ಚಿಕ್ಕಮಗಳೂರು: ಉತ್ತರಾಖಂಡ್ ರಾಜ್ಯದ ಹರಿದ್ವಾರ ಮೂಲದ ಮಹಿಳೆಯೊಬ್ಬರನ್ನು ಚಿಕ್ಕಮಗಳೂರಿನ ಜನತೆ ಉಪಚರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಅನ್ನ-ನೀರು ಇಲ್ಲದೆ ನಿತ್ರಾಣಗೊಂಡು ಮೂಡಿಗೆರೆ ತಾಲೂಕಿನ ಬಾಳೂರಿನ ಬಸ್ ನಿಲ್ದಾಣದಲ್ಲಿ ಸುಮಾರು 55 ವರ್ಷದ ಈ ಮಹಿಳೆಯೊಬ್ಬರು ಬಿದ್ದಿದ್ದರು. ಉರ್ದು ಮಾತನಾಡುತ್ತಿರುವ ಇವರು ತನ್ನ ಹೆಸರು ಅನಿಸ್ ಕೋಟಾನ್ ಎಂದು ಹೇಳುತ್ತಿದ್ದಾರೆ.
ಪತಿ ನಿಸಾರ್ ಅಹಮದ್ ತೀರಿಕೊಂಡ ಬಳಿಕ ದಾರಿ ತಪ್ಪಿ ಬಸ್ಸೊಂದನ್ನ ಹತ್ತಿ ಇಲ್ಲಿಗೆ ಬಂದಿರೋದಾಗಿ ಹೇಳುತ್ತಿದ್ದಾರೆ. ನನ್ನ ಸ್ವಂತ ಊರು ಹರಿದ್ವಾರದ ಬಳಿ ಇರೋದು. ನಾನು ಹರಿದ್ವಾರಕ್ಕೆ ಹೋದ್ರೆ ಅಲ್ಲಿಂದ ನನ್ನ ಗ್ರಾಮಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಕಳೆದ ಎರಡು ದಿನಗಳಿಂದ ಬಸ್ ನಿಲ್ದಾಣದಲ್ಲೇ ತಂಗಿದ್ದ ಈಕೆಯನ್ನು ಸ್ಥಳೀಯರು ಉಪಚರಿಸಿ, ಊಟ ಹಾಕಿ, ಹೊಸ ಬಟ್ಟೆ ಕೊಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.