ಮೈಸೂರು: ಕಳೆದ ಎರಡು ದಿನಗಳಿಂದ ನಗರದ ಉತ್ತನಹಳ್ಳಿಯ ಮಹಿಳೆ ನಾಪತ್ತೆಯಾಗಿದ್ದು, ಚಿರತೆ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.
ಉತ್ತನಹಳ್ಳಿಯ ಆಡಿನ ತೋಟದ ಬಳಿ ಕುರಿ ಮೇಯಿಸಲು ಹೋಗಿದ್ದ ಮಹಿಳೆ, ರಾತ್ರಿಯಾದರೂ ಮನೆಗೆ ವಾಪಾಸಾಗಿಲ್ಲ. ಅನುಮಾನಗೊಂಡ ಗ್ರಾಮಸ್ಥರು, ಮಹಿಳೆಗೆ ಹುಡುಕಾಟ ನಡೆಸಿದ್ದು, ಇನ್ನೂ ಪತ್ತೆಯಾಗಿಲ್ಲ. ಮೊನ್ನೆಯಿಂದ ನಾಪತ್ತೆಯಾಗಿದ್ದು, ಇನ್ನೂ ಸಿಕ್ಕಿಲ್ಲ. ಮಹಿಳೆಯ ಹುಡುಕಾಟದಲ್ಲಿ ಗ್ರಾಮಸ್ಥರು ತೊಡಗಿದ್ದು, ಚಿರತೆ ಹೊತ್ತೊಯ್ದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಗ್ರಾಮದಲ್ಲಿ ಚಿರತೆ ಕಾಟ ಹೆಚ್ಚಾಗಿತ್ತು, ಒಂದು ಚಿರತೆಯನ್ನು ಸಹ ಸೆರೆ ಹಿಡಿಯಲಾಗಿತ್ತು. ಇತ್ತೀಚೆಗೆ ಗ್ರಾಮದ ಸುತ್ತಮುತ್ತ ಚಿರತೆ ಓಡಾಟ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಇದೀಗ ಮಹಿಳೆ ಕಾಣೆಯಾಗಿರುವುದರಿಂದ ಆತಂಕ ಇನ್ನೂ ಹೆಚ್ಚಿದೆ.