ಬಿಗ್ ಬಾಸ್ ಮನೆಯ (Bigg Boss) ವಾರದ ಪಂಚಾಯಿತಿಯಲ್ಲಿ ಕಳಪೆ ವಿಚಾರಕ್ಕೆ ಸಂವಾದ ನಡೆದಿದೆ. ಕಳಪೆ ಕೊಡುವ ವಿಚಾರವಾಗಿ ಅಮೂಲ್ಯ ನಡೆದುಕೊಂಡ ರೀತಿಗೆ ಕಿಚ್ಚ ಸುದೀಪ್ (Kiccha Sudeep) ಖಡಕ್ ಆಗಿ ಬೆಂಡೆತ್ತಿದ್ದಾರೆ. ಕಳಪೆ ಹಣೆಪಟ್ಟಿ ಕೊಡುವ ವಿಷ್ಯದಲ್ಲಿ ನಿಮಗೆ ಜಡ್ಜ್ ಮಾಡೋಕೆ ಬಂದಿಲ್ಲ ಎಂದು ಕಿಚ್ಚನ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪ್ರತಿ ವಾರದಂತೆ ಈ ವಾರವು ಉತ್ತಮ ಮತ್ತು ಕಳಪೆ ಕೊಡುವ ಪದ್ಧತಿ ಇತ್ತು. ಅದರಂತೆ ಮನೆಮಂದಿ ಎಲ್ಲರೂ ಈ ಕುರಿತು ವೋಟ್ ಮಾಡಬೇಕು. ಆಗ ಅಮೂಲ್ಯ ಗೌಡ (Amulya Gowda) ನನ್ನನ್ನು ಕಳಪೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಹಾಗಾಗಿ ನಾನು ಗುರೂಜಿ ಕಳಪೆ ಕೊಡುತ್ತೇನೆ. ಅದರೆ ಅವರು ಕಳಪೆ ಅಲ್ಲ ಎಂದು ಕೂಡ ಮಾತನಾಡಿದ್ದರು. ಈ ವಿಚಾರವಾಗಿ ಸುದೀಪ್, ವೀಕೆಂಡ್ನಲ್ಲಿ ಮಾತನಾಡಿದ್ದಾರೆ.
ಕಳಪೆ ಮತ್ತು ಉತ್ತಮ ಎಂದು ಹೇಗೆ ಪರಿಗಣಿಸುತ್ತೇವೆ. ಬಿಗ್ ಬಾಸ್ (Bigg Boss) ಏನಾದ್ರು ಕಳಪೆಗೆ ರೂಲ್ಸ್ ಹೇಳಿದ್ದಾರಾ ಎಂದು ಸುದೀಪ್ ಕೇಳಿದ್ದಾರೆ. ಅಮೂಲ್ಯ ಅವರ ನಡೆಯ ಬಗ್ಗೆ ಕಿಚ್ಚ ಪ್ರಶ್ನೆ ಮಾಡಿದ್ದಾರೆ. ಎಲ್ಲರೂ ಈ ವಾರ ಚೆನ್ನಾಗಿ ಅಡಿದ್ದರು. ಒಬ್ಬರಿಗೆ ಕಳಪೆ ಕೊಡೋದು ಕಷ್ಟವಾಗಿತ್ತು. ಹಾಗೇ ನೋಡಿದ್ರೆ ನಾನು ಈ ವಾರ ಕೆಲ ಆಟದಲ್ಲಿ ಸೋತಿದ್ದೆ ಎಂದು ಅಮೂಲ್ಯ ಮಾತನಾಡಿದ್ದಾರೆ. ಇದನ್ನೂ ಓದಿ: ರಾಜಣ್ಣ ಮನೆಯ ಮಿಸ್ಟರ್ ಗರಗಸ ಎಂದು ಕಿಚ್ಚನ ಬಳಿ ದೂರಿಟ್ಟ ಮನೆಮಂದಿ
ಬಳಿಕ ಸುದೀಪ್, ನಿಮಗೆ ಕಳಪೆ ಕೊಡುವ ವಿಚಾರದಲ್ಲಿ ಜಡ್ಜ್ ಮಾಡೋಕೆ ಬರಲಿಲ್ಲ ಎಂದು ಹೇಳಿ ಎಂದು ಕಿಚ್ಚ ಕೊಂಚ ಖಾರವಾಗಿಯೇ ಅಮೂಲ್ಯಗೆ ಮಾತನಾಡಿದ್ದಾರೆ.