ಗ್ರಾ.ಪಂ ಚುಕ್ಕಾಣಿಗೆ ಜೆಡಿಎಸ್‍ನಿಂದ ಖಾಲಿ ಚೆಕ್ ಅಸ್ತ್ರ ಪ್ರಯೋಗ?

Public TV
1 Min Read
FotoJet 2 1

– ಜೆಡಿಎಸ್ ಶಾಸಕರ ಮೇಲೆ ಗಂಭೀರ ಆರೋಪ

ಮಂಡ್ಯ: ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುಕ್ಕಾಣಿ ಹಿಡಿಯಲು ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಖಾಲಿ ಚೆಕ್ ಅಸ್ತ್ರವನ್ನು ಪ್ರಯೋಗ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.

tammanna web

ಮದ್ದೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಯ ಚುಕ್ಕಾಣಿಯನ್ನು ಜೆಡಿಎಸ್ ಪಡೆಯಲು ಬೇರೆ ಪಕ್ಷದ ಬೆಂಬಲಿತ ಗ್ರಾಮಪಂಚಾಯತಿ ಸದಸ್ಯರ ಬಳಿ ಶಾಸಕ ತಮ್ಮಣ್ಣ ಅವರು ಖಾಲಿ ಚೆಕ್‍ಗೆ ಹಾಗೂ ಪ್ರನೋಟ್‍ಗೆ ಸಹಿ ಹಾಕಿಸಿಕೊಂಡಿದ್ದಾರೆ. ಬೇರೆ ಪಕ್ಷದಲ್ಲಿ ಇದ್ದ ಗ್ರಾಮಪಂಚಾಯತಿ ಸದಸ್ಯರು ಇದೀಗ ಜೆಡಿಎಸ್ ಸೇರಲು ಮದ್ದೂರು ಕ್ಷೇತ್ರದಲ್ಲಿ ಮುಂದಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

tammanna web 1

ಬೇರೆ ಕ್ಷೇತ್ರದಿಂದ ಜೆಡಿಎಸ್‍ಗೆ ಬಂದ ಸದಸ್ಯರ ಬಳಿ ತಮ್ಮಣ್ಣ ಅವರು ಖಾಲಿ ಚೆಕ್‍ಗೆ ಹಾಗೂ ಪ್ರನೋಟ್‍ಗೆ ಸಹಿ ಹಾಕಿಸಿಕೊಂಡು ಪಕ್ಷ ಸೇರ್ಪಡೆ ಮಾಡಿಕೊಂಡಿದ್ದಾರೆ. ಜೊತೆಗೆ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಬೆಂಬಲಿಸುವಂತೆ ಸೇರ್ಪಡೆಗೊಂಡಿರುವ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

ಶಾಸಕ ಡಿ.ಸಿ.ತಮ್ಮಣ್ಣ ಅವರು ಚೆಕ್‍ಗೆ ಹಾಗೂ ಪ್ರನೋಟ್‍ಗೆ ಸಹಿ ಹಾಕಿಸಿಕೊಳ್ಳುವುದು ಮತ್ತು ಅವರನ್ನು ಜೆಡಿಎಸ್‍ಗೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *