ಮಹಿಳೆಯರಿಗೆ ಬಳೆ ತೊಡಿಸಿದ ಪರಮೇಶ್ವರ್

Public TV
1 Min Read
tmk parameshwar

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಹಿಳೆಯರಿಗೆ ಬಳೆ ತೊಡಿಸಿ ಸಂಭ್ರಮಿಸಿದರು.

ಗ್ರಾಮದಲ್ಲಿ ನಡೆದ ಮಾರಮ್ಮ ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಪರಮೇಶ್ವರ್, ಅಲ್ಲಿ ನೆರೆದಿದ್ದ ಮಹಿಳೆಯರಿಗೆ ಬಳೆ ಕೊಡಿಸಿ, ಅಣ್ಣನ ಸ್ಥಾನ ತುಂಬಿದರು. ಅಲ್ಲದೆ ತಾವೇ ತಮ್ಮ ಕೈಯಾರೆ ಬಳೆ ತೊಡಿಸಿ ಸಂತಸಪಟ್ಟರು. ಮಾಜಿ ಉಪ ಮುಖ್ಯಮಂತ್ರಿಯೊಬ್ಬರು ಅಣ್ಣನಾಗಿ ಬಳೆ ತೊಡಿಸಿದ್ದಕ್ಕೆ ಗ್ರಾಮದ ಮಹಿಳೆಯರು ಸಂತೋಷ ವ್ಯಕ್ತಪಡಿಸಿದರು.

tmk parameshwar 2 3

ಇಡಿ ದಾಳಿಯ ಕಾರಣ ಗೊತ್ತಿಲ್ಲ
ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ದಾಳಿ ನಡೆದಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಕೇಂದ್ರ ಸರ್ಕಾರ ಮೊದಲಿನಿಂದಲೂ ಇಡಿ, ಸಿಬಿಐ, ಐಟಿಯನ್ನು ಬಳಕೆ ಮಾಡಿಕೊಳ್ಳುತ್ತದೆ ಎಂದು ಹೇಳುತ್ತ ಬಂದಿದ್ದೇವೆ. ಹೀಗಾಗಿ ಯಾವ ಉದ್ದೇಶಕ್ಕಾಗಿ ದಾಳಿ ನಡೆದಿದೆ ಎಂದು ಗೊತ್ತಿಲ್ಲ, ಅವರೂ ಸ್ಪಷ್ಟಪಡಿಸಿಲ್ಲ. ಮುಂದಿನ ದಿನಗಳಲ್ಲಿ ಯಾವ ಆಧಾರದ ಮೇಲೆ ದಾಳಿ ಮಾಡಿದರು ಎಂಬುದನ್ನು ತಿಳಿಸಲಿದ್ದಾರೆ. ಐಎಂಎ ಕೇಸ್ ಲಿಂಕ್ ಇರುವ ಆಧಾರದ ಮೇಲೆ ದಾಳಿ ಮಾಡಿದ್ದೇನೆ ಎಂದು ಅವರು ಹೇಳಿಲ್ಲ ಎಂದರು.

tmk parameshwar 2 2

ಇದೇ ವೇಳೆ ರಾಜ್ಯದ ನೂತನ ಸಚಿವ ಸಂಪುಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪುಟದಲ್ಲಿ ಅನುಭವಿಗಳ ಕೊರತೆಯಿದ್ದು, ತಪ್ಪು ಮಾಡಿದರೆ ತಿದ್ದುವವರಿಲ್ಲದ ಸಂಪುಟ ರಚನೆಯಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *