ಬೆಂಗಳೂರು: ಸ್ಯಾಂಡಲ್ವುಡ್ ನಟ ದಿಗಂತ್ ಮಂಚಾಲೆ ಸ್ಪೈನಲ್ ಮೈನರ್ ಇಂಜುರಿ ಆಗಿದೆ ಎಂದು ಪತ್ನಿ ಐಂದ್ರಿತಾ ರೇ ತಂದೆ ಡಾ. ರೇ ಮಾಹಿತಿ ನೀಡಿದ್ದಾರೆ.
- Advertisement 2
ಅಳಿಯನ ಆರೋಗ್ಯದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಏನಾಗಿದೆಯೋ ಗೊತ್ತಿಲ್ಲ. ನಾವೀಗ ಆಸ್ಪತ್ರೆಗೆ ಬಂದಿದ್ದೇವೆ. ಸಣ್ಣ ಪ್ರಮಾಣದಲ್ಲಿ ಪೆಟ್ಟಾಗಿದೆ ಎಂದು ತಿಳಿಸಿದರು.
- Advertisement 3
- Advertisement 4
ಸೋಮವಾರ ಮಧ್ಯಾಹ್ನ 3 ಗಂಟೆಗೆ ಘಟನೆ ಸಂಭವಿಸಿದೆ. ಕತ್ತಿನ ಭಾಗಕ್ಕೆ ಪೆಟ್ಟು ಬಿದ್ದಿದೆ. ಗೋವಾದಲ್ಲಿ ಚಿಕಿತ್ಸೆ ಕೊಡಲಾಗಿದೆ. ಸ್ಲೈನಲ್ ಗೆ ಮೈನರ್ ಇಂಜುರಿ ಆಗಿದೆ. ಈಗ ಇಲ್ಲಿ ಒಂದು ಅಪರೇಷನ್ ಆಗಬೇಕಾಗಿದೆ ಎಂದು ಹೇಳಿದರು. ಇದನ್ನೂ ಓದಿ: ದಿಗಂತ್ ಕುತ್ತಿಗೆಗೆ ಪೆಟ್ಟು- ಸ್ಟಂಟ್ ಮಾಸ್ಟರ್ ಹೇಳಿದ್ದೇನು?
ನಟ ದಿಗಂತ್ ತಮ್ಮ ಕುಟುಂಬ ಸಮೇತ ಗೋವಾ ಪ್ರವಾಸದಲ್ಲಿದ್ದರು. ಅಂತೆಯೇ ಬೀಚ್ನಲ್ಲಿ ಸ್ಟಂಟ್ ಮಾಡಲು ಹೋಗಿ ಕುತ್ತಿಗೆಗೆ ಏಟು ಮಾಡಿಕೊಂಡಿದ್ದಾರೆ. ಕೂಡಲೇ ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡಿರುವ ನಟನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ಕರೆತರಲಾಗಿದೆ. ಸದ್ಯ ನಟ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತ ಆಸ್ಪತ್ರೆಗೆ ಕಿರುತೆರೆ ನಟರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಅಲ್ಲದೆ ಆಪ್ತ ಸಂಬಂಧಿಗಳು ಕೂಡ ಬರುತ್ತಿದ್ದಾರೆ.