`ಜೈ ಹಿಂದೂರಾಷ್ಟ್ರ’ ಹೆಸರಿನಲ್ಲಿ ಸಾಹಿತಿ ಕುಂವೀ, ನಟ ಪ್ರಕಾಶ್ ರೈ ಸೇರಿ 16 ಮಂದಿಗೆ ಬೆದರಿಕೆ ಪತ್ರ

Public TV
1 Min Read
PRAKASH RAJ

ವಿಜಯನಗರ: ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, ನಟ ಪ್ರಕಾಶ್ ರೈ ಸೇರಿದಂತೆ 16 ಮಂದಿಗೆ ಬೆದರಿಕೆ ಪತ್ರ ಬಂದಿರುವುದು ಬೆಳಕಿಗೆ ಬಂದಿದೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರೋ ಸಾಹಿತಿ ಕುಂ. ವೀರಭದ್ರಪ್ಪ ಅವರಿಗೆ 3ನೇ ಬಾರಿಗೆ ಬೆದರಿಕೆ ಪತ್ರ ಬಂದಿದೆ. ಈ ಹಿಂದೆಯೂ ಭದ್ರಾವತಿಯಿಂದ ಮತ್ತು ಚಿತ್ರದುರ್ಗದಿಂದ ಬೆದರಿಕೆ ಪತ್ರ ಬಂದಿತ್ತು. ಇದೀಗ `ಜೈ ಹಿಂದೂರಾಷ್ಟ್ರ, ಸಹಿಷ್ಣು ಹಿಂದೂ’ ಹೆಸರಿನಲ್ಲಿ 3ನೇ ಬೆದರಿಕೆ ಪತ್ರ ಬಂದಿದೆ. ಇದನ್ನೂ ಓದಿ; ಚಿನ್ನ, ಬೆಳ್ಳಿಯಲ್ಲ ಈಗ ನಿಂಬೆಹಣ್ಣಿನ ಮೇಲೆ ಕಳ್ಳರ ಕಣ್ಣು- 12 ಮೂಟೆ ನಿಂಬೆಹಣ್ಣು ಕಳವಾಗಿದ್ದೇಗೆ?

BLY LETTER

ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕರಿಗೆ ಬೆದರಿಕೆ ಪತ್ರ ಬಂದಿತ್ತು. ಮೊದಲ ಪತ್ರ ಬಂದಾಗ, ವಿಜಯನಗರ ಎಸ್ಪಿ ಡಾ.ಕೆ.ಅರುಣ್ ಅವರನ್ನು ಭೇಟಿಯಾಗಿ ರಕ್ಷಣೆಗಾಗಿ ಸಾಹಿತಿ ಕುಂವಿ ಮನವಿ ಮಾಡಿದ್ದರು. ಇದೀಗ ಮತ್ತೆ ಬೆದರಿಕೆ ಪತ್ರ ಬಂದಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನೂ ಓದಿ: ರಾಜ್ ಠಾಕ್ರೆ ಬೊಗಳುವ ನಾಯಿ – ಪರೋಕ್ಷವಾಗಿ ಅಕ್ಬರುದ್ದೀನ್ ಟಾಂಗ್

KGF 2 Prakash raj (4)

`ಮಿಸ್ಟರ್ ಕುಂ. ವೀರಪ್ಪನವರೇ, ನನಗೆ ಪೇಪರ್ ಹುಲಿ ಆಗುವುದಕ್ಕೆ ಇಷ್ಟವಿದ್ದರೇ ಅಥವಾ ಪ್ರಚಾರದ ಗೀಳು ಇದ್ದರೇ, ನಿಮ್ಮ ಮೇಲೆ ನೇರವಾಗಿ ದಾಳಿ ಮಾಡಿ ನಾನೇ ಪೊಲೀಸರಿಗೆ ಸೆರೆಂಡರ್ ಆಗುತ್ತಿದೆ. ಆದರೆ ನನಗೆ ನಿಮ್ಮಥರ ಪೇಪರ್ ಹುಲಿ, ಸಿಂಹ ಇತ್ಯಾದಿ ಆಗುವ ಅವಶ್ಯಕತೆಯಿಲ್ಲ. ಒಬ್ಬಂಟಿಯಾಗಿ ಹೋರಾಟ ಮಾಡುತ್ತಿದ್ದೇನೆ’ ಎಂದೂ ಪತ್ರದಲ್ಲಿ ಎಚ್ಚರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *