ರಾಜ್ಯದಲ್ಲಿ ವರುಣನ ಅಬ್ಬರ – ಮುಂದಿನ 2 ದಿನ ಮಳೆ ಸಾಧ್ಯತೆ

Public TV
1 Min Read
Rain

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆರಾಯನ ಅಬ್ಬರ ಮುಂದುವರಿದಿದೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದ್ಲೂ ಮೊಡ ಕವಿದ ವಾತಾವರಣ ಇತ್ತು. ಸಂಜೆ ಮಳೆ ಸುರಿದು, ಕೆಲ ಕಾಲ ಜೀವನ ಅಸ್ತವ್ಯಸ್ತ ಆಗಿತ್ತು.

Rain 2

ದೀಪಾವಳಿ ಸಂಭ್ರಮದಲ್ಲಿದ್ದ ಸಿಲಿಕಾನ್ ಸಿಟಿ ಮಂದಿಯ ಪಟಾಕಿ ಹೊಡೆಯೋದಕ್ಕೂ ತಣ್ಣೀರು ಎರಚಿತು. ಇನ್ನು ಸಂಜೆ ದೇವಸ್ಥಾನ, ಪಾರ್ಕ್, ಮಾಲ್ ಎಂದು ಸುತ್ತಲೂ ಹೋಗಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡುವಂತಾಗಿತ್ತು. ಮಧ್ಯಾಹ್ನದಿಂದು ನಗರದಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರೋ ಮಳೆಗೆ ರಸ್ತೆ ಬದಿ ವ್ಯಾಪಾರಿಗಳು, ಹೂ-ಹಣ್ಣು ಮಾರಾಟಗಾರರು ಸುಸ್ತಾದರು.

Rain 1

ರಾಜ್ಯದಲ್ಲಿ ಇನ್ನೂ ಮುಂದಿನ 2 ದಿನ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆ ಆರ್ಭಟವಿರಲಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇದ್ದು, ಮಳೆಯಾಗೋ ಸಂಭವ ಇದೆ ಅಂತ ಪಬ್ಲಿಕ್ ಟಿವಿಗೆ ನೈಸರ್ಗಿಕ ವಿಕೋಪ ನಿರ್ದೇಶನಾಲಯ ಮಾಹಿತಿ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *