ಬೆಂಗಳೂರು: ಅಗ್ನಿ ಅನಾಹುತದಲ್ಲಿ ಮಾಗಡಿ ಬಿಜೆಪಿ ಅಧ್ಯಕ್ಷರಿಗೆ ಸೇರಿದ್ದ ಕೋಟ್ಯಂತರ ರೂಪಾಯಿಯ ಐಶಾರಾಮಿ ಬಂಗಲೆ ಹೊತ್ತುರಿದ ಘಟನೆ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಗ್ರಾಮದಲ್ಲಿ ಇಂದು ನಡೆದಿದೆ.
ಮಾಗಡಿ ಬಿಜೆಪಿ ಅಧ್ಯಕ್ಷ ರಂಗಧಾಮಯ್ಯನ ಅವರಿಗೆ ಈ ಬಂಗಲೆ ಸೇರಿದ್ದು, ಬರೋಬ್ಬರಿ 16 ಕೋಟಿ ರೂ. ಖರ್ಚು ಮಾಡಿ ರಂಗಧಾಮಯ್ಯನವರು ಈ ಐಶಾರಾಮಿಯಾಗಿ ಬಂಗಲೆ ನಿರ್ಮಿಸಿದ್ದರು. ಆದರೆ ಇಂದು ದೇವರ ಪೂಜೆಗಾಗಿ ಬಂಗಲೆಯೊಳಗೆ ಹಚ್ಚಿಟ್ಟಿದ್ದ ದೀಪದಿಂದ ಈ ಭಾರಿ ಅವಘಡ ಸಂಭವಿಸಿದೆ.
- Advertisement 2
- Advertisement 3
ಈಗಾಗಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಈ ಅಗ್ನಿ ಅನಾಹುತದಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಆದ್ರೆ ಬಂಗಲೆಯೊಳಗಿದ್ದ ಹಲವು ಬೆಲೆಬಾಳುವ ವಸ್ತುಗಳು ಹಾಗೂ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು ಸುಟ್ಟು ಸಾಕಷ್ಟು ನಷ್ಟವಾಗಿದೆ.
- Advertisement 4
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.