Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆ, ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ: ಅಮಿತ್‌ ಶಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆ, ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ: ಅಮಿತ್‌ ಶಾ

Latest

ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆ, ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ: ಅಮಿತ್‌ ಶಾ

Public TV
Last updated: October 11, 2021 9:20 pm
Public TV
Share
2 Min Read
amith shah 1
SHARE

ನವದೆಹಲಿ: ಶಿಕ್ಷಣ ಪಡೆಯದ ಜನರು ದೇಶದ ಹೊರೆಯಾಗುತ್ತಾರೆ. ಅನಕ್ಷರಸ್ಥರು ಭಾರತದ ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಸದ್‌ ಟಿವಿಗೆ ಅಮಿತ್‌ ಶಾ ಸಂದರ್ಶನ ನೀಡಿದರು. ಈ ವೇಳೆ ಮೊದಲು ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ನಂತರ ಭಾರತದ ಪ್ರಧಾನಿಯಾಗಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಪ್ರಸ್ತುತ ಸರ್ಕಾರವು ಯಾವ ರೀತಿ ಕ್ರಮ ಕೈಗೊಂಡಿದೆ ಎಂಬುದರ ಕುರಿತು ಶಾ ಮಾತನಾಡಿದರು.

pm modi amit shah

ನೀವು ಸಾಕ್ಷರತೆಯನ್ನು ಮೌಲ್ಯಮಾಪನ ಮಾಡಿದಾಗ ಒಂದು ರಾಷ್ಟ್ರದ ಪ್ರಗತಿಗೆ ಅದರ ಕೊಡುಗೆ ಏನೆಂದು ನಿಮಗೆ ತಿಳಿಯುತ್ತದೆ. ಅನಕ್ಷರಸ್ಥ ವ್ಯಕ್ತಿ ದೇಶಕ್ಕೆ ಹೊರೆ. ಆತನಿಗೆ ಸಂವಿಧಾನ ನೀಡಿದ ಹಕ್ಕುಗಳು ತಿಳಿಯುವುದಿಲ್ಲ. ಅಥವಾ ಆತನಿಗೆ ಮಾಡಬೇಕಾದ ಕರ್ತವ್ಯಗಳು ಗೊತ್ತಿರುವುದಿಲ್ಲ. ಅಂತಹ ವ್ಯಕ್ತಿಯು ಉತ್ತಮ ಪ್ರಜೆ ಹೇಗೆ ಆಗುತ್ತಾನೆ ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಮುಖ್ಯಮಂತ್ರಿ ಅವಧಿಯ ಬಗ್ಗೆ ಪ್ರಸ್ತಾಪ ಮಾಡಿದ ಅವರು, ಆ ಸಮಯದಲ್ಲಿ ಗುಜರಾತ್‌ ಶಾಲೆಗಳಲ್ಲಿ ಡ್ರಾಪ್‌ಔಟ್‌ ಅತಿ ದೊಡ್ಡ ಸಮಸ್ಯೆಯಾಗಿತ್ತು. ಮೋದಿಯವರು ಒಂದು ಹಬ್ಬದಂತೆಯೇ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದರು ಮತ್ತು ಅದನ್ನು ಶೇ.100ಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಪೋಷಕರ ಸಮಿತಿಯನ್ನು ರಚಿಸಿದರು. ಒಂದು ವೇಳೆ ವಿದ್ಯಾರ್ಥಿ ಶಾಲೆಗೆ ಬರದಿದ್ದರೆ ಆ ವಿದ್ಯಾರ್ಥಿಯ ಬಗ್ಗೆ ಯೋಚಿಸಲಾಯಿತು. ಶಿಕ್ಷಕರಿಗೂ ಜವಾಬ್ದಾರಿಯನ್ನು ನೀಡಲಾಯಿತು. ಈ ಎಲ್ಲ ಕ್ರಮಗಳಿಂದ ಡ್ರಾಪ್ಔಟ್ ದರವು ಶೇ.37% ರಿಂದ ಈಗ ಶೇ.1ಕ್ಕಿಂತಲೂ ಕಡಿಮೆಯಾಗಿದೆ ಎಂದರು.

ಮೋದಿ ಒಬ್ಬ ನಿರಂಕುಶ ನಾಯಕ ಎಂಬ ಆರೋಪಗಳನ್ನು ತಿರಸ್ಕರಿಸಿದ ಅಮಿತ್‌ ಶಾ, ಪ್ರಧಾನಮಂತ್ರಿಯವರು ತಮ್ಮ ಹುದ್ದೆ ಅಥವಾ ಶ್ರೇಣಿಯನ್ನು ಲೆಕ್ಕಿಸದೇ ಯಾರೇ ನೀಡಿದ ಎಲ್ಲ ಯೋಗ್ಯ ಸಲಹೆಗಳನ್ನು ಸ್ವೀಕರಿಸುತ್ತಾರೆ. ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ನಿರ್ಧಾರಗಳಿಗಾಗಿ ರಾಜಕೀಯ ಅಪಾಯಗಳನ್ನು ತೆಗೆದುಕೊಳ್ಳಲು ಮೋದಿ ಎಂದಿಗೂ ಹಿಂಜರಿಯಲಿಲ್ಲ ಎಂದು ಅವರು ಹೇಳಿದರು.

ನಾನು ಮೋದಿ ಮತ್ತು ಅವರ ಕೆಲಸದ ಶೈಲಿಯನ್ನು ಹತ್ತಿರದಿಂದ ಗಮನಿಸಿದ್ದೇನೆ. ಅವರಂತಹ ತಾಳ್ಮೆಯ ಕೇಳುಗನನ್ನು ನಾನು ನೋಡಿಲ್ಲ. ಸಮಸ್ಯೆ ಏನೇ ಇರಲಿ ಅವರು ಎಲ್ಲರ ಮಾತನ್ನು ಆಲಿಸುತ್ತಾರೆ ಮತ್ತು ಕನಿಷ್ಠ ಮಾತನಾಡುತ್ತಾರೆ. ನಂತರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ – ಸಾಕ್ಷ್ಯ ನೀಡಿ ಸ್ಪಷ್ಟನೆ ನೀಡಿದ ಸುಧಾಕರ್

Modi Shah

ಪಕ್ಷದ ಬೆಂಬಲಿಗರಿಗೆ ವಿರುದ್ಧವಾಗಬಹುದು ಎಂದು ಗೊತ್ತಿದ್ದರೂ ರಾಷ್ಟ್ರ ಮತ್ತು ಜನರ ಹಿತಾಸಕ್ತಿಗಾಗಿ ಕಠಿಣ ಮತ್ತು ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮೋದಿ ಹಿಂಜರಿಯುವುದಿಲ್ಲ. ಕಪ್ಪುಹಣ ನಿಯಂತ್ರಣ, ತೆರಿಗೆ ವಂಚನೆಯ ಎಲ್ಲ ಲೋಪದೋಷಗಳ ತಡೆದು ಆರ್ಥಿಕ ಸುಧಾರಣೆ ಮಾಡುವ ವೇಳೆ ಕೆಲವು ವರ್ಷಗಳಿಂದ ನಮಗೆ ಮತ ಹಾಕಿದವರು ಸೇರಿದಂತೆ ಕೆಲವರು ತೊಂದರೆ ಅನುಭವಿಸುತ್ತಾರೆ. ಹಾಗಿದ್ದರೂ ಮೋದಿ ಇದರಿಂದ ಏನೂ ಪ್ರಯೋಜನ ಪಡೆಯುವುದಿಲ್ಲ. ಈ ಕಠಿಣ ಕ್ರಮದಿಂದ ಅಂತಿಮವಾಗಿ ದೇಶಕ್ಕೆ ಪ್ರಯೋಜನವಾಗಲಿದೆ ಎನ್ನುವುದನ್ನು ಜನರು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು.

ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಶಾ, ನಮ್ಮ ವೈಫಲ್ಯಗಳನ್ನು ಜನರಿಗೆ ಬಹಿರಂಗಪಡಿಸಿ ಆದರೆ ರಾಜಕೀಯ ಗುಣಮಟ್ಟವನ್ನು ಕಡಿಮೆ ಮಾಡಿ ವೈಯಕ್ತಿಕ ದಾಳಿಯನ್ನು ನಡೆಸುವುದು ಸರಿಯಲ್ಲ ಎಂದರು.

TAGGED:Amit Shahbjpindiakannada newsnarendra modiಅನಕ್ಷರತೆಅಮಿತ್ ಶಾನರೇಂದ್ರ ಮೋದಿಬಿಜೆಪಿಭಾರತ
Share This Article
Facebook Whatsapp Whatsapp Telegram

Cinema news

Kavya
BBK 12 | ಧ್ರುವಂತ್‌ ಔಟ್‌ – Top 6 ಸ್ಪರ್ಧಿಯಾಗಿ ಕಾವ್ಯ ಸೇಫ್‌
Cinema Latest Main Post TV Shows
Shri Mahadev
ಅಮೂಲ್ಯ ನಟನೆಯ ಪೀಕಬೂ ಚಿತ್ರಕ್ಕೆ ಶ್ರೀರಾಮ್ ಹೀರೋ
Cinema Latest Sandalwood Top Stories
bigg boss 1
Bigg Boss: ಇಂದು ಮಿಡ್‌ ವೀಕ್‌ ಎಲಿಮಿನೇಷನ್‌ – ಮನೆಯಿಂದ ಹೊರ ಹೋಗೋದ್ಯಾರು?
Cinema Latest Top Stories TV Shows
Mango Pachcha Movie
ಮ್ಯಾಂಗೋ ಪಚ್ಚ ಸಿನಿಮಾದ ಅರಗಿಣಿಯೇ ಹಾಡಿಗೆ ಕಿಚ್ಚನ ಪುತ್ರಿಯ ಧ್ವನಿ
Cinema Latest Sandalwood Top Stories

You Might Also Like

Siddharamananda Swamiji of Kanakaguru Peetha Kaginele passes away
Districts

ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ ವಿಧಿವಶ

Public TV
By Public TV
6 minutes ago
Sankranti KR Market
Bengaluru City

ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ – ಕೆ.ಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು

Public TV
By Public TV
31 minutes ago
Makar Sankranti 2026 Why did Bhishma leave his body on Uttarayana
Bengaluru City

ಮಕರ ಸಂಕ್ರಾಂತಿ – ಉತ್ತರಾಯಣದಲ್ಲೇ ಭೀಷ್ಮ ದೇಹ ತ್ಯಜಿಸಿದ್ದು ಯಾಕೆ?

Public TV
By Public TV
33 minutes ago
daily horoscope dina bhavishya
Astrology

ದಿನ ಭವಿಷ್ಯ 15-01-2026

Public TV
By Public TV
1 hour ago
Shakuntala Nataraj 3
Court

ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

Public TV
By Public TV
9 hours ago
Mandya
Districts

ನಾಗಮಂಗಲ | ಬಗರ್‌ ಹುಕುಂನಲ್ಲಿ ಕೋಟಿ‌ ಕೋಟಿ ಅವ್ಯವಹಾರ; 11 ಅಧಿಕಾರಿಗಳ ವಿರುದ್ಧ FIR

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?