ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು ನಾಳೆಗೆ 75 ವರ್ಷ. ಈ ಅಮೃತ ಮಹೋತ್ಸವವನ್ನು ಇಡೀ ದೇಶದಲ್ಲಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ದೇಶದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ಇದರ ಭಾಗವಾಗಿ ನಗರದ ಬಿಂದು ಅನ್ಮೋಲ್ ಅಪಾರ್ಟ್ಮೆಂಟ್ ನಿವಾಸಿಗಳು ಇಂದು ತಿರಂಗಾ ಅನಾವರಣ ಮಾಡಿದರು.
ದೇಶಾದ್ಯಂತ ನಿನ್ನೆಯಿಂದಲೇ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹರಿಸೋದಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಹಾಗಾಗಿ ಮೋದಿ ಕರೆಗೆ ಸಿಲಿಕಾನ್ ಸಿಟಿಯಲ್ಲಿ ಭರ್ಜರಿಯಾಗಿ ಸ್ಪಂದನೆ ಸಿಕ್ಕಿದ್ದು, ಮನೆ ಮನೆಗಳ ಮೇಲೆ ರಾಷ್ಟ್ರ ಧ್ಜಜ ರಾರಾಜಿಸುತ್ತಿದೆ. ಇದನ್ನೂ ಓದಿ: ಆಕಾಶ್ ಏರ್ ಹಾರಾಟ ಆರಂಭಿಸಿದ ಒಂದೇ ವಾರದಲ್ಲಿ ಇಹಲೋಕ ತ್ಯಜಿಸಿದ ಜುಂಜುನ್ವಾಲ – ಈಡೇರಿತು ಮಹತ್ತರವಾದ ಕನಸು
ಇಂದು ಬೆಂಗಳೂರಿನ ವಿಜಯನಗರದ ಬಳಿ ಇರುವ ಪ್ರಶಾಂತ್ ನಗರದ ಬಿಂದು ಅನ್ಮೋಲ್ ಅಪಾರ್ಟ್ಮೆಂಟ್ ನಿವಾಸಿಗಳು ತಮ್ಮ ಪ್ಲಾಟ್ಗಳಲ್ಲಿ ತಿರಂಗವನ್ನು ಹಾರಿಸುವ ಮೂಲಕ ಅಮೃತ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ತಂದರು. ಹಿರಿಯರ ಜೊತೆ ಪುಟಾಣಿಗಳು ಭಾರತದ ಧ್ವಜ ಹಿಡಿದು ಭಾರತ ಮಾತೆಗೆ ಜೈಕಾರ ಹಾಕಿ ಸ್ವಾತಂತ್ರ್ಯ ದಿನಚಾರಣೆಯ ಶುಭಾಶಯಗಳನ್ನು ದೇಶದ ಜನರಿಗೆ ಕೋರಿದರು. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ; ಗಡಿಯಲ್ಲಿ ಸಿಹಿ ಹಂಚಿಕೊಂಡು ಶುಭಕೋರಿದ ಭಾರತ-ಪಾಕ್ ಸೇನೆ
Live Tv
[brid partner=56869869 player=32851 video=960834 autoplay=true]