ಬಿಗ್ ಬಾಸ್ (Bigg Boss) ಮನೆಯಲ್ಲಿ ಜಯಶ್ರೀ ಹಾಗೂ ಸೋಮಣ್ಣ ನಡುವೆ ನಡೆಯುವ ಜಟಾಪಟಿ ಇದು ಹೊಸದೇನು ಅಲ್ಲ. ಆದರೆ ಇಂದು ಜಯಶ್ರೀ ಮಾತನಾಡಿದ ರೀತಿ ಯಾರಿಗೂ ಸರಿ ಎನಿಸಲೇ ಇಲ್ಲ. ಸೋಮಣ್ಣ ಈ ಸಲ ಒರಟಾಗಿ ಮಾತನಾಡಲೇ ಇಲ್ಲ. ಆದರೂ ಜಯಶ್ರೀ ನಾಲಿಗೆ ಹರಿಬಿಟ್ಟಿದ್ದಾರೆ.
ಮಧ್ಯಾಹ್ನದ ಸಮಯದಲ್ಲಿ ಗುರೂಜಿ ಹಾಗೂ ಸೋಮಣ್ಣ ಇಬ್ಬರು ಅಡುಗೆ ತಯಾರಿ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಜಯಶ್ರೀ (Jayashree) ಕೂಡ ಬಂದಿದ್ದಾರೆ. ಅದಾಗಲೇ ಸೋನು ಅಲ್ಲಿಯೇ ಕುಳಿತಿದ್ದಳು. ಆಗ ಸೋಮಣ್ಣ ಕೂಡ ಗುರೂಜಿ ಜೊತೆಗೆ ಸೇರಿಕೊಂಡು ಬಿಟ್ಟರು ಎಂದಿದ್ದಾರೆ. ಅದಕ್ಕೆ ಸೋಮಣ್ಣ ಒಂದು ಇಡೀ ದಿನ ಅಡುಗೆ ಮಾಡುವುದಕ್ಕೆ ನನಗೆ ಅವಕಾಶವೇ ಸಿಗುತ್ತಿಲ್ಲ ಎಂದು ಸೋಮಣ್ಣ (Somanna) ಹೇಳಿದಾಗ, ಜಯಶ್ರೀ ಒಂದು ದಿನ ಅಡುಗೆ ಮಾಡಿ ಎಂದಿದ್ದಾರೆ. ಇದನ್ನೂ ಓದಿ:ಏನ್ ಐಡ್ಯಾ ಗುರೂ: ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಫಿಕ್ಸ್: ಫೇಸ್ ಟ್ರಾನ್ಸ್ ಪ್ಲಾಂಟ್ ಬಳಸಿ ಅನಿರುದ್ಧಗೆ ಗೇಟ್ ಪಾಸ್
ನಂತರ ಸೋನು ಗುರೂಜಿ ನಿಮಗೆ ಗೊತ್ತಿರುವುದೆಲ್ಲವನ್ನು ಸೋಮಣ್ಣನಿಗೆ ಹೇಳಿಕೊಡಬೇಡಿ ಆಮೇಲೆ ಸೋಮಣ್ಣನು ಅಷ್ಟೇ ಎಂದು ಬೇರೆ ಮೀನಿಂಗ್ನಲ್ಲಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಗುರೂಜಿ ಗದರಿಸಿ ಬಾ ಇಲ್ಲಿ ಅಂತ ಸೋನುಳನ್ನು ಕರೆದು ಸೋಮಣ್ಣ ಪಾಪ ಯಾರು ಸಿಕ್ಕಿಲ್ಲ ಅಂತ ಒದ್ದಾಡುತ್ತಿದ್ದಾರೆ ಎಂದಿದ್ದಾರೆ. ಮತ್ತೆ ಸೋನು ನಿಮ್ಮ ಡಬಲ್ ಮೀನಿಂಗ್ನ ಸೋಮಣ್ಣನಿಗೆ ಹೇಳಿಕೊಡಬೇಡಿ. ಅವರು ಹಾಳಾಗುತ್ತಾರೆ ಎಂದು ಸೋಮಣ್ಣನಿಗೆ ವಿವರಣೆ ನೀಡಿದಳು. ಹಾಗೂ ಸೋಮಣ್ಣ ನಾನು ಹಾಳಾಗುವುದಕ್ಕೆ ಕಾರಣ ಜಯಶ್ರೀ ಅಂತ ಹೇಳಿದ್ರು. ರೂಲ್ಸ್ನೆಲ್ಲಾ ಬ್ರೇಕ್ ಮಾಡಿ ಮಾತುನಾಡುವುದೆಲ್ಲ ನಮ್ಮ ಜಯಶ್ರೀ ಅವರು ಎಂದು ಈ ವೇಳೆ ಸೋಮಣ್ಣ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅರ್ಧ ಗಂಟೆ ಮಲಗುವ ಅವಕಾಶವನ್ನು ಆರ್ಯವರ್ಧನ್ ಹಾಗೂ ಸೋಮಣ್ಣ ಅವರಿಗೆ ನೀಡಿತ್ತು. ಅದರಂತೆ ಗುರೂಜಿ ಊಟ ಮಾಡಿ ಮಲಗಲು ಹೋಗಿದ್ದರು. ಆದ್ರೆ ಅದನ್ನು ತಲೆಯಲ್ಲಿ ಇಟ್ಟುಕೊಳ್ಳದೆ ಸೋನು ಹಾಗೂ ಜಯಶ್ರೀ ಬೆಡ್ ರೂಮಿನಲ್ಲಿಯೇ ಮಾತನಾಡುತ್ತಿದ್ದರು. ಜಯಶ್ರೀ ಮಾತನಾಡುತ್ತಾ ಸೋಮಣ್ಣ ಬಗ್ಗೆ ಕಿಡಿಕಾರಿದ್ದಾರೆ. ಕಚಕಚ ಅಂತ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಸೋಮಣ್ಣ ಮಾತನಾಡುವುದು ನನಗೆ ಇಷ್ಟವೇ ಆಗುವುದಿಲ್ಲ. ನಾನು ಒಂದು ಸಲ ನೋಡುತ್ತೀನಿ ಎರಡು ಸಲ ನೋಡ್ತೀನಿ, ಮೂರನೇ ಸಲ ಚಪ್ಪಲಿಗೆ ಬಟ್ಟೆ ಸುತ್ತಿಕೊಂಡು ಹೊಡೆದಂಗೆ ಮಾತನಾಡ್ತೀನಿ ಎಂದು ಸೋಮಣ್ಣ ವಿರುದ್ಧ ಜಯಶ್ರೀ ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]