Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಿಷನ್ 123 ಜೆಡಿಎಸ್‌ನ ಛಲ- ಕುಮಾರಸ್ವಾಮಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಿಷನ್ 123 ಜೆಡಿಎಸ್‌ನ ಛಲ- ಕುಮಾರಸ್ವಾಮಿ

Bengaluru City

ಮಿಷನ್ 123 ಜೆಡಿಎಸ್‌ನ ಛಲ- ಕುಮಾರಸ್ವಾಮಿ

Public TV
Last updated: September 30, 2021 8:49 pm
Public TV
Share
3 Min Read
HDK
SHARE

ಬೆಂಗಳೂರು: ಮಿಷನ್ 123 ಎನ್ನುವುದು ನಮ್ಮ ಗುರಿ ಮಾತ್ರವಲ್ಲ, ಛಲವೂ ಹೌದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.‌ ಬಿಡದಿಯ ತೋಟದಲ್ಲಿ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಾಗಾರದ ನಾಲ್ಕನೇ ದಿನ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಿಗದಿತ ಗುರಿ ಮುಟ್ಟಲು 224 ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇವೆ ಎಂದರು.

ಜನತೆಗೆ ನಾವು ವಾಗ್ದಾನ ಮಾಡುತ್ತಿರುವ ಪಂಚರತ್ನ ಕಾರ್ಯಕ್ರಮಗಳ ಮಾಹಿತಿಯನ್ನು ಮನೆ ಮನೆಗೂ ತಲುಪಿಸಲಾಗುವುದು. ಈ ನಿಟ್ಟಿನಲ್ಲಿ ಜೆಡಿಎಸ್ ಪರಿವಾರ ಮುಂದಿನ ಹದಿನೇಳು ತಿಂಗಳ ಕಾಲ ರಾಜ್ಯದ ಉದ್ದಗಲಕ್ಕೂ ಅವಿಶ್ರಾಂತವಾಗಿ ಕೆಲಸ ಮಾಡಲಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

JDS flag 760x400 medium

ಜೆಡಿಎಸ್‌ ಸದಸ್ಯತ್ವಕ್ಕೆ App..!: ಜನರ ಮನ – ಮನೆ ಮುಟ್ಟುವ ನಿಟ್ಟಿನಲ್ಲೇ ಈಗಾಗಲೇ ಎಲ್ಲ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧ ಮಾಡಿಕೊಂಡಿದ್ದೇವೆ. ಮುಖ್ಯವಾಗಿ ಹೊಸ ತಲೆಮಾರಿನ ಯುವಜನರಿಗೆ ಪಕ್ಷದ ಬಗ್ಗೆ ವಿಶ್ವಾಸ ತುಂಬುವ ಪ್ರಯತ್ನವನ್ನು ದೊಡ್ಡ ಮಟ್ಟದಲ್ಲಿ ಮಾಡಲಾಗುವುದು. ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಪಕ್ಷದ ಸದಸ್ಯತ್ವ ಪಡೆಯಲು ಯಾರೂ ಎಲ್ಲೂ ಹೋಗಬೇಕಿಲ್ಲ. ಇದ್ದ ಜಾಗದಲ್ಲಿಯೇ ಸದಸ್ಯತ್ವ ಪಡೆಯಲು ಆ್ಯಪ್ ಸಿದ್ಧ ಮಾಡಲಾಗುತ್ತಿದೆ. ಆದಷ್ಟು ಬೇಗ ಈ ಆ್ಯಪ್ ಬಳಕೆಗೆ ಸಿಗಲಿದೆ. ಯಾರು ನಮ್ಮ ಪಕ್ಷದ ಸದಸ್ಯರಾಗುತ್ತರೋ ಅವರ ಕುಟುಂಬಕ್ಕೆ ಐಡೆಂಟಿಟಿ‌ ಕಾರ್ಡ್ ಕೊಡುತ್ತೇವೆ. ಇದಕ್ಕೆಲ್ಲ ಆಧುನಿಕ ತಂತ್ರಜ್ಞಾನ ಉಪಯೋಗಿಸುತ್ತೇವೆ. ಹೀಗೆ ಸದಸ್ಯತ್ವ ಪಡೆದವರಿಗೆ ಸದಸ್ಯರ ನಿಧಿ ಸೌಲಭ್ಯ ಇಡಲಾಗುತ್ತದೆ. ಉತ್ತಮವಾಗಿ ಓದುವ ಸದಸ್ಯರ ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತೇವೆ. ಅಲ್ಲದೆ ಸದಸ್ಯರ ಮನೆಯಲ್ಲಿ ಸಮಸ್ಯೆ, ಅವಘಡಗಳಾದರೆ ಅಂತವರಿಗೂ ಆರ್ಥಿಕ‌ ನೆರವು ಕೊಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ನಿಖಿಲ್-ಪ್ರಜ್ವಲ್ – ಪಕ್ಷ ಕಟ್ಟಲು ಪಣತೊಟ್ಟ ಸಹೋದರರು

NIKHIL AND PRAJWAL bengaluru 6

ಅಭ್ಯರ್ಥಿಯಾಗ ಬಯಸುವವರಿಗೆ 3 ತಿಂಗಳ ಗಡುವು: ಇನ್ನು ಮುಂದೆ ಪಕ್ಷದ ಎಲ್ಲಾ ಘಟಕಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತವೆ. ಹೊಸಬರನ್ನು ಪಕ್ಷಕ್ಕೆ ಕರೆತರುವುದು ಇರಬಹುದು ಅಥವಾ ಮನವೊಲಿಕೆ ಇರಬಹುದು. ಇವೆಲ್ಲವೂ ನಿತ್ಯ ಕಾರ್ಯಕ್ರಮ ಆಗಬೇಕು. ಪ್ರತಿ ಜಿಲ್ಲೆಯಲ್ಲೂ ಪಕ್ಷದ ವ್ಯವಸ್ತೆಯನ್ನು ಚುರುಕು ಮಾಡುತ್ತೇವೆ. ಯುವಕರಿಗೆ ಜವಾಬ್ದಾರಿ ನೀಡುತ್ತಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ನಾಲ್ಕು ದಿನದ ಕಾರ್ಯಗಾರದಿಂದ ಪಕ್ಷದ ನಾಯಕರಲ್ಲಿ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ಎಲ್ಲರಿಗೂ ಗೆಲ್ಲಲೇ ಬೇಕೆಂಬ ಛಲ ಬಂದಿದೆ. ಅಭ್ಯರ್ಥಿಗಳಾಗಬೇಕು ಎಂದು ಗುರುತಿಸಲಾಗಿರುವ ಎಲ್ಲರಿಗೂ ಮೂರು ತಿಂಗಳ ಗಡುವು ನೀಡಲಾಗಿದೆ. ನಾವು ಶಾಸಕರಾಗಬೇಕು ಅಂತ ಹುಮ್ಮಸ್ಸು ಅವರಿಗೆ ಬಂದಿದೆ. ಯುವ ಜನತಾದಳದ ಕಾರ್ಯಕ್ರಮದಲ್ಲೂ ಹುಮ್ಮಸ್ಸು ನೋಡ್ತಾ ಇದ್ದೇವೆ ಎಂದು ವಿವರಿಸಿದರು.

NIKHIL AND PRAJWAL bengaluru 4

ನಿಖಿಲ್‌ – ಪ್ರಜ್ವಲ್‌ ಜೊತೆ ಜೊತೆಯಲಿ.!: ಪಂಚರತ್ನ ಕಾರ್ಯಕ್ರಮ ತರಲು ತೀರ್ಮಾನ ಮಾಡಿರುವುದು, ಆ ಬಗ್ಗೆ ನಾಲ್ಕೂ ದಿನ ಮಾಹಿತಿ ನೀಡಿದ್ದೇನೆ. ಇದನ್ನು ಜನತೆ ಮುಂದೆ ತೆಗೆದುಕೊಂಡು‌ ಹೋದರೆ ಜನತೆ ನಮಗೆ ಬೆಂಬಲ ನೀಡ್ತಾರೆ ಅನ್ನುವ ಭರವಸೆ ಇದೆ ಎಂದ ಕುಮಾರಸ್ವಾಮಿ, ಪ್ರತಿ ತಾಲೂಕು, ಹೋಬಳಿ, ಹಳ್ಳಿ ಮಟ್ಟದಲ್ಲೂ ಕಾರ್ಯಕ್ರಮ ಮಾಡುತ್ತೇವೆ ಅಂತ ತಿಳಿಸಿದರು. ಇದಕ್ಕೆ ಪೂರಕವಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಅವರಿಬ್ಬರೂ ಜೊತೆಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ಯುವ ಪಡೆ ಕಟ್ಟಲು ಹೇಳಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಸಾಲ ಮನ್ನಾ ಮಾಡಿ – ಹೆಚ್‍ಡಿಕೆಗೆ ಪತ್ನಿ ಅನಿತಾ ಸಲಹೆ

NIKHIL AND PRAJWAL bengaluru 5

ಈಗಾಗಲೇ ನೀರಾವರಿ ಯೋಜನೆಗಳ ಬಗ್ಗೆಯೂ ಪಕ್ಷದ ಕಾರ್ಯಗಾರದಲ್ಲಿ ಚರ್ಚೆ ಮಾಡಿದ್ದೇವೆ. ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ ಸಮಗ್ರ ಅಭಿವೃದ್ಧಿ ಬಗ್ಗೆ ನಮ್ಮದೇ ಪರಿಕಲ್ಪನೆ ಇದೆ. ನೀರಾವರಿ ಯೋಜನೆಗಳು ಎಂದರೆ ಹಣ ಲೂಟಿ ಹೊಡೆಯುವ ಯೋಜನೆಗಳು ಅಲ್ಲ ಅಂತ ವಿಪಕ್ಷಗಳಿಗೆ ತಿರುಗೇಟು ಕೊಟ್ಟರು. ಮುಂದಿನ ಚುನಾವಣೆಯಲ್ಲಿ ಕೊನೆ ಪಕ್ಷ 30-35 ಮಹಿಳೆಯರಿಗೆ ಅವಕಾಶ ನೀಡಬೇಕು ಎಂದುಕೊಂಡಿದ್ದೇವೆ. ಹಾಗೆಯೇ ಯುವಕರಿಗೆ 25% ಟಿಕೆಟ್ ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಆ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

TAGGED:hd kumaraswamyJDS AppJDS Mission 123nikhil kumaraswamyprajwal revannaಎಚ್‌.ಡಿ. ಕುಮಾರಸ್ವಾಮಿಜೆಡಿಎಸ್‌ ಆ್ಯಪ್ಜೆಡಿಎಸ್‌ ಮಿಷನ್‌ 123ನಿಖಿಲ್ ಕುಮಾರಸ್ವಾಮಿಪ್ರಜ್ವಲ್ ರೇವಣ್ಣ
Share This Article
Facebook Whatsapp Whatsapp Telegram

Cinema news

Gilli nata Super Hit Kannada Movie Teaser released 1
ಗಿಲ್ಲಿ ನಟ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಟೀಸರ್ ಬಿಡುಗಡೆ!
Cinema Latest Sandalwood Top Stories
Radhika Narayan Ramesh Aravind Daiji team in Kashi 1
ಕಾಶಿಯಲ್ಲಿ ರಮೇಶ್ ಅರವಿಂದ್ ನಟನೆಯ ದೈಜಿ ಟೀಮ್
Cinema Latest TV Shows
First Salary Movie
ಪವನ್ ವೆಂಕಟೇಶ್ ನಿರ್ದೇಶನದಲ್ಲಿ ಮೂಡಿಬಂತು ಫಸ್ಟ್ ಸ್ಯಾಲರಿ
Cinema Latest Sandalwood Top Stories
Samudra Manthana
ಸಮುದ್ರ ಮಂಥನ ಶೂಟಿಂಗ್ ಮುಕ್ತಾಯ: ಸಚಿನ್ ಶೆಟ್ಟಿ ನಿರ್ದೇಶನದ ಚಿತ್ರ
Cinema Latest Sandalwood

You Might Also Like

PM Office Seva Teerth
Latest

ಪ್ರಧಾನಿ ಕಚೇರಿ ಇನ್ಮುಂದೆ ಸೇವಾ ತೀರ್ಥ; ರಾಜಭವನಗಳಿಗೆ ಲೋಕಭವನ ಎಂದು ಮರುನಾಮಕರಣ ಮಾಡಿದ ಕೇಂದ್ರ

Public TV
By Public TV
12 minutes ago
Narendra Modi Putin
Latest

ಪುಟಿನ್ – ಮೋದಿ ನಡುವೆ ದ್ವಿಪಕ್ಷೀಯ ಮಾತುಕತೆ: ರಕ್ಷಣಾ ಒಪ್ಪಂದಗಳ ಬಗ್ಗೆ ಚರ್ಚೆ

Public TV
By Public TV
17 minutes ago
Bengaluru Kempegowda International Airport 4
Bengaluru City

8 ನಿಮಿಷಕ್ಕಿಂತ ಹೆಚ್ಚು ಹೊತ್ತು ವಾಹನ ನಿಲ್ಲಿಸಿದ್ರೆ ದಂಡ – ಏರ್‌ಪೋರ್ಟ್‌ನಲ್ಲಿ ಪಿಕಪ್ ಮಾಡುವ ಕ್ಯಾಬ್, ಖಾಸಗಿ ವಾಹನಗಳಿಗೆ ರೂಲ್ಸ್

Public TV
By Public TV
36 minutes ago
kea
Bengaluru City

ಪಿಜಿ ಆಯುಷ್ 3ನೇ ಸುತ್ತಿನ ಸೀಟು ಹಂಚಿಕೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ: ಕೆಇಎ

Public TV
By Public TV
52 minutes ago
Magadi Balakrishna
Bengaluru City

ಕಾಂಗ್ರೆಸ್ ಹೈಕಮಾಂಡ್ ಸ್ಟ್ರಾಂಗ್ ಇದೆ, ಎಲ್ಲಾ ಗೊಂದಲ ಪರಿಹಾರ ಮಾಡುತ್ತೆ: ಬಾಲಕೃಷ್ಣ

Public TV
By Public TV
1 hour ago
kea
Bengaluru City

UG AYUSH 3ನೇ ಸ್ಟ್ರೇ ವೇಕೆನ್ಸಿ ಸುತ್ತಿನ ಅರ್ಜಿ ಸಲ್ಲಿಸಲು ಅವಕಾಶ – ಕೆಇಎ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?