ತಂಗಿಯನ್ನು ಪ್ರೀತಿಸಿದ್ದಕ್ಕೆ ಕತ್ತು ಕೂಯ್ದು ಕೊಂದ

Public TV
1 Min Read
murder 1

ಭೋಪಾಲ್: ತಂಗಿಯನ್ನು ಪ್ರೀತಿಸಿದ ಕಾರಣಕ್ಕೆ ಗೆಳೆಯನ ಕತ್ತು ಕೂಯ್ದು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕಿಶನ್ ನಿಹಾನಾ(22) ಎಂದು ಗುರುತಿಸಲಾಗಿದೆ. ಯುವಕನ ಮೃತದೇಹ ರಕ್ತದ ಮಡುವಿನಲ್ಲಿ ಪೊಲೀಸರಿಗೆ ಪತ್ತೆಯಾಗಿದ್ದು, ಯುವಕನನ್ನು ಆರೋಪಿ ಕತ್ತು ಕೂಯ್ದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಈ ಘಟನೆಯು ಲುಸಾಡಿಯಾ ಪೊಲೀಸ್ ಠಾಣೆಯ ನಿರಂಜಂಜಪುರದಲ್ಲಿ ಜರುಗಿದೆ.

True Love 1024x626 1

ಈ ಕುರಿತಂತೆ ತನಿಖೆ ವೇಳೆ, ಮೃತ ಯುವಕನ ಕುಟುಂಬಸ್ಥರು, 2 ದಿನಗಳ ಹಿಂದೆ ಕಿಶನ್ ಸ್ನೇಹಿತ ಅನಿಲ್ ಪಾಂಚಲ್ ಎಂಬಾತ ಕರೆ ಮಾಡಿದ್ದನು. ಆತನನ್ನು ಭೇಟಿ ಮಾಡಲು ಹೋದ ಕಿಶನ್ ಮಧ್ಯರಾತ್ರಿಯಾದರೂ ಮನೆಗೆ ಹಿಂದಿರುಗದಿದ್ದಾಗ, ಗಾಬರಿಗೊಂಡು ಮನೆಯವರು ದೂರು ದಾಖಲಿಸಿದರು. ಅಲ್ಲದೆ ಕಿಶನ್ ಕಾಣೆಯಾದಗನಿಂದ ಅನಿಲ್ ಹಾಗೂ ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

police web

ಈ ಮಧ್ಯೆ ದಾರಿಹೋಕರೊಬ್ಬರು ಮೃತದೇಹ ಪತ್ತೆಯಾಗಿರುವ ವಿಚಾರವಾಗಿ ಪೊಲೀಸರಿಗೆ ತಡ ರಾತ್ರಿ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ದೇಹವನ್ನು ಕಿಶನ್ ಎಂದು ಗುರುತಿಸಿ ಎಂವಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಿದರು.

ಘಟನೆ ವಿಚಾರವಾಗಿ ಮಾತನಾಡಿದ ಪೊಲೀಸರು, ಕಿಶನ್ ಸ್ನೇಹಿತ ಅನಿಲ್ ಪಂಚಲ್ ಸಹೋದರಿಯನ್ನು ಪ್ರೀತಿಸುತ್ತಿದ್ದನು. ಈ ವಿಚಾರ ತಿಳಿದ ಅನಿಲ್ ನಿರ್ಜನ ಪ್ರದೇಶಕ್ಕೆ ಕಿಶನ್‍ನನ್ನು ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಘಟನೆ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶೀಘ್ರವೇ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗುತ್ತದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *