವೊಂದು ಬಿಲದಿಂದ ಹೊರಬಂದಿದೆ. ನಾಗರಹಾವನ್ನು ನೋಡಿದ ಮಾಲೀಕರು ತಕ್ಷಣ ಕೆಲಸ ನಿಲ್ಲಿಸಿ ಸ್ನೇಕ್ ಮೋಹನ್ಗೆ ಕರೆ ಮಾಡಿದರು.
ಈ ವಿಷಯ ತಿಳಿದು ಸ್ನೇಕ್ ಮೋಹನ್ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ನಾಗರಹಾವನ್ನು ಹಿಡಿದು ಚೀಲದಲ್ಲಿ ಹಾಕಿಕೊಂಡು ಸುರಕ್ಷಿತ ಸ್ಥಳದಲ್ಲಿ ಬಿಟ್ಟರು. ಅಲ್ಲದೆ ಆ ನಾಗರಹಾವಿನ ಆರೇಳು ಮೊಟ್ಟೆಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸ್ನೇಕ್ ಮೋಹನ್ ನಾಗರಹಾವನ್ನು ಹಿಡಿದ ರೋಚಕ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಆಗಿದೆ.