ಹಳೇ ದ್ವೇಷಕ್ಕೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

Public TV
1 Min Read
BELAGAVI MURDER

ಬೆಳಗಾವಿ: ಹಳೇ ದ್ವೇಷದ (Hatred) ಹಿನ್ನೆಲೆ ಇಬ್ಬರ ನಡುವೆ ಜಗಳ (Uproar) ನಡೆದು 32 ವರ್ಷದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

ಮೃತ ವ್ಯಕ್ತಿಯನ್ನು ಕಿತ್ತೂರು (Kittur) ತಾಲೂಕಿನ ತಿಗಡೊಳ್ಳಿ ಗ್ರಾಮದ ರಾಮಚಂದ್ರ ಆರೇರ್ (32) ಎಂದು ಗುರುತಿಸಲಾಗಿದೆ. ಹತ್ಯೆಯಾದ ರಾಮಚಂದ್ರ ಹಾಗೂ ಹತ್ಯೆ ಮಾಡಿದ ಕಲ್ಲಪ್ಪ ಕ್ಯಾತನವರ್ (48) ಇಬ್ಬರ ನಡುವೆ ಹಳೇ ದ್ವೇಷದ ಹಿನ್ನೆಲೆ ಗಲಾಟೆ ನಡೆದಿದೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ರಾಮಚಂದ್ರ ಆರೇರ್ ಮೇಲೆ ಕಲ್ಲಪ್ಪ ತಲ್ವಾರ್‌ನಿಂದ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಚೈತ್ರಾ ಕುಂದಾಪುರಗೆ ಪಿಟ್ಸ್ ಬಂದಿಲ್ಲ, ನೊರೆ ಅವರೇ ಮಾಡಿಕೊಂಡಿರೋದು: ಡಾ.ದಿವ್ಯಪ್ರಕಾಶ್

ಗಲಾಟೆಯಲ್ಲಿ ಕಲ್ಲಪ್ಪ ಕ್ಯಾತನವರ್‌ಗೆ ಕಿವಿ ಮತ್ತು ಹಿಂಭಾಗ ಗಾಯವಾಗಿದ್ದು, ಧಾರವಾಡ (Dharwad) ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾಮಚಂದ್ರ ಆರೇರ್‌ನ ಎರಡೂ ಕೈಗಳಿಗೆ ಭಾರೀ ಗಾಯಗಳಾಗಿದ್ದು, ಅಧಿಕ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಎಗ್ ರೈಸ್ ತಿಂದು ಹಣ ಕೇಳಿದ್ದಕ್ಕೆ ಶುರುವಾದ ಜಗಳ – ಚಾಕುವಿನಿಂದ ಇರಿದು ಅಂಗಡಿ ಮಾಲೀಕನ ಕೊಲೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article