ಹಿಂದಿ ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ ಮೂಲಕ ಗಮನ ಸೆಳೆದ ಜೋಡಿ ತೇಜಸ್ವಿ ಪ್ರಕಾಶ್ ಮತ್ತು ಕರಣ್ ಕುಂದ್ರಾ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ನಿಂದ ಶುರುವಾದ ಈ ಜೋಡಿಯ ಪಯಣ ಇದೀಗ ಮದುವೆಯ ಹಂತಕ್ಕೆ ಬಂದು ನಿಂತಿದೆ. ಸದ್ಯ ಈ ಜೋಡಿ ಹೊಸ ಫೋಟೋಶೂಟ್ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.
View this post on Instagram
ಬಿಗ್ ಬಾಸ್ ಸೀಸನ್ 15ರಲ್ಲಿ ತೇಜಸ್ವಿ ಮತ್ತು ಕರಣ್ ಕುಂದ್ರಾ ಕಮಾಲ್ ಮಾಡಿದ್ದರು. ದೊಡ್ಮನೆಯಿಂದ ಪರಿಚಿತರಾದ ಈ ಜೋಡಿ, ಬಳಿಕ ಸ್ನೇಹದಿಂದ ಪ್ರೀತಿಗೆ ತಿರುಗಿ ಇದೀಗ ಮುಂಬೈನ ಬೀದಿ ಬೀದಿಗಳಲ್ಲಿ ಡೇಟಿಂಗ್ ಮಾಡುತ್ತಿದ್ದಾರೆ. ತಮ್ಮ ಪ್ರೀತಿಯನ್ನ ಮುಚ್ಚಿಡದೇ ಈಗಾಗಲೇ ಸಾಕಷ್ಟು ತಮ್ಮ ಪ್ರೀತಿಯ ವಿಚಾರವನ್ನು ಅಧಿಕೃತವಾಗಿ ತೇಜಸ್ವಿ ಮತ್ತು ಕರಣ್ ತಿಳಿಸಿದ್ದಾರೆ. ಮೊದಲು ಕೆರಿಯರ್ ಕಡೆ ಗಮನ ಕೊಡ್ತಿರುವ ಈ ಜೋಡಿ, ಮದುವೆಯ ಬಗ್ಗೆ ಸದ್ಯ ಯಾವುದೇ ಪ್ಲ್ಯಾನ್ ಇಲ್ವಂತೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಬದಲು ಆರ್.ಆರ್.ಆರ್ ಸಿನಿಮಾ ಆಸ್ಕರ್ ಗೆ ಕಳುಹಿಸಿ: ಮತ್ತೆ ತಿವಿದ ಅನುರಾಗ್ ಕಶ್ಯಪ್
View this post on Instagram
ಇನ್ನು ಬಿಗ್ ಬಾಸ್ ಸೀಸನ್ 15ರಲ್ಲಿ ತೇಜಸ್ವಿ ಪ್ರಕಾಶ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಸದ್ಯ ಕಿರುತೆರೆ ಜನಪ್ರಿಯ ಶೋ ನಾಗಿನ್ ಸೀರಿಯಲ್ನಲ್ಲಿ ನಾಗಿನ್ ಆಗಿ ಪ್ರಮುಖ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು ಕರಣ್ ಕುಂದ್ರಾ ಆಲ್ಬಂ ಸಾಂಗ್ಸ್, ಜೊತೆ ಖಾಸಗಿ ವಾಹಿನಿಯ ನಿರೂಪಕನಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಜೋಡಿಯ ನಯಾ ಫೋಟೋಶೂಟ್ ನೋಡಿ, ಫ್ಯಾನ್ಸ್ ಫಿದಾ ಆಗಿದ್ದಾರೆ.