ಬೆಂಗಳೂರು: ದೇವರ ಅನುಗ್ರಹದಿಂದ ಸರ್ಕಾರ ನಡೆಯುತ್ತಿದೆ ಎಂದು ಹೇಳಿಕೊಂಡು ಬಂದಿರುವ ಸಚಿವ ಹೆಚ್.ಡಿ.ರೇವಣ್ಣ ಭಾನುವಾರ ಶಾಸಕಾಂಗ ಸಭೆಗೆ ಬರಿಗಾಲಿನಲ್ಲಿ ಆಗಮಿಸಿದ್ದಾರೆ.
ಇಂದು ಜೆಪಿ ಭವನದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಯುತ್ತಿದೆ. ಜೆಡಿಎಸ್ನ ಎಲ್ಲ ಶಾಸಕರು, ವಕ್ತಾರರು ಜೆಪಿ ಭವನಕ್ಕೆ ಆಗಮಿಸಿದ್ದು, ಸಿಎಂ ಬರುವಿಕೆಗಾಗಿ ಕಾಯುತ್ತಿದ್ದಾರೆ. ವಿದೇಶ ಪ್ರವಾಸದಿಂದ ಆಗಮಿಸಿರುವ ಸಿಎಂ ನೇರವಾಗಿ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ತೆರಳಿದ್ದು ಕೆಲವೇ ಕ್ಷಣಗಳಲ್ಲಿ ಜೆಪಿ ಭವನಕ್ಕೆ ಆಗಮಿಸಲಿದ್ದಾರೆ.
- Advertisement 2
- Advertisement 3
ಜೆಪಿ ಭವನಕ್ಕೆ ದೇವೇಗೌಡರು ಆಗಮಿಸುತ್ತಿದ್ದಂತೆ ಕೆಲ ಜೆಡಿಎಸ್ ಕಾರ್ಯಕರ್ತರು ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್, ನಾರಾಯಾಣ ಗೌಡ ಮತ್ತು ಗೋಪಾಲಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ದೇವೇಗೌಡರು ಎಲ್ಲ ಕಾರ್ಯಕರ್ತರಿಗೂ ಶಾಂತವಾಗಿರುವಂತೆ ಸೂಚಿಸಿ ಒಳನಡೆದರು.