ಹೈದರಾಬಾದ್: ಕ್ರೀಡಾ ಪಟು ಪಿ.ವಿ. ಸಿಂಧುಗೆ ಟಾಲಿವುಡ್ ನಟ ಚಿರಂಜೀವಿ ವಿಶೇಷ ಔತಣಕೂಟ ಏರ್ಪಡಿಸಿ ಸನ್ಮಾನ ಮಾಡಿದ್ದಾರೆ.
ಟೊಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ಪಿ.ವಿ.ಸಿಂಧು ದೇಶಕ್ಕೆ ಕೀರ್ತಿ ತಂದಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಸಿಂಧು ಪಾತ್ರರಾಗಿದ್ದರು. ಪದಕ ಗೆದ್ದು ದೇಶದ ಹಿರಿಮೆ ಹೆಚ್ಚಿಸಿದ ಸಿಂಧುಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು. ಇದೀಗ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಅವರ ಪುತ್ರ ರಾಮ್ ಚರಣ್ ಅವರು ತಮ್ಮ ಮನೆಯಲ್ಲಿ ಸಾಧಕಿ ಸಿಂಧು ಅವರಿಗಾಗಿ ಒಂದು ವಿಶೇಷ ಔತಣಕೂಟವನ್ನೇ ಏರ್ಪಡಿಸಿದ್ದರು. ಇದೇ ವೇಳೆ ತೆಲುಗು ಚಿತ್ರರಂಗದ ಗಣ್ಯರು ಸಿಂಧುಗೆ ಸನ್ಮಾನಿಸಿದ್ದಾರೆ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನಟ ಚಿರಂಜೀವಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜಾತಿ ಗಣತಿ ವರದಿಯನ್ನ ಬಿಜೆಪಿ ಒಪ್ಪಿಕೊಳ್ಳಲು ತಯಾರಿಲ್ಲ: ಸಿದ್ದರಾಮಯ್ಯ
View this post on Instagram
ವಿಶೇಷ ಔತಣಕೂಟದಲ್ಲಿ ಅತಿಥಿಗಳಾಗಿ ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ಮತ್ತು ತೆಲಂಗಾಣದ ಇತರ ಪ್ರಸಿದ್ಧ ವ್ಯಕ್ತಿಗಳು ಸೇರಿದ್ದರು. ತೆಲಂಗಾಣ ಐಟಿ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್, ನಟಿ ಸುಹಾಸಿನಿ, ನಾಗಾರ್ಜುನ ಮತ್ತು ಅವರ ಪುತ್ರ ಅಖಿಲ್, ರಾಣಾ ದಗ್ಗುಬಾಟಿ, ವರುಣ್ ತೇಜ್, ಸಾಯಿ ಧರಮ್ ತೇಜ್, ನಿರ್ಮಾಪಕ ಅಲ್ಲು ಅರವಿಂದ್ ಮತ್ತು ಇತರರು ಸೇರಿದ್ದರು.
Thank you for being a superb host @KChiruTweets sir ???????? It was an eventful night with fun loving guests and great conversations! It’s always a pleasure being a part of your cheerful, joyous company! https://t.co/UkoMLJZi24
— Pvsindhu (@Pvsindhu1) August 28, 2021
ಪ್ರೀತಿಯ ಅತಿಥಿಗಳು ಮತ್ತು ಉತ್ತಮ ಸಂಭಾಷಣೆಗಳೊಂದಿಗೆ ಈ ಸಂಭ್ರಮದ ಪಾಟೀಯಲ್ಲಿ ನಾನು ಕಳೆದಿದ್ದೇನೆ. ನಾನು ಈ ಔತಣಕೂಟದ ಭಾಗವಾಗಿರುವುದು ತುಂಬಾ ಸಂತೋಷವಾಗಿದೆ. ಧನ್ಯವಾದಗಳು ಚಿರಂಜೀವಿ ಸರ್ ಎಂದು ಸಿಂಧು ಕೂಡ ಟ್ವೀಟ್ ಮಾಡಿದ್ದಾರೆ.