ಕಾರುಗಳ ನಡುವೆ ಡಿಕ್ಕಿ – ಸ್ಥಳದಲ್ಲೇ ಇಬ್ಬರ ದುರ್ಮರಣ, 8 ಮಂದಿಗೆ ಗಂಭೀರ ಗಾಯ

Public TV
0 Min Read
car 1

ಚಿತ್ರದುರ್ಗ: ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, 8 ಮಂದಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೊಮ್ಮನಪಟ್ಟಿ ಬಳಿ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿ ನಡೆದಿದೆ.

car

ಮೃತರನ್ನು ವನಜಾಕ್ಷಿ(36), ಮಹೇಂದ್ರ(50) ಎಂದು ಗುರುತಿಸಲಾಗಿದೆ. ಮಾರುತಿ ಕಾರಲ್ಲಿದ್ದ ವನಜಾಕ್ಷಿ ಅವರು ಬೆಂಗಳೂರು ಮೂಲದವರು. ಇನ್ನು ಹುಂಡೈ ಕಾರಲ್ಲಿ ಚಿತ್ರದುರ್ಗ ಮೂಲದ ಮಹೇಂದ್ರ ಇದ್ದರು. ಇನ್ನು ಘಟನೆಯಲ್ಲಿ ಎಂಟು ಮಂದಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಮೊಳಕಾಲ್ಮೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

car 2

ಮೊಳಕಾಲ್ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *