ಬೆಂಗಳೂರು: ಮಾರ್ಚ್ 31ರಂದು ಅಯ್ಯಪ್ಪ ಮಾಲೆ ಧರಿಸಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಶಬರಿಮಲೆಗೆ ತೆರಳಿದ್ದಾರೆ.
ಬೆಂಗಳೂರಿನ ಶ್ರೀರಾಂಪುರದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇರುಮುಡಿ ಕಟ್ಟುವ ಕಾರ್ಯ ನಡೆಯುತ್ತಿದ್ದು ಅಲ್ಲಿಂದಲೇ ಶಬರಿಮಲೆಗೆ ಹೊರಡಲಿದ್ದಾರೆ. ಈಗಾಗಲೇ ಇರುಮುಡಿ ಪೂಜೆ ಶುರುವಾಗಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಶಬರಿಮಲೆಗೆ ತೆರಳಲಿರುವ ತಂಡ ಅಯ್ಯಪ್ಪ ದರ್ಶನ ಮುಗಿಸಿ 8ನೇ ತಾರೀಖಿನಂದು ವಾಪಸ್ಸಾಗಲಿದ್ದಾರೆ.
ದರ್ಶನ್ ಜೊತೆ ನಿರ್ದೇಶಕರಾದ ಶಿವಮಣಿ, ಎಂ.ಡಿ ಶ್ರೀಧರ್, ಹೆಚ್. ವಾಸು ಸೇರಿದಂತೆ ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಸೇರಿ ಒಟ್ಟು 36 ಮಂದಿ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ತೆರಳಲಿದ್ದಾರೆ.