ಬೆಂಗಳೂರು: ಸತ್ತೇ ಹೋಗಿದ್ದಾನೆ ಎಂದು ಬಿಂಬಿಸಿಕೊಂಡು ತಲೆಮರೆಸಿಕೊಂಡಿದ್ದ ರೌಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಪ್ರಕರಣದ ಆರೋಪಿ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಬಂಧಿತ. ಎರಡು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡಿಕೊಂಡಿದ್ದ. ಮನೆ ಬಳಿ ಪೊಲೀಸರು ವಿಚಾರಿಸಿದಾಗ ಸತ್ತೇ ಹೋಗಿದ್ದಾನೆ ಎಂದಿತ್ತು ಕುಟುಂಬ. ಇದನ್ನೂ ಓದಿ: 200 ಮಕ್ಕಳನ್ನು ಶಾಲೆಗೆ ಕಳಿಸದೇ ಇಸ್ಲಾಮಿಕ್ ಶಿಕ್ಷಣ – ಬೆಂಗಳೂರಿನ ಅನಾಥಾಶ್ರಮದ ಮೇಲೆ NCPCR ದಾಳಿ
ಮಲ್ಲಿಯ ಗೆಳೆಯರು, ಸೇರಿ ಯಾವ ಪರಿಚಿತರನ್ನ ಕೇಳಿದರೂ ಸತ್ತಿದ್ದಾನೆ ಎಂದು ಮಾಹಿತಿ ಸಿಕ್ಕಿತ್ತು. ಸತ್ತು ಹೋಗಿದ್ದಾನೆ ಎನ್ನುವುದಕ್ಕೆ ಬೇಕಾದ ದಾಖಲೆಯನ್ನು ಸಹ ಕುಟುಂಬ ಮಾಡಿಟ್ಟುಕೊಂಡಿತ್ತು.
ಸಿಸಿಬಿ ಪೊಲೀಸರಿಗೆ ಅನುಮಾನ ಬಂದು ತಲಾಶ್ ಮಾಡಿದಾಗ ಊರೂರು ಸುತ್ತುತ್ತಾ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಈಗ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಮುರುಘಾ ಶ್ರೀಗೆ ರಿಲೀಫ್ – ಮಧ್ಯಾಹ್ನ ಬಂಧನ, ಸಂಜೆ ಬಿಡುಗಡೆಗೆ ಆದೇಶ : ಕೋರ್ಟ್ನಲ್ಲಿ ಏನಾಯ್ತು?