ದಾವಣಗೆರೆ: ಪ್ರಿಯಕರನಿಗೋಸ್ಕರ (Lover) ಪತಿಯನ್ನೇ ಮುಗಿಸಿದ್ದ ಖತರ್ನಾಕ್ ಲೇಡಿ ಪೊಲೀಸ್ (Police) ತನಿಖೆಯಲ್ಲಿ ಸಿಕ್ಕಿಬಿದ್ದಿರುವ ಘಟನೆ ದಾವಣಗೆರೆಯ ಹಳೇ ಬಿಸಲೇರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೊಲೆ ಆರೋಪಿ ಕಾವ್ಯಾ, ಆಕೆಯ ಪ್ರಿಯಕರ ಬೀರೇಶ್ನನ್ನ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ಲಿಂಗರಾಜ್ (24) ಕಾವ್ಯಾಳ ಪತಿ. ಇದನ್ನೂ ಓದಿ: EDಯಿಂದ ತಮಿಳುನಾಡು ಅಬಕಾರಿ ಸಚಿವ ಅರೆಸ್ಟ್ – ಕಾರಿನಲ್ಲಿ ಭಾರೀ ಹೈಡ್ರಾಮಾ, ಆಸ್ಪತ್ರೆಗೆ ಶಿಫ್ಟ್
ಸೀನ್ ಕ್ರಿಯೇಟ್ ಮಾಡಿದ್ದ ಕಾವ್ಯಾ:
ಹೌದು. ಪ್ರಿಯಕರ ಬೀರೇಶ್ ಜೊತೆ ಸೇರಿಕೊಂಡು ತನ್ನ ಪತಿಯನ್ನೇ ಮುಗಿಸಿದ ಕಾವ್ಯಾ, ನಂತರ ಮನೆ ಕ್ಲೀನ್ ಮಾಡುವಾಗ ಬಿದ್ದು ಸಾವನ್ನಪ್ಪಿದ್ದಾನೆ ಅಂತಾ ಬಿಂಬಿಸಿದ್ದಳು. ಅನುಮಾನಾಸ್ಪದ ಸಾವಿನ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಸತ್ಯ ಬಯಲಿಗೆಳೆದು ಕಾವ್ಯಾ ಹಾಗೂ ಆಕೆಯ ಪ್ರಿಯಕರನನ್ನ ಬಂಧಿಸಿದ್ದಾರೆ.
ಗಂಡನನ್ನ ಹೊಡೆದೇ ಕೊಂದಳು:
ಮೃತ ಲಿಂಗರಾಜ್ ಪತ್ನಿ ಕಾವ್ಯಾಗೆ ಬೀರೇಶ್ ಜೊತೆಗೆ ಅನೈತಿಕ ಸಂಬಂಧವಿತ್ತು. ಈ ಹಿಂದೆ ಇಬ್ಬರೂ ಮಂಗಳೂರಿಗೆ ಓಡಿ ಹೋಗಿದ್ರು. ನಂತರ ಕಾವ್ಯಾಳನ್ನ ಕರೆತಂದು ರಾಜಿ ಸಂಧಾನದ ಮೂಲಕ ಗಂಡನೊಂದಿಗೆ ಬಿಟ್ಟಿದ್ದರು. ಆದ್ರೆ ಕಾವ್ಯಾಗೆ ಇಷ್ಟವಿಲ್ಲದಿದ್ದರಿಂದ ಗಂಡನನ್ನೇ ಮುಗಿಸಲು ಸ್ಕೆಚ್ ಹಾಕಿದ್ದಳು. ತಲೆಗೆ ಕಬ್ಬಿಣದ ಆಯುಧದಿಂದ ಹೊಡೆದು ಕೊಲೆ ಮಾಡಿ, ನಂತರ ಆಕಸ್ಮಿಕ ಸಾವು ಎಂದು ಬಿಂಬಿಸಿದ್ದಳು. ಇದನ್ನೂ ಓದಿ: ಕರಾವಳಿಯಲ್ಲಿ ಬಿಪರ್ಜಾಯ್ ಅಬ್ಬರ – ತೀರಕ್ಕೆ ಅಪ್ಪಳಿಸುತ್ತಿದೆ ರಕ್ಕಸ ಅಲೆಗಳು, ಆತಂಕದಲ್ಲಿ ನಿವಾಸಿಗಳು
ಲಿಂಗರಾಜ್ ತಾಯಿ ಅನುಮಾನಗೊಂಡು ಪೋಲೀಸ್ ಠಾಣೆಯಲ್ಲಿ ಕಾವ್ಯಾಳ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಆರೋಪಿಗಳಿಬ್ಬರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ನಂತರ ಕಾವ್ಯ ಹಾಗೂ ಪ್ರೀಯಕರ ಬೀರೇಶ್ ನನ್ನ ಬಂಧಿಸಿದ್ದಾರೆ.