ಬಿಗ್ ಬಾಸ್ (Bigg Boss Kannada 10) ವಿನ್ನರ್ ಪಟ್ಟ ಗೆದ್ದಿರೋ ಕಾರ್ತಿಕ್ ಮಹೇಶ್ (Karthik Mahesh) ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕಾರ್ತಿಕ್ ಎಲ್ಲೇ ಹೋದರೂ ಈಗ ಸಂಗೀತಾ (Sangeetha Sringeri) ಅಥವಾ ನಮ್ರತಾ ಹೆಸರು ಹೇಳಿ ಅಭಿಮಾನಿಗಳು ರೇಗಿಸುತ್ತಿರುತ್ತಾರೆ. ಅಂತಹದ್ದೇ ಪ್ರಸಂಗವೊಂದು ಕಾರ್ಯಕ್ರಮವೊಂದರಲ್ಲಿ ನಡೆದಿದೆ. ಆದರೆ ಈ ಬಾರಿ ಸಂಗೀತಾ ಹೆಸರು ಹೇಳಿ ಕಾರ್ತಿಕ್ಗೆ ಸಪ್ತಮಿ ಗೌಡ ಕ್ವಾಟ್ಲೆ ಕೊಟ್ಟಿದ್ದಾರೆ.
ಬಿಗ್ ಬಾಸ್ ಶೋ ಮುಗಿದಿದ್ದರೂ ಸ್ಪರ್ಧಿಗಳ ಹವಾ ಕಮ್ಮಿಯಾಗಿಲ್ಲ. ಪ್ರತಿಯೊಬ್ಬರಿಗೂ ದೊಡ್ಡಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಇದೀಗ ಕಾಲೇಜು ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ತಿಕ್ ಮಹೇಶ್ ಮತ್ತು ‘ಕಾಂತಾರ’ ನಟಿ ಸಪ್ತಮಿ ಗೌಡ (Sapthami Gowda) ಬಂದಿದ್ದರು.
ಕಾರ್ತಿಕ್ ವೇದಿಕೆಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿದ್ದಂತೆ ಸಂಗೀತಾ ಎಂದು ಫ್ಯಾನ್ಸ್ ಕೂಗಲು ಶುರು ಮಾಡಿದ್ದಾರೆ. ಆಗ ಕಾರ್ತಿಕ್ ಕೇಳಿದರೂ ಕೇಳದಂತೆ ವರ್ತಿಸಿದ್ದಾರೆ. ಈ ವೇಳೆ ಸಪ್ತಮಿ, ಶಿಳ್ಳೆ ಮತ್ತು ಚಪ್ಪಾಳೆ ಜೊತೆ ರಾಗ, ತಾಳ, ಸಂಗೀತದ ಬಗ್ಗೆ ಫ್ಯಾನ್ಸ್ ಕೇಳ್ತಿದ್ದಾರೆ ಅಂತ ಪರೋಕ್ಷವಾಗಿ ಕಾರ್ತಿಕ್ ಕಾಲೆಳೆದಿದ್ದಾರೆ. ಹೂಂ ನೀವು ಒಬ್ಬರು ಕಮ್ಮಿ ಇದ್ರಿ ಅಂತ ಸಪ್ತಮಿ ಮಾತಿಗೆ ಕಾರ್ತಿಕ್ ನಕ್ಕಿದ್ದಾರೆ.
View this post on Instagram
ಬಳಿಕ ‘ಬಿಗ್ ಬಾಸ್’ ಮುಗಿಯಿತು ಹೀಗೆ ಹೇಳೋದನ್ನು ಬಿಡಿ ಎಂದು ಕಾರ್ತಿಕ್ ಮನವಿ ಮಾಡಿದ್ದಾರೆ. ಕಾರ್ತಿಕ್ ಮಾತಿಗೆ ಅಭಿಮಾನಿಗಳು ಸುಮ್ಮನಾಗಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ರಸ್ತೆಬದಿಯಲ್ಲಿ ತಿಂಡಿ ಸವಿದ ಕಾರ್ತಿಕ್ ಆರ್ಯನ್
ಇತ್ತೀಚೆಗೆ ವಿನಯ್ ರಾಜ್ಕುಮಾರ್ ನಟನೆಯ ‘ಒಂದು ಸರಳ ಪ್ರೇಮ ಕಥೆ’ ಚಿತ್ರದಲ್ಲಿ ಕಾರ್ತಿಕ್ ನಟಿಸಿದ್ದರು. ಬಿಗ್ ಬಾಸ್ ನಂತರ ಸಾಕಷ್ಟು ಆಫರ್ಸ್ ಕಾರ್ತಿಕ್ ಕಡೆ ಅರಸಿ ಬರುತ್ತಿವೆ. ಉತ್ತಮ ಕಥೆಯೊಂದಿಗೆ ಕಾರ್ತಿಕ್ ಸಿನಿಮಾ ಬಗ್ಗೆ ಅಪ್ಡೇಟ್ ಹಂಚಿಕೊಳ್ತಾರೆ.
ಕಾರ್ತಿಕ್ ಕಾಲ್ಶೀಟ್ ಕೊಟ್ಟರೆ ಸಿನಿಮಾ ನಿರ್ಮಾಣ ಮಾಡೋದಾಗಿ ಇತ್ತೀಚೆಗಷ್ಟೇ ತನಿಷಾ ಕುಪ್ಪಂಡ ಹೇಳಿದ್ದಾರೆ. ತನಿಷಾ ಮಾತಿಗೆ ಕಾರ್ತಿಕ್ ಕೂಡ ಓಕೆ ಎಂದಿದ್ದಾರೆ.