ಬೆಳಗಾವಿ: ಬಾಕಿ ಬಿಲ್ ಕೊಡಲು ಅಧಿಕಾರಿಗಳ ಹಿಂದೇಟು ಹಿನ್ನೆಲೆ ಬೆಳಗಾವಿ ಲೋಕೋಪಯೋಗಿ ಇಲಾಖೆ (PWD) ಕಚೇರಿ ಮುಂಭಾಗದಲ್ಲಿ ಗುತ್ತಿಗೆದಾರರೊಬ್ಬರು (Contractor) ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ನಗರದ ಕೋಟೆ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆಯಲ್ಲಿ ಆಗಮಿಸಿದ ಬೈಲಹೊಂಗಲ ತಾಲೂಕಿನ ನಾಗಪ್ಪ ಬಂಗಿ ಆತ್ಮಹತ್ಯೆಗೆ (Suicide Attempt) ಯತ್ನಿಸಿದ್ದಾರೆ.
ಬೆಳಗಾವಿ ಎಕ್ಸ್ಕ್ಯೂಟಿವ್ ಎಂಜಿನಿಯರ್ ಎಸ್ ಎಸ್. ಸೊಬರದ ಮುಂದೆಯೇ ಗುತ್ತಿಗೆದಾರ ನಾಗಪ್ಪ ಆತ್ಮಹತ್ಯೆಗೆ ಯತ್ನಿಸಿದರು. ಈ ಕೂಡಲೇ ನಾಗಪ್ಪ ಬಂಗಿ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ನಾಗಪ್ಪ ಬಂಗಿ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಇದನ್ನೂ ಓದಿ: ಡಿಕೆಶಿ ಕಾಲಿಗೆ ಬಿದ್ದ ಶಾಸಕ ಮುನಿರತ್ನ
Web Stories