ಮೋದಿ ಒಂದು ಸುತ್ತು ಬಂದು ಕೈಬೀಸಿ ಹೋದ್ರೆ, ರಾಹುಲ್ ಗಾಂಧಿ ತೂರಿಕೊಂಡು ಹೋಗ್ತಾರೆ: ಈಶ್ವರಪ್ಪ

Public TV
1 Min Read
KS Eshwarappa 1

ಶಿವಮೊಗ್ಗ: ರಾಜ್ಯದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ಇರುವ ಕಾರಣ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜ್ಯಕ್ಕೆ ಬರುತ್ತಲೇ ಇರುತ್ತಾರೆ. ಮೋದಿ ಒಂದು ಸುತ್ತು ಬಂದು ಕೈಬೀಸಿ ಹೋದರೆ, ರಾಹುಲ್ ಗಾಂಧಿ (Rahul Gandhi) ತೂರಿಕೊಂಡು ಹೋಗ್ತಾರೆ ಎಂದು ಮಾಜಿ ಸಚಿವ ಈಶ್ವರಪ್ಪ (KS Eshwarappa) ವ್ಯಂಗ್ಯವಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಇನ್ನು ಮೇಲೆ ರಾಜ್ಯಕ್ಕೆ ಭೇಟಿ ಕೊಡುತ್ತಲೇ ಇರುತ್ತಾರೆ. ಅವರು ಒಮ್ಮೆ ಭೇಟಿ ನೀಡಿ ಹೋದರೆ ಸಾಕು, ಕಾಂಗ್ರೆಸ್ ಹೆಸರು ಹೇಳದ ರೀತಿ ಆಗುತ್ತದೆ ಎಂದರು. ಇದನ್ನೂ ಓದಿ: ಯೋಗ ಮತ್ತು ಧ್ಯಾನದ ಅಗತ್ಯ ಎಲ್ಲರಿಗಿಂತ ಹೆಚ್ಚಾಗಿ ಶಿಕ್ಷಣ ಸಚಿವರಿಗಿದೆ: ಸಿದ್ದರಾಮಯ್ಯ

Rahul Gandhi Modi

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ಅವರಿಗೆ ಬಿಜೆಪಿ ಆಪರೇಷನ್ ಕಮಲಕ್ಕೆ 50 ಕೋಟಿ ರೂ. ಹಣವನ್ನು ಆಫರ್ ಮಾಡಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದರು. ನಾವು 50 ಕೋಟಿ ಅಲ್ಲ, 500 ಕೋಟಿ ರೂ. ಆಫರ್ ಕೊಟ್ಟಿದ್ದೆವು. ಸುಮ್ಮನೆ 50 ಕೋಟಿ ಅಂತ ಹೇಳಿ ನಿಮ್ಮ ಶಾಸಕರ ಮೌಲ್ಯವನ್ನು ನೀವೇ ಕಡಿಮೆ ಮಾಡಿಕೊಳ್ಳಬೇಡಿ. ಬೇಕಿದ್ದರೆ ನಿಮ್ಮ ಶಾಸಕ ಸಂಗಮೇಶ್ ಅವರನ್ನೇ ಕೇಳಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: 5 ದಿನಗಳ ಬಳಿಕ ರೇಣುಕಾಚಾರ್ಯ ಸಹೋದರನ ಪುತ್ರನ ಶವ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಪತ್ತೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *