Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Bengaluru City

ಮಿಷನ್ 123 ಜೆಡಿಎಸ್‌ನ ಛಲ- ಕುಮಾರಸ್ವಾಮಿ

Public TV
Last updated: September 30, 2021 8:49 pm
Public TV
Share
3 Min Read
HDK
SHARE

ಬೆಂಗಳೂರು: ಮಿಷನ್ 123 ಎನ್ನುವುದು ನಮ್ಮ ಗುರಿ ಮಾತ್ರವಲ್ಲ, ಛಲವೂ ಹೌದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.‌ ಬಿಡದಿಯ ತೋಟದಲ್ಲಿ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಾಗಾರದ ನಾಲ್ಕನೇ ದಿನ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಿಗದಿತ ಗುರಿ ಮುಟ್ಟಲು 224 ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇವೆ ಎಂದರು.

ಜನತೆಗೆ ನಾವು ವಾಗ್ದಾನ ಮಾಡುತ್ತಿರುವ ಪಂಚರತ್ನ ಕಾರ್ಯಕ್ರಮಗಳ ಮಾಹಿತಿಯನ್ನು ಮನೆ ಮನೆಗೂ ತಲುಪಿಸಲಾಗುವುದು. ಈ ನಿಟ್ಟಿನಲ್ಲಿ ಜೆಡಿಎಸ್ ಪರಿವಾರ ಮುಂದಿನ ಹದಿನೇಳು ತಿಂಗಳ ಕಾಲ ರಾಜ್ಯದ ಉದ್ದಗಲಕ್ಕೂ ಅವಿಶ್ರಾಂತವಾಗಿ ಕೆಲಸ ಮಾಡಲಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

JDS flag 760x400 medium

ಜೆಡಿಎಸ್‌ ಸದಸ್ಯತ್ವಕ್ಕೆ App..!: ಜನರ ಮನ – ಮನೆ ಮುಟ್ಟುವ ನಿಟ್ಟಿನಲ್ಲೇ ಈಗಾಗಲೇ ಎಲ್ಲ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧ ಮಾಡಿಕೊಂಡಿದ್ದೇವೆ. ಮುಖ್ಯವಾಗಿ ಹೊಸ ತಲೆಮಾರಿನ ಯುವಜನರಿಗೆ ಪಕ್ಷದ ಬಗ್ಗೆ ವಿಶ್ವಾಸ ತುಂಬುವ ಪ್ರಯತ್ನವನ್ನು ದೊಡ್ಡ ಮಟ್ಟದಲ್ಲಿ ಮಾಡಲಾಗುವುದು. ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಪಕ್ಷದ ಸದಸ್ಯತ್ವ ಪಡೆಯಲು ಯಾರೂ ಎಲ್ಲೂ ಹೋಗಬೇಕಿಲ್ಲ. ಇದ್ದ ಜಾಗದಲ್ಲಿಯೇ ಸದಸ್ಯತ್ವ ಪಡೆಯಲು ಆ್ಯಪ್ ಸಿದ್ಧ ಮಾಡಲಾಗುತ್ತಿದೆ. ಆದಷ್ಟು ಬೇಗ ಈ ಆ್ಯಪ್ ಬಳಕೆಗೆ ಸಿಗಲಿದೆ. ಯಾರು ನಮ್ಮ ಪಕ್ಷದ ಸದಸ್ಯರಾಗುತ್ತರೋ ಅವರ ಕುಟುಂಬಕ್ಕೆ ಐಡೆಂಟಿಟಿ‌ ಕಾರ್ಡ್ ಕೊಡುತ್ತೇವೆ. ಇದಕ್ಕೆಲ್ಲ ಆಧುನಿಕ ತಂತ್ರಜ್ಞಾನ ಉಪಯೋಗಿಸುತ್ತೇವೆ. ಹೀಗೆ ಸದಸ್ಯತ್ವ ಪಡೆದವರಿಗೆ ಸದಸ್ಯರ ನಿಧಿ ಸೌಲಭ್ಯ ಇಡಲಾಗುತ್ತದೆ. ಉತ್ತಮವಾಗಿ ಓದುವ ಸದಸ್ಯರ ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತೇವೆ. ಅಲ್ಲದೆ ಸದಸ್ಯರ ಮನೆಯಲ್ಲಿ ಸಮಸ್ಯೆ, ಅವಘಡಗಳಾದರೆ ಅಂತವರಿಗೂ ಆರ್ಥಿಕ‌ ನೆರವು ಕೊಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ನಿಖಿಲ್-ಪ್ರಜ್ವಲ್ – ಪಕ್ಷ ಕಟ್ಟಲು ಪಣತೊಟ್ಟ ಸಹೋದರರು

NIKHIL AND PRAJWAL bengaluru 6

ಅಭ್ಯರ್ಥಿಯಾಗ ಬಯಸುವವರಿಗೆ 3 ತಿಂಗಳ ಗಡುವು: ಇನ್ನು ಮುಂದೆ ಪಕ್ಷದ ಎಲ್ಲಾ ಘಟಕಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತವೆ. ಹೊಸಬರನ್ನು ಪಕ್ಷಕ್ಕೆ ಕರೆತರುವುದು ಇರಬಹುದು ಅಥವಾ ಮನವೊಲಿಕೆ ಇರಬಹುದು. ಇವೆಲ್ಲವೂ ನಿತ್ಯ ಕಾರ್ಯಕ್ರಮ ಆಗಬೇಕು. ಪ್ರತಿ ಜಿಲ್ಲೆಯಲ್ಲೂ ಪಕ್ಷದ ವ್ಯವಸ್ತೆಯನ್ನು ಚುರುಕು ಮಾಡುತ್ತೇವೆ. ಯುವಕರಿಗೆ ಜವಾಬ್ದಾರಿ ನೀಡುತ್ತಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ನಾಲ್ಕು ದಿನದ ಕಾರ್ಯಗಾರದಿಂದ ಪಕ್ಷದ ನಾಯಕರಲ್ಲಿ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ಎಲ್ಲರಿಗೂ ಗೆಲ್ಲಲೇ ಬೇಕೆಂಬ ಛಲ ಬಂದಿದೆ. ಅಭ್ಯರ್ಥಿಗಳಾಗಬೇಕು ಎಂದು ಗುರುತಿಸಲಾಗಿರುವ ಎಲ್ಲರಿಗೂ ಮೂರು ತಿಂಗಳ ಗಡುವು ನೀಡಲಾಗಿದೆ. ನಾವು ಶಾಸಕರಾಗಬೇಕು ಅಂತ ಹುಮ್ಮಸ್ಸು ಅವರಿಗೆ ಬಂದಿದೆ. ಯುವ ಜನತಾದಳದ ಕಾರ್ಯಕ್ರಮದಲ್ಲೂ ಹುಮ್ಮಸ್ಸು ನೋಡ್ತಾ ಇದ್ದೇವೆ ಎಂದು ವಿವರಿಸಿದರು.

NIKHIL AND PRAJWAL bengaluru 4

ನಿಖಿಲ್‌ – ಪ್ರಜ್ವಲ್‌ ಜೊತೆ ಜೊತೆಯಲಿ.!: ಪಂಚರತ್ನ ಕಾರ್ಯಕ್ರಮ ತರಲು ತೀರ್ಮಾನ ಮಾಡಿರುವುದು, ಆ ಬಗ್ಗೆ ನಾಲ್ಕೂ ದಿನ ಮಾಹಿತಿ ನೀಡಿದ್ದೇನೆ. ಇದನ್ನು ಜನತೆ ಮುಂದೆ ತೆಗೆದುಕೊಂಡು‌ ಹೋದರೆ ಜನತೆ ನಮಗೆ ಬೆಂಬಲ ನೀಡ್ತಾರೆ ಅನ್ನುವ ಭರವಸೆ ಇದೆ ಎಂದ ಕುಮಾರಸ್ವಾಮಿ, ಪ್ರತಿ ತಾಲೂಕು, ಹೋಬಳಿ, ಹಳ್ಳಿ ಮಟ್ಟದಲ್ಲೂ ಕಾರ್ಯಕ್ರಮ ಮಾಡುತ್ತೇವೆ ಅಂತ ತಿಳಿಸಿದರು. ಇದಕ್ಕೆ ಪೂರಕವಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಅವರಿಬ್ಬರೂ ಜೊತೆಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ಯುವ ಪಡೆ ಕಟ್ಟಲು ಹೇಳಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಸಾಲ ಮನ್ನಾ ಮಾಡಿ – ಹೆಚ್‍ಡಿಕೆಗೆ ಪತ್ನಿ ಅನಿತಾ ಸಲಹೆ

NIKHIL AND PRAJWAL bengaluru 5

ಈಗಾಗಲೇ ನೀರಾವರಿ ಯೋಜನೆಗಳ ಬಗ್ಗೆಯೂ ಪಕ್ಷದ ಕಾರ್ಯಗಾರದಲ್ಲಿ ಚರ್ಚೆ ಮಾಡಿದ್ದೇವೆ. ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ ಸಮಗ್ರ ಅಭಿವೃದ್ಧಿ ಬಗ್ಗೆ ನಮ್ಮದೇ ಪರಿಕಲ್ಪನೆ ಇದೆ. ನೀರಾವರಿ ಯೋಜನೆಗಳು ಎಂದರೆ ಹಣ ಲೂಟಿ ಹೊಡೆಯುವ ಯೋಜನೆಗಳು ಅಲ್ಲ ಅಂತ ವಿಪಕ್ಷಗಳಿಗೆ ತಿರುಗೇಟು ಕೊಟ್ಟರು. ಮುಂದಿನ ಚುನಾವಣೆಯಲ್ಲಿ ಕೊನೆ ಪಕ್ಷ 30-35 ಮಹಿಳೆಯರಿಗೆ ಅವಕಾಶ ನೀಡಬೇಕು ಎಂದುಕೊಂಡಿದ್ದೇವೆ. ಹಾಗೆಯೇ ಯುವಕರಿಗೆ 25% ಟಿಕೆಟ್ ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಆ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

TAGGED:hd kumaraswamyJDS AppJDS Mission 123nikhil kumaraswamyprajwal revannaಎಚ್‌.ಡಿ. ಕುಮಾರಸ್ವಾಮಿಜೆಡಿಎಸ್‌ ಆ್ಯಪ್ಜೆಡಿಎಸ್‌ ಮಿಷನ್‌ 123ನಿಖಿಲ್ ಕುಮಾರಸ್ವಾಮಿಪ್ರಜ್ವಲ್ ರೇವಣ್ಣ
Share This Article
Facebook Whatsapp Whatsapp Telegram

Cinema Updates

chaithra kundapura 1 3
ಫೈರ್ ಬ್ರ್ಯಾಂಡ್‌ ಚೈತ್ರಾ ಮನೆಗೆ ಮಂಜು ಭೇಟಿ- ನವಜೋಡಿಗೆ ವಿಶೇಷ ಉಡುಗೊರೆ ಕೊಟ್ಟ ನಟ
4 hours ago
vasuki vaibhav
ಮೊದಲ ಮಗುವಿನ ನಿರೀಕ್ಷೆಯಲ್ಲಿ ಗಾಯಕ ವಾಸುಕಿ ವೈಭವ್ ದಂಪತಿ
5 hours ago
salman khan
ಭಾರತ-ಪಾಕ್ ಕದನ ವಿರಾಮಕ್ಕೆ ಸಲ್ಮಾನ್ ಖಾನ್ ಖುಷಿ; ಟೀಕೆ ಬೆನ್ನಲ್ಲೇ ಪೋಸ್ಟ್ ಡಿಲೀಟ್
6 hours ago
ranjith kumar
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ರಂಜಿತ್
7 hours ago

You Might Also Like

PAF
Latest

ಭಾರತೀಯ ಕ್ರೂಸ್ ಕ್ಷಿಪಣಿಗಳಿಂದ ಪಾಕ್ ವಾಯುನೆಲೆಗಳು ಧ್ವಂಸ – ಸೇನೆಯಿಂದ ಸಾಕ್ಷಿ ರಿಲೀಸ್‌

Public TV
By Public TV
36 seconds ago
Ramalinga Reddy 1
Districts

ಕದನ ವಿರಾಮದ ಬಗ್ಗೆ ಸಮಾಧಾನ ಇಲ್ಲ, ಪಾಕಿಸ್ತಾನಕ್ಕೆ ಇನ್ನೂ ಬುದ್ಧಿ ಕಲಿಸಬೇಕಾಗಿತ್ತು: ರಾಮಲಿಂಗಾ ರೆಡ್ಡಿ

Public TV
By Public TV
40 minutes ago
A.N.Pramod Vice Admiral
Latest

ಪಾಕ್‌ ಮತ್ತೆ ಬಾಲ ಬಿಚ್ಚಿದ್ರೆ ನಾವೇನು ಮಾಡ್ತೀವಿ ಅಂತ ಅವರಿಗೆ ಗೊತ್ತಾಗಿದೆ: ನೌಕಾ ಪಡೆ ಎಚ್ಚರಿಕೆ

Public TV
By Public TV
42 minutes ago
BSF Soldier Deepak Chimngakham copy
Latest

ಜಮ್ಮು ಗಡಿಯಲ್ಲಿ ಪಾಕ್‌ ಗುಂಡಿನ ದಾಳಿ – ಗಂಭೀರ ಗಾಯಗೊಂಡಿದ್ದ BSF ಯೋಧ ಹುತಾತ್ಮ

Public TV
By Public TV
46 minutes ago
Lieutenant General Rajiv Ghai press meet
Latest

ಪಾಕ್‌ನ 35-40 ಸೈನಿಕರು ಬಲಿ – ಆಪರೇಷನ್‌ ಸಿಂಧೂರ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಇಂಡಿಯನ್‌ ಆರ್ಮಿ

Public TV
By Public TV
2 hours ago
DGMO Pressmeet Operation Sindoor
Latest

ಪಾಕ್ ಜೊತೆಗಿನ ಸಂಘರ್ಷದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ: ಭಾರತೀಯ ಸೇನೆ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Welcome Back!

Sign in to your account

Username or Email Address
Password

Lost your password?