Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಡೆಮನೆ: ಸಿನಿಮಾ ಹಂಬಲ ಹಾಡುಗಾರನನ್ನು ನಿರ್ಮಾಪಕನನ್ನಾಗಿಸಿತು!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಡೆಮನೆ: ಸಿನಿಮಾ ಹಂಬಲ ಹಾಡುಗಾರನನ್ನು ನಿರ್ಮಾಪಕನನ್ನಾಗಿಸಿತು!

Bengaluru City

ಕಡೆಮನೆ: ಸಿನಿಮಾ ಹಂಬಲ ಹಾಡುಗಾರನನ್ನು ನಿರ್ಮಾಪಕನನ್ನಾಗಿಸಿತು!

Public TV
Last updated: October 14, 2019 2:28 pm
Public TV
Share
2 Min Read
KADEMANE
SHARE

ಬೆಂಗಳೂರು: ಈ ಸಿನಿಮಾ ಎಂಬ ಮಾಯೆ ಯಾರನ್ನು ಯಾವ ದಿಕ್ಕುಗಳಿಂದ ಸೆಳೆದು ತರುತ್ತದೆಂಬುದನ್ನು ಸಲೀಸಾಗಿ ಊಹಿಸಲು ಸಾಧ್ಯವಿಲ್ಲ. ಜೀವನದ ಅನಿವಾರ್ಯತೆ ಅದೆತ್ತ ಎಸೆದರೂ, ಯಾವ ಹುದುಲಲ್ಲಿ ಸಿಕ್ಕಿಕೊಳ್ಳುವಂತೆ ಮಾಡಿದರೂ ಸಿನಿಮಾ ಆಕಾಂಕ್ಷೆಯೆಂಬುದು ತಾನೇ ತಾನಾಗಿ ಬರಸೆಳೆದುಕೊಳ್ಳುತ್ತೆ. ಅದಕ್ಕೆ ಬೇಕಾದಂಥಾ ಪರಿಶ್ರಮ, ಪ್ರತಿಭೆಗಳಿದ್ದರೆ ಅಂಥವರ ಹೆಜ್ಜೆಗುರುತು ಕೂಡಾ ಗೆಲುವಾಗಿ ಮೂಡಿಕೊಳ್ಳುತ್ತದೆ. ಇದೀಗ ತನ್ನ ಶೀರ್ಷಿಕೆ ಮತ್ತು ಕಥೆಯ ಹೊಳಹುಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿಕೊಂಡಿರೋ ‘ಕಡೆಮನೆ’ ಎಂಬ ಚಿತ್ರದ ನಿರ್ಮಾಪಕರಾದ ನಂದನ್ ಅವರದ್ದೂ ಕೂಡ ಇದೇ ವೆರೈಟಿಯ ಕಥನ. ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಲೇ ಸಿನಿಮಾ ಕನಸು ಕಂಡ ಅವರೀಗ ಯಶಸ್ವಿ ನಿರ್ಮಾಪಕರಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿದ್ದಾರೆ.

Kademane Stills 3

ನಂದನ್ ಪಾಲಿಗೆ ಕಡೆಮನೆ ಚೊಚ್ಚಲ ನಿರ್ಮಾಣದ ಚಿತ್ರ. ನಿರ್ದೇಶಕ ವಿನಯ್ ಪಾಲಿಗೂ ಇದು ಮೊದಲ ಸಿನಿಮಾ. ಹೊಸಬರ ತಂಡ, ಫ್ರೆಶ್ ಆದ ಹಾರರ್ ಕಥನದ ಮೂಲಕ ಗೆಲುವಿನ ಭರವಸೆಯಿಟ್ಟುಕೊಂಡಿರೋ ಇಡೀ ತಂಡವನ್ನು ನಂದನ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಮೂಲತಃ ನಂಜನಗೂಡಿನವರಾದ ನಂದನ್ ದಶಕಗಳ ಹಿಂದೆ ತುಮಕೂರಿಗೆ ಬಂದು ಅಲ್ಲಿಯೇ ಬದುಕು ಕಟ್ಟಿಕೊಂಡವರು. ಹಾಡುವ ಕಲೆ ಸಿದ್ಧಿಸಿದ್ದರಿಂದ ಈ ಭಾಗದ ಆರ್ಕೆಸ್ಟ್ರಾ ತಂಡಗಳಲ್ಲಿ ಹಾಡುವುದನ್ನೇ ಅನ್ನದ ಮೂಲವಾಗಿಸಿಕೊಂಡಿದ್ದ ನಂದನ್ ಪಾಲಿಗೆ ಡಾ.ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಸಿನಿಮಾಗಳೇ ಬಣ್ಣದ ಲೋಕದತ್ತ ಆಸಕ್ತಿ ಹುಟ್ಟಿಕೊಳ್ಳುವಂತೆ ಮಾಡಿದ್ದವು.

Kademane Producer Nandan 3

ಆರ್ಕೆಸ್ಟ್ರಾಗಳಲ್ಲಿ ಹಾಡೋದನ್ನೇ ಹವ್ಯಾಸವಾಗಿಸಿಕೊಂಡಿದ್ದ ನಂದನ್ ತಮ್ಮ ಕಾರ್ಯಕ್ಷೇತ್ರದಲ್ಲಾಗುತ್ತಿದ್ದ ಬದಲಾವಣೆಗಳನ್ನು ಕಂಡು ಅದನ್ನು ಜೀರ್ಣಿಸಿಕೊಳ್ಳಲೂ ಆಗದೆ, ಬದಲಾಯಿಸಲೂ ಆಗದೆ ಸಂದಿಗ್ಧ ಸ್ಥಿತಿ ತಲುಪಿಕೊಂಡಿದ್ದರು. ಬಹುತೇಕ ಹಾಡುಗಾರರಂತೆ ನಂದನ್ ಪಾಲಿಗೂ ಆರ್ಕೆಸ್ಟ್ರಾ ಎಂಬುದು ಕಲೆಯ ಅನಾವರಣಕ್ಕಿರೋ ವೇದಿಕೆ. ಆದರೆ ನೋಡನೋಡುತ್ತಲೇ ಡ್ಯಾನ್ಸು, ಸೌಂಡಿನ ಭರಾಟೆ ಹಾಡನ್ನು ಮರೆಮಾಚಲು ಶುರು ಮಾಡಿದಾಗ ಮೆಲ್ಲಗೆ ಬೇರೆಡೆಗೆ ಹೊರಳಿಕೊಂಡಿದ್ದ ಅವರ ಪಾಲಿಗೆ ಪ್ರಧಾನ ಕನಸಾಗಿ ಕಾಡಲಾರಂಭಿಸಿದ್ದು ಸಿನಿಮಾ. ತಾನೂ ಕೂಡ ಜನ ಸದಾ ನೆನಪಲ್ಲಿಟ್ಟುಕೊಳ್ಳುವಂತಹ ಸಿನಿಮಾ ಮಾಡಬೇಕೆಂಬ ಕನಸಿಟ್ಟುಕೊಂಡಿದ್ದ ಅವರ ಪಾಲಿಗೆ ಅದು ನನಸಾಗೋ ಸಂದರ್ಭ ಕೂಡಿ ಬಂದಿದ್ದು ಕೂಡ ಆಕಸ್ಮಿಕವಾಗಿಯೇ.

Kademane Stills 1

ನಂದನ್‍ರಿಗೆ ತುಮಕೂರಿನವರೇ ಆದ ನಿರ್ದೇಶಕ ವಿನಯ್ ಎಂಬ ಪ್ರತಿಭಾವಂತ ಹುಡುಗನ ಪರಿಚಯವಾಗಿದ್ದು ಮನೆ ಬಳಿಯ ಹೋಟೆಲೊಂದರಲ್ಲಿ. ಅದಾಗಲೇ ಸೈಕಾಲಜಿಯಲ್ಲಿ ಎಂಎಸ್‍ಸಿ ಮಾಡಿಕೊಂಡಿದ್ದ ವಿನಯ್ ಸಿನಿಮಾ ಕಥೆಯೊಂದನ್ನು ಸಿದ್ಧಪಡಿಸಿಕೊಂಡು, ಸ್ಕ್ರಿಪ್ಟ್ ವರ್ಕನ್ನೂ ಮುಗಿಸಿಕೊಂಡು ನಿರ್ಮಾಪಕರಿಗಾಗಿ ಕಾಯುತ್ತಿದ್ದರು. ನಂದನ್ ಸಿನಿಮಾ ನಿರ್ಮಾಣ ಮಾಡಲು ರೆಡಿಯಾಗಿ ಒಂದೊಳ್ಳೆ ಕಥೆಗಾಗಿ ಹುಡುಕುತ್ತಿದ್ದರು. ಇವರಿಬ್ಬರೂ ಹೋಟೆಲೊಂದರಲ್ಲಿ ಸಂಧಿಸಿ, ಅಲ್ಲಿಯೇ ಪರಿಚಯವಾಗಿ ಆತ್ಮೀಯತೆ ಚಿಗುರಿಕೊಂಡ ನಂತರ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಲಾರಂಭಿಸಿದ್ದರು. ಬಳಿಕ ವಿನಯ್ ಹೇಳಿದ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡ ನಂದನ್ ಗ್ರೀನ್ ಸಿಗ್ನಲ್ ನೀಡಿದ್ದರು. ಈವತ್ತಿಗೆ ಹೊಸ ಅಲೆಯ ಚಿತ್ರವಾಗಿ ಗಮನ ಸೆಳೆದಿರುವ ‘ಕಡೆಮನೆ’ ಜೀವ ಪಡೆದದ್ದು ಅಲ್ಲಿಂದಲೇ!

Kademane Producer Nandan 1

ಹಳ್ಳಿ ಬೇಸಿನ ಕಥೆ ಹೊಂದಿರೋ ಈ ಚಿತ್ರ ನಮ್ಮ ಕಣ್ಣೆದುರೇ ಮರೆಯಾಗುತ್ತಿರೋ ಅದೆಷ್ಟೋ ವಿಚಾರಗಳನ್ನೊಳಗೊಂಡಿದೆಯಂತೆ. ಹಾರರ್ ಶೈಲಿಯದ್ದಾದರೂ ಅಪರೂಪದ, ಗಟ್ಟಿ ಕಥೆಯನ್ನೊಳಗೊಂಡಿರೋ ಕಡೆಮನೆಯನ್ನು ನಂದನ್ ಕೀರ್ತನಾ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿದೆ.

TAGGED:bengalurudirectorkademanePublic TVsandalwoodಕಡೆಮನೆನಿರ್ದೇಶಕಪಬ್ಲಿಕ್ ಟಿವಿಬೆಂಗಳೂರುಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories

You Might Also Like

firing on lawyers house in belgaum
Belgaum

ಬೆಳಗಾವಿಯಲ್ಲಿ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ – ಮಗಳು ಓದುತ್ತಿದ್ದ ಮೊದಲ ಮಹಡಿಯೇ ಟಾರ್ಗೆಟ್‌

Public TV
By Public TV
7 minutes ago
mann ki baat
Dharwad

56gw ದಾಟಿದ ಭಾರತದ ಪವನಶಕ್ತಿ ಉತ್ಪಾದನೆ ಸಾಮರ್ಥ್ಯಕ್ಕೆ ಮೋದಿ ಶ್ಲಾಘನೆ: ಜೋಶಿ

Public TV
By Public TV
30 minutes ago
nobody told me its a dangerous profession jokes Donald Trump after WHCD event shooting Hilton Hotel
Latest

ಅಧ್ಯಕ್ಷ ಹುದ್ದೆ ಇಷ್ಟು ಅಪಾಯಕಾರಿ ಎಂದು ತಿಳಿದಿರಲಿಲ್ಲ: ಗುಂಡಿನ ದಾಳಿಯ ನಂತರ ಟ್ರಂಪ್ ವ್ಯಂಗ್ಯ

Public TV
By Public TV
35 minutes ago
White House Correspondents Dinner
Latest

Explained| ಏನಿದು ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್? ಅಧ್ಯಕ್ಷರು ಯಾಕೆ ಬರುತ್ತಾರೆ? ಹಿಲ್ಟನ್ ಹೋಟೆಲ್‌ನಲ್ಲೇ ಆಯೋಜನೆ ಯಾಕೆ?

Public TV
By Public TV
37 minutes ago
Fly91 Flight Faces Landing Delay Circles Over Hubballi
Dharwad

ಹವಾಮಾನ ವೈಪರಿತ್ಯ – ಆಕಾಶದಲ್ಲೇ 40 ನಿಮಿಷ ಗಿರಕಿ ಹೊಡೆದ Fly 91 ವಿಮಾನ

Public TV
By Public TV
40 minutes ago
teacher committed suicide by being shot in madikeri
Crime

ಪ್ರೀತಿಯ ವಿದ್ಯಾರ್ಥಿಗಳೆ ನಿಮಗೆ ವಿದಾಯ ಎಂದು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ

Public TV
By Public TV
43 minutes ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?