ದಿಸ್ಪುರ್: ನೇಣುಬಿಗಿದ ಸ್ಥಿತಿಯಲ್ಲಿ ಹಿಂದೂ ಯುವಕನ (Hindu Youth) ದೇಹ ಪತ್ತೆಯಾಗಿದ್ದು ಅಸ್ಸಾಂನಲ್ಲಿ (Assam) ಈಗ ಪ್ರತಿಭಟನೆ (Protest) ಆರಂಭವಾಗಿದೆ. ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೆ ಗೆಳತಿ ಮನೆಯವರೇ ಯುವಕನನ್ನು ಹತ್ಯೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಬಂದಿದೆ.
ಯುವಕನನ್ನು ಗೆಳತಿಯ (Lovers) ಮನೆಗೆ ಕರೆಸಿಕೊಂಡ ಒಂದು ದಿನದ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯನ್ನೇ ಬಿಡಲಿಲ್ಲ ಬಾಡಿ ಶೇಮಿಂಗ್ ಭೂತ
ಬಿಕಿ ಬಿಶಾಲ್ ಮೃತ ಯುವಕ. ಈತನ ಸಾವು ಜಿಲ್ಲೆಯಲ್ಲಿ ಉದ್ವಿಗ್ನತೆ ಸೃಷ್ಟಿಸಿದೆ. ಮೃತ ಯುವಕನ ದೇಹದ ಕಣ್ಣು, ಮೂಗು ಹಾಗೂ ಕಿವಿಯ ಭಾಗಗಳಲ್ಲಿ ರಕ್ತ (Blood) ಬಂದಿರುವ ಗುರುತುಗಳಿತ್ತು. ಅವನು ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೇ ಗೆಳತಿ ಮನೆಯವರೇ ಹತ್ಯೆ ಮಾಡಿದ್ದಾರೆ ಎಂದು ಯುವಕನ ಕುಟುಂಬಸ್ಥರು (Family) ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಚರ್ಚ್ ಅಧಿಕಾರಿಗಳು (Church Officials), ಹುಡುಗಿಯ ತಂದೆ ಹಾಗೂ ಚಿಕ್ಕಪ್ಪ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬಿಕಿ ಬಿಶಾಲ್ನನ್ನು ಮತಾಂತರಗೊಳಿಸುವ ಉದ್ದೇಶದಿಂದ ಹತ್ಯೆ ಮಾಡಲಾಗಿದೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಬಿಆರ್ಟಿಎಸ್ ಬಸ್ನಲ್ಲಿ ಬೆಂಕಿ – ಹೊಗೆ ನೋಡಿ ಎದ್ನೋ ಬಿದ್ನೋ ಓಡಿದ ಪ್ರಯಾಣಿಕರು
ಏನಿದು ಬಿಕಿ ಲವ್ ಸ್ಟೋರಿ?
ಇದೇ ತಿಂಗಳ ಸೆಪ್ಟೆಂಬರ್ 3 ರಂದು ಬಿಕಿ ಬಿಶಾಲ್ ತನ್ನ ಗೆಳತಿಯೊಂದಿಗೆ ಓಡಿಹೋಗಿದ್ದ. ಒಂದು ವಾರದ ಬಳಿಕ ಮನೆಗೆ ಕರೆದುಕೊಂಡು ಬಂದಿದ್ದ. ಹುಡುಗಿ ಕ್ರಿಶ್ಚಿಯನ್ ಸಮಯದಾಯಕ್ಕೆ ಸೇರಿದವಳಾಗಿದ್ದಳು. ನಂತರ ಹುಡುಗಿ ಮನೆಯವರು ಕೆಲವು ಚರ್ಚ್ ಅಧಿಕಾರಿಗಳೊಂದಿಗೆ ಬಂದು ಬಲವಂತವಾಗಿ ಹುಡುಗಿಯನ್ನು ಕರೆದೊಯ್ದರು. ಕಳೆದ ಸೋಮವಾರ ಬಿಶಾಲ್ಗೆ ಹುಡುಗಿ ಮನೆಯವರಿಂದ ಒಂದು ಫೋನ್ ಕರೆ ಬಂದಿತ್ತು. ಬಳಿಕ ಮನೆಯಿಂದ ಹೊರಟ ಬಿಶಾಲ್ ವಾಪಸ್ ಹಿಂದಿರುಗಲಿಲ್ಲ. ಅವನ ಗೆಳತಿ ಮನೆವರಿಂದಲೇ ಕರೆ ಬಂದಿದ್ದು, ಅವರೇ ಹತ್ಯೆ ಮಾಡಿ ಮರಕ್ಕೆ ನೇತು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಬಿಶಾಲ್ ಹುಡುಗಿಯನ್ನು ಮದುವೆಯಾಗಬೇಕಾದರೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ. ಇದಕ್ಕೆ ಇಬ್ಬರು ಚರ್ಚ್ ಅಧಿಕಾರಿಗಳ ಸಹಾಯವನ್ನೂ ಪಡೆದಿದ್ದಾರೆ. ಆದರೆ ಅವನು ಒಪ್ಪಲಿಲ್ಲ ಎಂಬ ಆರೋಪಗಳು ಹೇಳಿಬಂದಿವೆ. ನಾವು ಎಲ್ಲಾ ರೀತಿಯಲ್ಲೂ ತನಿಖೆ ಮಾಡುತ್ತಿದ್ದು, ಐವರನ್ನು ಬಂಧಿಸಿದ್ದೇವೆ. ಇನ್ನಷ್ಟು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಆದರೆ ಪ್ರಕರಣದ ಕುರಿತು ಬಾಲಕಿ ಮತ್ತು ಆಕೆಯ ಕುಟುಂಬದವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.