Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ: ಬೊಮ್ಮಾಯಿ

Public TV
Last updated: May 17, 2022 11:18 pm
Public TV
Share
3 Min Read
Basavaraj Bommai 1 1
SHARE

ಬೆಂಗಳೂರು: ಮೂಲಸೌಲಭ್ಯ ಉದ್ಯಮ ದೊಡ್ಡ ಬದಲಾವಣೆ ತರಲಿದೆ. ರಸ್ತೆ, ಗಣಿಗಾರಿಕೆ, ಸೇತುವೆ ನಿರ್ಮಾಣ ಸೇರಿದಂತೆ ಎಲ್ಲಾ ವಲಯಗಳಲ್ಲಿ ಮೂಲಸೌಲಭ್ಯದಿಂದ ದೊಡ್ಡ ಬದಲಾವಣೆ ತರಬಹುದಾಗಿದ್ದು, ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ, ಯಂತ್ರೋಪಕರಣಗಳು ಬಂದಿವೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಉದ್ಯಮಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಿಎಂ ಬೊಮ್ಮಾಯಿ ಬೆಂಗಳೂರಿನ ಬಿಐಇಸಿಯಲ್ಲಿ ಮಂಗಳವಾರ ಆರಂಭವಾದ ಕಟ್ಟಡ ನಿರ್ಮಾಣ ಸಲಕರಣೆಗಳ ಎಕ್ಸ್ಕಾನ್ 2022 ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಕಂಪನಿಗಳ ನಾವೀನ್ಯತೆ, ಹೊಸ ಚಿಂತನೆಗಳ ವಿಚಾರ ವಿನಿಮಯ ಮಾಡಿಕೊಳ್ಳಲು ಎಕ್ಸ್ಕಾನ್ 2022 ವಸ್ತು ಪ್ರದರ್ಶನ ಸೂಕ್ತ ವೇದಿಕೆಯಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡಲಿಚ್ಛಿಸುವ ಉದ್ದಿಮೆಗಳಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.

Basavaraj Bommai

ಐಟಿಬಿಟಿ, ಸ್ಟಾರ್ಟ್ಅಪ್, ಆರ್‌ಎಂಡಿಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಈ ಅವಕಾಶವನ್ನು ಬಳಸಿಕೊಂಡು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡುವ ಮೂಲಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಸಂಸ್ಥೆಗಳಿವೆ. ಬಿಹೆಚ್‌ಇಎಲ್, ಹೆಚ್‌ಎಎಲ್ ನಂತಹ ಅನೇಕ ಬೃಹತ್ ಸಂಸ್ಥೆಗಳು ರಾಜ್ಯದಲಿದ್ದು, ರಾಜ್ಯದ ಎಕೋಸಿಸ್ಟಂ ಈ ಸಂಸ್ಥೆಗಳು ಕೊಡುಗೆ ನೀಡಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಗರಿಷ್ಟ ಸಂಖ್ಯೆಯ ಸ್ಟಾರ್ಟ್ ಅಪ್‌ಗಳಿವೆ. ದೇಶದ ಶೇ.50 ಕ್ಕಿಂತಲೂ ಹೆಚ್ಚಿನ ಸ್ಟಾರ್ಟ್ ಅಪ್‌ಗಳು ಹಾಗೂ ಯೂನಿಕಾರ್ನ್ಗಳು ರಾಜ್ಯದಲ್ಲಿವೆ. ವಿದೇಶಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. 400ಕ್ಕೂ ಹೆಚ್ಚು ಖಾಸಗಿ ಹಾಗೂ ಸರ್ಕಾರಿ ಸಂಶೋಧನಾ ಕೇಂದ್ರಗಳು ರಾಜ್ಯದಲ್ಲಿದ್ದು, ಅದರಲ್ಲಿ 180 ಬೆಂಗಳೂರಿನಲ್ಲಿದೆ. ಡಿಆರ್‌ಡಿಒ ಸಂಸ್ಥೆ ರಾಜ್ಯಕ್ಕೆ ಕೊಡುಗೆ ನೀಡಿದೆ. ಸೌರಶಕ್ತಿ ಸಂಗ್ರಹಣೆ, ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ರಾಜ್ಯ ಒತ್ತು ನೀಡುತ್ತಿದೆ. ಕರ್ನಾಟಕವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ನುಡಿದರು. ಇದನ್ನೂ ಓದಿ: ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ಸಕಾಲಿಕ ಅನುಷ್ಠಾನಕ್ಕೆ ಸೂಚನೆ: ಬೊಮ್ಮಾಯಿ

Basavaraj Bommai 6

ಸಂಶೋಧನೆಗಳು ತಳಹಂತದಿಂದ ನಡೆಯಬೇಕು: ಹಣದಿಂದ ಹಣ ಬರುವುದಿಲ್ಲ. ದುಡಿಮೆಯಿಂದ ಹಣ ಬರುತ್ತದೆ. ದುಡಿಮೆಯ ತಳಹಂತದಲ್ಲಿರುವವರ ಬಗ್ಗೆ ಕಾಳಜಿ ವಹಿಸಬೇಕು. ತಳಹಂತದಲ್ಲಿ ದುಡಿಯುವ ವರ್ಗಕ್ಕೆ ಸಹಾಯ ಮಾಡಲು ಹೊಸ ಚಿಂತನೆ ಮಾಡಬೇಕು. ಯೋಜನೆಯ ಪ್ರಾಯೋಗಿಕತೆ, ನೈಜತೆ ಬಗ್ಗೆ ತಿಳಿಯುವುದೇ ತಳಹಂತದಲ್ಲಿ. ಸಂಶೋಧನೆಗಳು ಈ ಹಂತದಲ್ಲಿ ನಡೆಯಬೇಕು. ಕರ್ನಾಟಕದಲ್ಲಿ ಸಣ್ಣ ಗ್ಯಾರೇಜಿನಿಂದ ಹಿಡಿದು ದೊಡ್ಡ ಕೈಗಾರಿಕೆಗಳವರೆಗೆ ಆರ್ ಆ್ಯಂಡ್ ಡಿ(ಸಂಶೋಧನೆ ಹಾಗೂ ಅಭಿವೃದ್ಧಿ) ನೀತಿಯನ್ನು ಜಾರಿಗೊಳಿಸಲಾಗಿದೆ.

ಯುವಕರಲ್ಲಿ ಸ್ವಂತಿಕೆಯನ್ನು ಹಾಗೂ ನಾವೀನ್ಯತೆಯನ್ನು ಪ್ರೋತ್ಸಾಹಿಸಬೇಕು. ಜಪಾನ್ ದೇಶದಂತೆ ಸಂಪೂರ್ಣ ಎಕೋ ಸಿಸ್ಟಂ ಸಂಶೋಧನೆಗೆ ಒತ್ತು ನೀಡುವಂತಿರಬೇಕು. ಸುಸಜ್ಜಿತ ಕ್ಯೂಬಿಕಲ್ಸ್ಗಳಲ್ಲಿ ಮಾತ್ರ ಸೀಮಿತವಾಗಿರದೇ, ಸಂಶೋಧನೆಗಳು ಎಲ್ಲೆಡೆ ನಡೆಯಬೇಕು. ಈ ದಿಸೆಯಲ್ಲಿ ಕರ್ನಾಟಕ ನಡೆಯುತ್ತಿದ್ದು, ಹಲವು ವಿನೂತನ ಯೋಜನೆಗಳನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ನಟಿ ಚೇತನಾ ರಾಜ್ ಸಾವು ಪ್ರಕರಣ – ಆಸ್ಪತ್ರೆ ವಿರುದ್ಧ ನೋಟಿಸ್ ಜಾರಿ

BASAVARAJ BOMMAI 1

ಸವಾಲುಗಳು ಅವಕಾಶಗಳನ್ನು ಒದಗಿಸುತ್ತವೆ: ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸಾಂಕ್ರಾಮಿಕವಿದ್ದರೂ ಬೆಳೆಯಲು ಸಾಧ್ಯ ಎಂದು ಜಗತ್ತಿಗೆ ಬಿಂಬಿಸಲಾಗಿದೆ. ಸವಾಲುಗಳು ಅವಕಾಶಗಳನ್ನು ಒದಗಿಸುತ್ತವೆ. ಸವಾಲುಗಳಿಲ್ಲದಿದ್ದರೆ, ಅಭಿವೃದ್ಧಿಯೂ ಇಲ್ಲ. ಸವಾಲುಗಳು ಹೆಚ್ಚಿದ್ದಷ್ಟೂ ಅಭಿವೃದ್ಧಿ ಹೆಚ್ಚಾಗುತ್ತದೆ. ಮೊದಲನೇ ಹಾಗೂ ಎರಡನೇ ವಿಶ್ವಯುದ್ದಗಳು ಸಾರಿಗೆ, ಎಲೆಕ್ಟಾçನಿಕ್ಸ್, ಮೆಕ್ಯಾನಿಕಲ್ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನಕ್ಕೆ ಎಡೆ ಮಾಡಿಕೊಟ್ಟಿತು. ವಿಶ್ವಯುದ್ದಗಳು ಆಗದಿದ್ದರೆ ಜಾಗತಿಕ ಬೆಳವಣಿಗೆಯೂ ಆಗುತ್ತಿರಲಿಲ್ಲ. ಯಾವುದೇ ಹೊಸ ಘಟನೆ ಸಂಭವಿಸಿದಾಗ ನೂರು ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ ಎಂದರು.

ಮೂಲಸೌಕರ್ಯ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಉತ್ತಮ ವೇಗವನ್ನು ಸಾಧ್ಯವಾಗಿಸುವ ಸಾರಿಗೆ ವ್ಯವಸ್ಥೆ ಅಗತ್ಯವಿದೆ. ಕ್ಷಿಪ್ರಗತಿಯಲ್ಲಿ ನಮ್ಮ ಗಮ್ಯವನ್ನು ತಲುಪಿಸುವ ವೇಗವನ್ನು ಹೊಂದಿರುವ ರೈಲುಗಳ ಅಗತ್ಯವಿದೆ. ಮೂಲಸೌಕರ್ಯದ ಪರಿಕಲ್ಪನೆ ಬದಲಾಗಿದೆ. ಎಕ್ಸ್‌ಕಾನ್-11 ನೇ ಆವೃತ್ತಿಯು ಬೆಳೆವಣಿಗೆಯ ರೇಖೆಯಲ್ಲಿ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಿದೆ. ದೇಶಕ್ಕೆ ಲಾಭವಾಗುವಂತೆ ಬೆಳೆಯಬಹುದಾಗಿದೆ ಎಂದು ತಿಳಿಸಿದರು.

TAGGED:Basavaraj BommaibengaluruexconInfrastructureಉದ್ಯಮಎಕ್ಸ್‌ಕಾನ್ಬಸವರಾಜ ಬೊಮ್ಮಾಯಿಬೆಂಗಳೂರುಮೂಲಸೌಲಭ್ಯ
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Darshan 3
3ನೇ ಬಾರಿಗೆ ಪರಪ್ಪನ ಅಗ್ರಹಾರ ಸೇರಿದ ದರ್ಶನ್‌
Bengaluru City Crime Karnataka Latest Main Post Sandalwood South cinema States
darshan umashree
ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ
Cinema Latest Sandalwood Top Stories
daali dhananjaya
ಬೇಡರ ನಾಯಕನಾಗಿ ಡಾಲಿ ಧನಂಜಯ್: ಗ್ಲಿಂಪ್ಸ್ ರಿಲೀಸ್
Cinema Latest Sandalwood
DARSHAN 5
ಜಾಮೀನು ರದ್ದು – ಪತ್ನಿ ಮನೆಯಲ್ಲಿದ್ದ ದರ್ಶನ್‌ ಅರೆಸ್ಟ್‌
Bengaluru City Cinema Karnataka Latest Main Post Sandalwood
Actor Darshan
ನಟ ದರ್ಶನ್‌ ಜಾಮೀನು ರದ್ದು – ಸುಪ್ರೀಂ ಕೋರ್ಟ್‌ ತೀರ್ಪಿನಲ್ಲೇನಿದೆ?
Bengaluru City Cinema Court Latest Main Post National Sandalwood

You Might Also Like

Sharanabasappa Appa
Districts

ಕಲಬುರಗಿಯ ಮಹಾ ದಾಸೋಹಿ ಶರಣಬಸಪ್ಪ ಅಪ್ಪ ಲಿಂಗೈಕ್ಯ

Public TV
By Public TV
6 hours ago
donald trump vladimir putin
Latest

ಭಾರತದ ಮೇಲೆ ಸುಂಕ ಹಾಕಿದ್ದಕ್ಕೆ ಪುಟಿನ್‌ ಮಾತುಕತೆಗೆ ಒಪ್ಪಿದ್ದಾರೆ: ಟ್ರಂಪ್‌

Public TV
By Public TV
6 hours ago
Yellamma Devi Temple
Belgaum

ಯಲ್ಲಮ್ಮ ದೇವಿ ದೇಗುಲ ಖಾಸಗಿ ಆಸ್ತಿಯಲ್ಲ – ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ

Public TV
By Public TV
7 hours ago
Dharmasthala Mass Burial Case spot inspection in the premises of Dharmasthala temple
Dakshina Kannada

ಧರ್ಮಸ್ಥಳ ದೇಗುಲದ ವಠಾರದಲ್ಲಿ ಸ್ಥಳ ಮಹಜರು

Public TV
By Public TV
8 hours ago
Darshan 2
Bengaluru City

ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ವಿಕ್ಷಿಪ್ತ ದೋಷ – ಸುಪ್ರೀಂ ತೀವ್ರ ಆಕ್ಷೇಪ, ತ್ವರಿತಗತಿಯಲ್ಲಿ ಕೇಸ್ ಇತ್ಯರ್ಥಕ್ಕೆ ಸೂಚನೆ

Public TV
By Public TV
8 hours ago
Droupadi Murmu
Latest

ಮೊದಲು ನಾವು ದಾಳಿ ಮಾಡಲ್ಲ, ಪ್ರತೀಕಾರ ತೀರಿಸಲು ಹಿಂದೆ ಸರಿಯಲ್ಲ: ಆಪರೇಷನ್ ಸಿಂಧೂರಕ್ಕೆ ದ್ರೌಪದಿ ಮುರ್ಮು ಮೆಚ್ಚುಗೆ

Public TV
By Public TV
8 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?